Wednesday, June 18, 2025

Latest Posts

Police- ಬೆಂಡಿಗೇರಿ ಪೊಲೀಸ್ ಠಾಣೆಯ ಪೇದೆ ಆತ್ಮಹತ್ಯೆ

- Advertisement -

ಹುಬ್ಬಳ್ಳಿ: ಏನೋ ಗೊತ್ತಿಲ್ಲ ಹುಬ್ಬಳ್ಳಿ ನಗರಕ್ಕೆ ಬಂದು ಯಮರಾಜ ನೆಲೆಸಿರುವಂತೆ ಕಾಣುತ್ತದೆ ಹಾಗೂ ಶನಿ ಹೆಗಲೇರಿರುವಂತೆ ಕಾಣುತ್ತದೆ. ಇಷ್ಟು ದಿನ ಹುಬ್ಬಳ್ಳಿಯಲ್ಲಿ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿ ಇಡೀ ನಗರವನ್ನೇ ತಲ್ಲಣಗೊಳಿಸಿದ್ದರು ಆದರೆ ಈಗ ರೌಡಿಗಳ ಹೆಡೆ ಮುರಿ ಕಟ್ಟುವ ಪೊಲೀಸರೇ ದಿನಕೊಬ್ಬರಂತೆ ಸಾವಿಗೀಡಾಗುತ್ತಿದ್ದಾರೆ ಮೊನ್ನೆ ಹಿರಿಯ ಪಿಎಸ್ ಐ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ ನಿನ್ನೆ ನವ ಪೋಲಿಸ್ ಪೆಡೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿಯ ಜಿಲ್ಲೆಯ ಸಂಗೊಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ರುದ್ರಾಪೂರ್ (26) ಆತ್ಮಹತ್ಯೆ ಮಾಡಿಕೊಂಡ ಪೇದೆ.ಹುಬ್ಬಳ್ಳಿಯ ಬೆಂಡಿಗೇರಿಯ ದೊಡ್ಡಮನಿ ಕಾಲೋನಿಯಲ್ಲಿ ಆತ್ಮಹತ್ಯೆ ಶರಣಾದ ಮಲ್ಲಿಕಾರ್ಜುನ.ಕಳೆದ 6 ವರ್ಷದಿಂದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ

ವಾಸವಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣು.ಮೂರು ತಿಂಗಳಿಂದ ರಜೆ ಸಿಗದ ಕಾರಣ ಸ್ವಗ್ರಾಮಕ್ಕೂ ತೆರಳದ ಮಲ್ಲಿಕಾರ್ಜುನ.ರಜೆ ಕೇಳಿದ್ರು ನೀಡಿರಲಿಲ್ಲ ಠಾಣೆಯ ಮೇಲಾಧಿಕಾರಿಗಳು.ಅಲ್ಲದೇ ಬೇಕಾಬಿಟ್ಟಿಯಾಗಿ ಕರ್ತವ್ಯ ನಿಯೋಜನೆ.ಹಿರಿಯ ಅಧಿಕಾರಿಗಳ ಕಿರುಕುಳದಿಂದ ಸಾಕಷ್ಟು ಮನನೊಂದಿದ್ದ ಇದರಿಂದಾಗಿ ಆತ್ಮಹತ್ಯೆಯ ದಾರಿ ಹಿಡಿದ ಪೇದೆ ಮಲ್ಲಿಕಾರ್ಜುನ.

ಅಲ್ಲದೇ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ದಾಖಲು ಮಾಡಿಕೊಂಡು ಕೈತೊಳೆದಕೊಂಡ ಬೆಂಡಿಗೇರಿ ಪೊಲೀಸರು‌.ಮಲ್ಲಿಕಾರ್ಜುನ ಯಾವುದೇ ರೋಗದಿಂದ ಬಳಲುತ್ತಿರಲಿಲ್ಲ,ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಸರಿಯಾದ ರೀತಿಯಲ್ಲಿ ತನಿಖೆ ಮಾಡಲಿ.ನಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎನ್ನುತ್ತಿದ್ದಾರೆ ಮಲ್ಲಿಕಾರ್ಜುನ ಕುಟುಂಬಸ್ಥರು

ಪೊಲೀಸ್ ಪೇದೆ ಒಬ್ಬರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ಬೆಂಡಿಗೇರಿಯ ದೊಡ್ಡಮನಿ ಕಾಲೋನಿಯಲ್ಲಿ ನಡೆದಿದೆ. ಸಂಗೊಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ರುದ್ರಾಪೂರ್ ಎಂಬಾತರೇ ತಾವು ವಾಸವಿರುವ ಸ್ಥಳದಲ್ಲಿಯೇ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಕುರಿತಂತೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಮಾಹಿತಿ ತಿಳಿದು‌ ಬರಬೇಕಿದೆ.

Shivaraj Kumar-ಚಿತ್ರರಂಗದ ,ರಾಜಕೀಯ ಗಣ್ಯರಿಂದ ಶಿವಣ್ಣಗೆ ಹುಟ್ಟುಹಬ್ಬದ ಶುಭಾಶಯಗಳು

Samantha : ಸಮಂತಾ ಗೆ ಮತ್ತೆ ಕೈಕೊಟ್ಟ ಆರೋಗ್ಯ…!

MouniRoy : ಪಾಸ್ ಪೋರ್ಟ್​ ಇಲ್ಲದೆ ವಿಮಾನ ಪ್ರಯಾಣಕ್ಕೆ ನಟಿಯ ಯತ್ನ…! ಮುಂದೇನಾಯ್ತು..?!

- Advertisement -

Latest Posts

Don't Miss