Cricket News: ಭಾರತ ಕ್ರಿಕೇಟ್ ತಂಡದ ಬೌಲರ್ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ಪ್ರಶಸ್ತಿಯನ್ನು ಮೊಹಮ್ಮದ್ ಶಮಿಗೆ ಕೊಟ್ಟು, ಅಭಿನಂದಿಸಿದ್ದಾರೆ.
ಅರ್ಜುನ ಪ್ರಶಸ್ತಿ ದೇಶದ 2ನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿದ್ದು, ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಮಿ ಪ್ರಶಸ್ತಿ ಸ್ವೀಕರಿಸಿದ್ದಾರೆ. 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಕಾರಣಕ್ಕಾಗಿ ಬಿಸಿಸಿಐ, ಶಮಿಗೆ ಅರ್ಜುನ ಪ್ರಶಸ್ತಿ ಸಿಗಬೇಕು ಎಂದು ಶಿಫಾರಸ್ಸು ಮಾಡಿತ್ತು. ಹೀಗಾಗಿ ಇಂದು ಶಮಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರಿಕೇಟ್ ಸೇರಿ, ಖೋಖೋ, ಕಬ್ಬಡ್ಡಿ, ಆರ್ಚರಿ, ಲಾನ್ ಬಾಲ್, ಶೂಟಿಂಗ್, ಗಾಲ್ಫ, ಹಾಕಿ, ಚೆಸ್, ಬಾಕ್ಸಿಂಗ್ ಸೇರಿ ಇನ್ನೂ ಅನೇಕ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದವರಿಗೆ, ಅರ್ಜುನ ಪ್ರಶಸ್ತಿ ಲಭಿಸಿದೆ.
ಲೋಕಸಭಾ ಚುನಾವಣೆ ಸಲುವಾಗಿ ಬಿಜೆಪಿ ರಾಮಮಂದಿರ ಗಿಮಿಕ್: ಮಮತಾ ಬ್ಯಾನರ್ಜಿ