Sunday, September 8, 2024

Latest Posts

ಅಂದು ಧ್ರುವ ಸರ್ಜಾ…ಇಂದು ಕಾರುಣ್ಯ ರಾಮ್.. ಏನಿದು..?

- Advertisement -

ಲಾಕ್ ಡೌನ್ ಟೈಮ್ ನಲ್ಲಿ ಕನ್ನಡ ಚಿತ್ರರಂಗದ ಕೆಲ ತಾರೆಯರು ನಿಸ್ವಾರ್ಥ ಸೇವೆ ಮಾಡಿದ್ದರು. ಕೆಲಸವಿಲ್ಲದೇ ಮನೆಯಲ್ಲಿದ್ದ ಬಡವರ ಮನೆ-ಮನೆಗೆ ತೆರಳಿ ದಿನಸಿ ಹಂಚುವ ಕೆಲಸ ಮಾಡಿದ್ದರು. ಈ ಪೈಕಿ ನಟಿ ಕಾರುಣ್ಯ ರಾಮ್ ಕೂಡ ಒಬ್ರು.  ಸದ್ಯ ನೀನಾಸಂ ಸತೀಶ್ ನಟಿಸ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರುಣ್ಯ ಮತ್ತೊಂದು ಒಳ್ಳೆಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕ್ಯಾನರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ

ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗ್ತಿದ್ದಂತೆ ನಟಿ ಕಾರುಣ್ಯ ಕೂದಲಿಗೆ ಕತ್ತರಿಸಿ ಹಾಕಿಸಿದ್ದಾರೆ. ಅರೆ ಅವರ ಕೂದಲಿಗೆ ಕತ್ತರಿ ಹಾಕ್ಸಿದ್ರೆ ಏನ್ರೀ ಒಳ್ಳೆ ಕೆಲಸ ಅಂದ್ರಾ..? ಇಲ್ಲೇ ಇರೋದು ನೋಡಿ ಅಸಲಿ ವಿಷ್ಯ. ಅಷ್ಟಕ್ಕೂ ಕಾರುಣ್ಯ ಕೂದಲು ಕತ್ತರಿಗೆ ಕ್ಯಾನರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಕಾರುಣ್ಯ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕ್ಯಾನರ್ ಪೀಡಿತರಿಗೆ ಸಹಾಯವಾಗಲೆಂದು ಸುಮಾರು 14 ಇಂಚಿನ ತಲೆ ಕೂದಲನ್ನು ಕತ್ತರಿಸಿ ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮೂಲಕ ದಾನ ಮಾಡಿದ್ದಾರೆ. ಈ ವಿಷಯವನ್ನು ಕಾರುಣ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ”2021ರಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದೇ. ಅದರಂತೆ ತನ್ನ 14 ಇಂಚಿನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದೇನೆ. ಇಷ್ಟು ಕೂದಲು ಬೆಳೆಯಬೇಕು ಅಂದ್ರೆ ಕನಿಷ್ಠ ಮೂರು ವರ್ಷ ಬೇಕಾಗುತ್ತದೆ. ನೀವು ಏನಾದರೂ ಒಳ್ಳೆಯ ಕೆಲಸ ಮಾಡಿ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ  ನಟ ಧ್ರುವ ಸರ್ಜಾ ಕಳೆದ ಮೂರು ವರ್ಷಗಳಿಂದ ಪೊಗರು ಸಿನಿಮಾಕ್ಕಾಗಿ ಬಿಟ್ಟದ್ದ ಕೂದಲನ್ನು ಕ್ಯಾನರ್ ರೋಗಿಗಳಿಗೆ ದಾನ ಮಾಡಿದ್ದರು.

- Advertisement -

Latest Posts

Don't Miss