ಆಂದ್ರಪ್ರದೇಶ:
ಸೋಮವಾರದಂದು ದೇಶಾದ್ಯಂತ ಗುರು ಪೌರ್ಣಮಿ ಆಚರಿಸಿದ್ದು ತಮ್ಮ ತಮ್ಮ ಗುರುಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.ಅದೇ ರೀತಿ ಆಂದ್ರಪ್ರದೇಶದಲ್ಲಿ ಒಂದು ಅಹಿತಕರ ಘಟನೆ ನಡೆಯುವ ಮೂಲಕ ದೇಶದೆಲ್ಲೆಡೆ ಸಂಚಲನವನ್ನು ಸೃಷ್ಟಿಸಿದೆ. ಗುರುಪೌರ್ಣಮಿಯಂದು ಸಾಯಿಬಾಬು ದೇವಸ್ಥಾನದಲ್ಲಿ ಎಲ್ಲೆಡೆ ವಿಶೇಷ ಪೋಜೆ ಮಾಡಿದರೆ ಇಲ್ಲಿ ಮಾತ್ರ ದೇವಸ್ಥಾನದಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಬಂದು ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ಬಿಯರ್ ಬಾಟಲಿಗಳಲ್ಲಿ ಪೂಜೆಗೆ ಬೇಕಾಗಿರುವ ಜೇನುತುಪ್ಪ ಮತ್ತು ಇನ್ನಿತರ ಸಾಮಾಗ್ರಿಗಳನ್ನು ತಂದಿದ್ದರು. ಮದ್ಯದ ಬಾಟಲಿಗಳಲ್ಲಿ ತಂದಿದ್ದ ಜೇನುತುಪ್ಪದಿಂದ ಸಾಯಿಬಾಬರಿಗೆ ಅಭಿಷೇಕ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು .ಇನ್ನು ಈ ಘಟನೆ ನಡೆದಿರುವುದು ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಚಂತ ಮಂಡಲದ ವೇಮಾವರಂನಲ್ಲಿರುವ ಸಾಯಿಬಾಬಾ ದೇವಸ್ಥಾನವನ್ನು ಇತ್ತೀಚೆಗೆ ಪುನರ್ನಿರ್ಮಿಸಲಾಗಿತ್ತು.