Friday, April 24, 2026

Karnataka Tv

ಒಡಿಶಾಗೆ ₹1 ಕೋಟಿ ನೆರವು ನೀಡಿದ ನಟ ಅಕ್ಷಯ್ ಕುಮಾರ್

ಭುವನೇಶ್ವರ: ಯಮಸ್ವರೂಪಿ ಫೋನಿ ಚಂದಮಾರುತಕ್ಕೆ ಸಿಲುಕಿ ನಲುಕಿಹೋಗಿರೋ ಒಡಿಶಾ ರಾಜ್ಯಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ₹1 ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ರ ಪರಿಹಾರ ನಿಧಿಗೆ ಹಣವನ್ನು ವರ್ಗಾಯಿಸಿದ್ದಾರೆ. ನಟ ಅಕ್ಷಯ್​ ಕುಮಾರ್​ ಈ ರೀತಿ ನೆರವಾಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಕೇರಳ ಹಾಗೂ...

ಕಾರು ಡಿಕ್ಕಿ- ನ್ಯಾಷನಲ್ ಲೆವಲ್ ಹಾಕಿಪಟು ದುರ್ಮರಣ

ಧಾರವಾಡ: ರಸ್ತೆ ದಾಟುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದು ರಾಷ್ಟ್ರಮಟ್ಟದ ಹಾಕಿ ಪ್ಲೇಯರ್ ಸುಜಾತಾ ಕೆರಳ್ಳಿ (೧೭) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಮಾದನಬಾವಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಈ ಅಪಘಾತ ನಡೆದಿದ್ದು ಸುಜಾತಾ ತಮ್ಮತಂದೆಯೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ  ಎಮ್ ಎಚ್ 44 ಎ ಎಲ್  6977 ನಂಬರ್ ನ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ...

ಧೋನಿಗೆ ಪುತ್ರಿಯ ಕಿಡ್ನಾಪ್ ಬೆದರಿಕೆ…!

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನು ಮಗಳು ಜೀವಾ ಕೂಡ ಅಪ್ಪನನ್ನೇ ಮೀರಿಸುವಂತೆ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾಳೆ. ಸದ್ಯ ಹನ್ನೆರಡನೇ ಐಪಿಎಲ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯುದ್ದಕ್ಕೂ  ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಜೀವಾ ಚಿಯರ್ ಮಾಡೋದ್ರ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾಳೆ....

“ಡಿಕೆಶಿಗೆ ಕಾಮನ್ ಸೆನ್ಸ್ ಇಲ್ವಾ..?”

ಹುಬ್ಬಳ್ಳಿ: ಕಾಂಗ್ರೆಸ್ ನ ದಿ ಮೋಸ್ಟ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ಇಂಥಾ ನೂರು ಡಿಕೆಶಿ ಬಂದ್ರೂ ಕುಂದಗೋಳದಲ್ಲಿ ಏನೂ ನಡೆಯೋಲ್ಲವೆಂದ ಶೆಟ್ಟರ್, ಡಿಕೆಶಿಗೆ ಕಾಮನ್ ಸೆನ್ಸ್ ಇಲ್ವಾ ಅಂತ ಟಾಂಗ್ ನೀಡಿದ್ದಾರೆ. ಕುಂದಗೋಳ ಉಪಚುನಾವಣಾ ಕಣದಲ್ಲಿರೋ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ...

‘ಪ್ರಧಾನಿ ಮೋದಿ ದುರ್ಯೋಧನನಂತೆ’- ಪ್ರಿಯಾಂಕಾ ಗಾಂಧಿ ಟೀಕೆ

ಹರಿಯಾಣ:ಲೋಕಸಭೆ ಚುನಾವಣೆಗೆ ಇನ್ನೇನು ತೆರೆ ಬೀಳಲಿದೆ. ಆದ್ರೆ ಈ ಮಧ್ಯೆ ರಾಜಕೀಯ ನಾಯಕರು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ತಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನ ದುರ್ಯೋಧನನಿಗೆ ಹೋಲಿಸಿದ್ದಾರೆ. ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳೋ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ಅಹಂಕಾರದಿಂದ ನಡೆದುಕೊಂಡ ದುರ್ಯೋಧನ. ಆತ ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ,...

ಬೈ ಎಲೆಕ್ಷನ್ ಸೋತ್ರೆ ಮೈತ್ರಿ ಸರ್ಕಾರ ಗುಡ್ ಬೈ..?- ಕಾಂಗ್ರೆಸ್ ನಾಯಕರಿಗೇ ಬಂದಿದೆ ಡೌಟು..!

ಕಲಬುರಗಿ: ಮೇ 23 ರ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರಲ್ವಾ? ಇಂಥಾದ್ದೊಂದು ಡೌಟ್ ಖುದ್ದು ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಯೆಸ್, ಇದೀಗ ರಾಜ್ಯದಲ್ಲಿ ಆಡಳಿತದಲ್ಲಿರೋ ದೋಸ್ತಿ ಸರ್ಕಾರ ಇನ್ನೂ ಹೆಚ್ಚು ಕಾಲ ಇರ್ಬೇಕು ಅಂದ್ರೆ ಉಪ ಚುನಾವಣೆಯಲ್ಲಿ ಎರಡೂ ಸ್ಥಾನವನ್ನೂ ಗೆಲ್ಲಬೇಕು. ಇಲ್ಲದಿದ್ರೆ ಮೈತ್ರಿ ಸರ್ಕಾರ ಪತವಾಗುತ್ತೆ ಅಂತ ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ...

ಬಸವೇಶ್ವರರ ಪ್ರತಿಮೆಗೆ ಸಚಿವ ಡಿ.ಕೆ ಶಿವಕುಮಾರ್ ಮಾಲಾರ್ಪಣೆ

ಸಮಾಜ ಸುಧಾರಕ ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಕುಂದಗೋಳದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿ ಕುಸುಮಾ ಶಿವಳ್ಳಿ, ಶಾಸಕಿ ಸೌಮ್ಯರೆಡ್ಡಿ ಮತ್ತಿತರರು ಸಾಥ್ ನೀಡಿದ್ರು.

ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ- 6,000 ಅಡಿಯಷ್ಟು ದಟ್ಟ ಹೊಗೆ

ಜಕಾರ್ತಾ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಮೌಂಟ್​​ ಸಿನಾಬಂಗ್​​ನಲ್ಲಿ ಇಂದು ಬೆಳಗ್ಗೆ ಮತ್ತೆ ಜ್ವಾಲಾಮುಖಿ ಮುನ್ನೆಚ್ಚರಿಕೆ ಸ್ಫೋಟಿಸಿದೆ. ಇದರಿಂದ ಗಾಳಿಯಲ್ಲಿ ಸುಮಾರು 6,500 ಅಡಿ ಎತ್ತರದಷ್ಟು ದಟ್ಟ ಹೊಗೆ ಆವರಿಸಿದ್ದು, ಸಮೀಪದ ಗ್ರಾಮಗಳೆಲ್ಲಾ ಧೂಳು ಮತ್ತು ಬೂದಿಯಿಂದ ಆವೃತವಾಗಿವೆ. ಜ್ವಾಲಾಮುಖಿಯ ದಟ್ಟ ಹೊಗೆಯಿಂದ ವಿಮಾನ ಹಾರಾಟಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಅಂತ ವಿಪತ್ತು ನಿರ್ವಹಣಾ...

2-3 ದಿನಗಳ ಕಾಲ ರಾಜ್ಯದಲ್ಲಿ ಮಳೆ- ಬೆಂಗಳೂರಲ್ಲೂ ಆಗಲಿದೆ ವರುಣನ ಸಿಂಚನ-ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ಮುಂದಿನ ಎರಡು ಮೂರು‌ ದಿನಗಳ ಕಾಲ ರಾಜ್ಯದ ಕೆಲವೆಡೆ  ಮಳೆಯಾಗೋ ಸಾಧ್ಯತೆ ಇದೆ ಅಂತ  ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾತಾವರಣ ಮತ್ತು ಗಾಳಿಯಲ್ಲಿ ಕಡಿಮೆ ಒತ್ತಡ ನಿರ್ಮಾಣವಾದ ಹಿನ್ನೆಲೆಯಲ್ಲಿ ಮಳೆ ಸುರಿಯಲಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ 2 ದಿನಗಳ ಕಾಲ ಮೋಡ ಕವಿದ ವಾತಾವರಣ ಮತ್ತು ಬೆಂಗಳೂರು ಸೇರಿದಂತೆ ದಕ್ಷಿಣ...

ಸರ್ಕಾರಿ ಆಂಗ್ಲ ಶಾಲೆ ಈ ವರ್ಷವೇ ಶುರು- ಇನ್ಮುಂದೆ ಹುಡುಗ್ರೆಲ್ಲಾ ಫುಲ್ ಇಂಗ್ಲೀಷ್ ಗುರು….

ಬೆಂಗಳೂರು: ಸಾಕಷ್ಟು ವಿರೋಧದ ನಡುವೆ ಇಂಗ್ಲೀಷ್ ಶಾಲೆ ಆರಂಭಿಸಲು ಚಿಂತಿಸಿದ್ದ ಸರ್ಕಾರ ಇದೀಗ ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ಶಾಲೆಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು ಮೇ 13ರೊಳಗೆ ಪಟ್ಟಿ ಪ್ರಕಟವಾಗೋ ಸಾಧ್ಯತೆಯಿದೆ. ಇನ್ನು ಒಂದು ಸಾವಿರ ಸರ್ಕಾರಿ ಇಂಗ್ಲೀಷ್ ಶಾಲೆಗಳನ್ನು ತೆರೆಯೋ ಉದ್ದೇಶ ಹೊಂದಿದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 2 ಶಾಲೆಗಳನ್ನ ಆಯ್ಕೆ ಮಾಡಿಕೊಳ್ಳೋ ಪ್ರಕ್ರಿಯೆಯನ್ನ ಶಿಕ್ಷಣ...

About Me

31877 POSTS
0 COMMENTS
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img