ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾತುರದಿಂದ ಕಾಯುತ್ತಿದ್ದು, ಇದೀಗ ಫಲಿತಾಂಶ ಬಂದಿದ್ದು, ಹೆಚ್ಚು ಮತ ಪಡೆಯುವುದರ ಮೂಲಕ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್, ಲಕ್ಷ್ಮಣ ಸವದಿ, ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ನಾಯಕರು ಗೆಲುವನ್ನ ಸಾಧಿಸಿದ್ದಾರೆ. 113 ಮ್ಯಾಜಿಕ್ ನಂಬರ್ ಆಗಿದ್ದು, ಕಾಂಗ್ರೆಸ 120ಕ್ಕೂ ಹೆಚ್ಚು ಮತಗಳನ್ನ ಗಳಿಸಿ, ಮತ್ತೊಮ್ಮೆ ಸರ್ಕಾರ ರಚಿಸಲು ಸಿದ್ಧವಾಗಿದೆ.
ಬೆಂಗಳೂರು ನಗರದಲ್ಲಿ 11 ಕ್ಷೇತ್ರ ಕಾಂಗ್ರೆಸ್ ಪಾಲಾದ್ರೆ, 17 ಬಿಜೆಪಿ ಪಾಲಾಗಿದೆ. ದಾವಣಗೆರೆಯಲ್ಲಿ 7 ಕ್ಷೇತ್ರಗಳಿದ್ದು, 5 ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ನಲ್ಲಿ ಕಾಂಗ್ರೆಸ್ ಮತ ಗಳಿಸುವ ಮೂಲಕ, ಗೆಲುವು ಸಾಧಿಸಿದೆ.
My Team 💪#KarnatakaElectionResults2023 pic.twitter.com/gj0DX8C0TV
— DK Shivakumar (@DKShivakumar) May 13, 2023
ಫಲಿತಾಂಶ ಬರುವುದಕ್ಕೂ ಮೊದಲೇ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ