Sunday, June 1, 2025

Latest Posts

ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಾ..? ಆದರೆ ದರಿದ್ರ ನಿಮ್ಮ ಮನೆಯೊಳಗೆ ಬರುತ್ತದೆ..!

- Advertisement -

vastu tips:

ಸಾಮಾನ್ಯವಾಗಿ ಎಲ್ಲರು ತಮ್ಮ ಮನೆಯಲ್ಲಿ ಅಭ್ಯಾಸವಾಗಿ ಕೆಲವು ಕೆಲಸಗಳನ್ನು ಮಾಡುತ್ತಾರೆ. ಮತ್ತು ಆ ಕೆಲಸಗಳು ದರಿದ್ರ ದೇವತೆಯನ್ನು ಆಹ್ವಾನಿಸಿದಂತಾಗುತ್ತದೆ. ಮತ್ತು ಮನೆಯಲ್ಲಿ ವಾಸಿಸುವ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಇಂತಹ ಕೆಲಸಗಳನ್ನು ಮಾಡಬಾರದೆಂದು ಸೂಚಿಸಲಾಗಿದೆ. ಈಗ ದರಿದ್ರಕ್ಕೆ ಕಾರಣವಾಗುವ ಅನೇಕ ವಿಷಯಗಳ ಬಗ್ಗೆ ನಾವು ತಿಳಿಯೋಣ.

ಊಟ ಮಾಡುವಾಗ ಈ ಕೆಲಸಗಳನ್ನು ಮಾಡಿದರೆ ದರಿದ್ರ:
ಊಟ ಮಾಡುವಾಗ ಬೆರಳುಗಳನ್ನು ನೆಕ್ಕುತ್ತಿರುತ್ತಾರೆ, ಇನ್ನು ಕೆಲವರು ಊಟ ಮಾಡುವಾಗ ಗಲಾಟೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅನ್ನದ ಉಂಡೆಗಳನ್ನು ಮಾಡಿ ಬಾಯಿಗೆ ಎಸೆದು ಹಿಡಿದು ತಿನ್ನುತ್ತಾರೆ. ಈ ಕೆಲಸಗಳು ಒಳ್ಳೆಯದಲ್ಲ ಇದು ದರಿದ್ರವನ್ನು ತರುತ್ತದೆ ಎನ್ನುತ್ತಾರೆ ವಾಸ್ತುಶಾಸ್ತ್ರ ತಜ್ಞರು. ಇಂತಹ ಕೆಲಸಗಳನ್ನು ಮಾಡಿದರೆ ಅನ್ನಪೂರ್ಣ ದೇವಿ ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿದ್ದವರಿಗೆ ಅನ್ನ ಸಿಗದಂತಹ ಅಪಾಯವಿದೆ ಎಂದು ಹೇಳಲಾಗುತ್ತದೆ.

ಈ ಕೆಲಸಗಳನ್ನು ಮಾಡುತ್ತಿದ್ದೀರಾ..? ಆದರೆ ಅದನ್ನು ತಪ್ಪಿಸಿ:
ಬಹಳ ಜನರು ಹಲ್ಲುಗಳನ್ನು ಕಡಿಯುವುದು ಅಭ್ಯಾಸ ಮಾಡಿಕೊಳ್ಳುತ್ತಿರುತ್ತಾರೆ ಹಾಗೂ ಸುಮ್ಮನೆ ಆದರೂ ಸಹ ಟೂತ್ ಪಿಕ್ ಇಂದ ಹಲ್ಲುಗಳನ್ನು ಚುಚ್ಚುತೀರುತ್ತಾರೆ. ಉಗುರುಗಳನ್ನು ಕಚ್ಚುವುದು ಮತ್ತು ಎಲ್ಲಿ ಬಿದ್ದರೆ ಅಲ್ಲಿ ಎಂಜಲು ಉಗುಳುವುದು ಮಾಡುತ್ತಿರುತ್ತಾರೆ. ಅದು ಒಳ್ಳೇದಲ್ಲ ಎನ್ನಲಾಗುತ್ತದೆ. ಹುಬ್ಬು ಕತ್ತರಿಸುವುದು ಮತ್ತು ಎದೆಯ ಮೇಲಿನ ಕೂದಲು ಕತ್ತರಿಸುವುದು ಮಧ್ಯಾಹ್ನದ ಸಮಯದಲ್ಲಿ ಸ್ನಾನ ಮಾಡುವುದು ತಪ್ಪಿಸಿ ಇಲ್ಲದ್ದಿದರೆ ಇದು ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಮಂಗಳ ಸೂತ್ರ ವಿಷಯದಲ್ಲಿ ಈ ಕೆಲಸಗಳನ್ನು ಮಾಡಬೇಡಿ:
ಮಹಿಳೆಯರು ಮಂಗಳಸೂತ್ರಗಳ ಮೇಲೆ ಪಿನ್ಗಳನ್ನು ಹಾಕಬೇಡಿ , ಮಂಗಳಸೂತ್ರವು ಅತಿ ಪವಿತ್ರ ವಾಗಿರುವುದು ಕೆಲವು ಹೆಂಗಸರು ಮಂಗಳಸೂತ್ರವನ್ನು ಬಿದ್ದಲ್ಲೆಲ್ಲ ಎಸೆಯುತ್ತಾರೆ. ಇಂತಹ ಚಟಗಳಿಂದ ದೂರವಿರದ್ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವಾಸ್ತು ತಜ್ಞರು .

ಈ ಅಭ್ಯಾಸಗಳನ್ನು ಬದಲಾಯಿಸದಿದ್ದರೆ, ಗಂಭೀರ ಪರಿಣಾಮಗಳು ಉಂಟಾಗುತ್ತವೆ:
ಅನೇಕರು ಸುಮ್ಮನೆ ಕುಳಿತುಕೊಂಡಾಗ ಕಾಲು ಬೀಸುತ್ತಿರುತ್ತಾರೆ ಅದು ತುಂಬಾ ಕೆಟ್ಟ ಅಬ್ಯಾಸ್ಯ. ಕೆಲವರು ಟೀ ಕಾಫಿ ಕುಡಿಯುವಾಗ ಒಂದು ರೀತಿಯ ಶಬ್ದ ಮಾಡುತ್ತಾರೆ, ಈ ಶಬ್ದಗಳು ಬಡತನವನ್ನೂ ತರುತ್ತವೆ ಎಂದು ಹೇಳಲಾಗುತ್ತದೆ. ಮತ್ತು ಮನೆಯಲ್ಲಿ ಪೂಜೆಯ ಸಮಯದಲ್ಲಿಯೂ ಸಹ, ಕೆಲವರು ಪೂಜೆಗಾಗಿ ಒಂದೇ ಬತ್ತಿಯನ್ನು ಬೆಳಗಿಸುತ್ತಾರೆ. ಅದು ಒಳ್ಳೇದಲ್ಲ ಎನ್ನಲಾಗುತ್ತದೆ. ದೀಪವನ್ನು ಬಾಯಿಂದ ಊದುವುದು ಒಳ್ಳೆಯದಲ್ಲ ಎಂಬ ಮಾತಿದೆ. ಅಂತಹ ಗುಣಲಕ್ಷಣಗಳಿದ್ದರೆ ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ, ಅವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಯಾವ ಹೋಮದಿಂದ ಯಾವ ಫಲಿತಾಂಶ ಸಿಗುತ್ತದೆ ಗೊತ್ತೇ..?

ಈ ಪರಿಹಾರಗಳಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ..!

ನಿಮ್ಮ ಜಾತಕದಲ್ಲಿ ದೋಷ ನಿವಾರಣೆಗೆ ನವಗ್ರಹ ಸ್ತೋತ್ರಗಳನ್ನು ಪಠಿಸಿ…!

 

- Advertisement -

Latest Posts

Don't Miss