Bengaluru News: ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ, ನಾಲ್ಕೈದು ಜನ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ, ಅಂಗಡಿ ಮಾಲೀಕನಿಗೆ ಆವಾಜ್ ಹಾಕಿದ್ದಾರೆ.
ಈ ಮೂಲಕ ಜಗಳ ಶುರುಮಾಡಿ, ಬಳಿಕ ಕಾಲರ್ ಹಿಡಿದು, ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರೋಹಿತ್, ಸುಲೇಮಾನ್, ಶಹಜಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಗರತ್ ಪೇಟೆಯ ಅಂಗಡಿಯಲ್ಲಿ ವ್ಯಕ್ತಿಯೋರ್ವ ಹನುಮಾನ್ ಚಾಲೀಸಾ ಹಾಾಕಿದ್ದ. ಆಗ ಅಂಗಡಿಗೆ ಬಂದ ಆರು ಜನ, ನಾವು ನಮಾಜ್ ಮಾಡುತ್ತಿದ್ದೇವೆ. ಹಾಡು ಇಷ್ಟು ಜೋರಾಗಿ ಹಾಕಬೇಡ ಎಂದಿದ್ದಾರೆ. ಈ ಮೂಲಕ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಘಟನೆ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ದೂರು ದಾಖಲಿಸಿದ್ದು, ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ.
ಮತಾಂಧರಿಗೆ ಅಭಯ'ಹಸ್ತ' ಇರುವವರೆಗೂ ಅವರ ಆಟಾಟೋಪಕ್ಕೆ ಕಡಿವಾಣ ಇಲ್ಲದಂತಾಗಿದೆ.
ನಮ್ಮ ಬೆಂಗಳೂರಿನ ನಗರತ್ ಪೇಟೆ ಸಿದ್ದಣ್ಣ ಗಲ್ಲಿಯಲ್ಲಿ ಸಂಜೆ ಪೂಜೆಯ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ಮೊಬೈಲ್ ಶಾಪ್ ಒಂದಕ್ಕೆ ನುಗ್ಗಿದ ಮತಾಂಧ ದುಷ್ಕರ್ಮಿಗಳು, ಮುಖೇಶ್ ಎಂಬ… pic.twitter.com/xptCnZz8K9— Preetham J Gowda (ಮೋದಿ ಪರಿವಾರ) (@preethamgowda_j) March 18, 2024
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

