Friday, June 20, 2025

Latest Posts

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಏನಾಗತ್ತೆ ಗೊತ್ತಾ..? ಕೇಳಿದ್ರೆ ಆಶ್ಚರ್ಯ ಪಡ್ತೀರಾ..!

- Advertisement -

ಡ್ರೈಫ್ರೂಟ್ಸ್ ಅಂದತಕ್ಷಣ ನಮಗೆ ಬಾದಾಮ್, ಅಖ್ರೂಟ್, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ ಎಲ್ಲವೂ ನೆನಪಾಗುತ್ತದೆ.

ತಿನ್ನಲು ರುಚಿಕರವಾದ, ಆರೋಗ್ಯಕ್ಕೂ ಒಳ್ಳೆಯದಾದ ಆಹಾರ ಅಂದ್ರೆ ಡ್ರೈ ಫ್ರೂಟ್ಸ್. ಕೇಕ್, ಐಸ್‌ಕ್ರೀಮ್, ಪಾಯಸ, ಲಾಡು, ಬರ್ಫಿ ಹೀಗೆ ಅನೇಕ ಡೆಸರ್ಟ್‌ಗಳನ್ನ ತಯಾರಿಸುವಾಗ ಇದರ ಬಳಕೆ ಅಗತ್ಯವಾಗಿರುತ್ತದೆ. ಇಂಥ ಡ್ರೈ ಫ್ರೂಟ್ಸ್ ತಿಂದ್ರೆ ದೇಹಕ್ಕಾಗುವ ಲಾಭಗಳೇನು..? ಯಾವ ಡ್ರೈ ಫ್ರೂಟ್ಸ್ ತಿಂದ್ರೆ ಏನಾಗತ್ತೆ ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ.

1.. ದೇಹದ ತೂಕ ಇಳಿಸಲು ಮತ್ತು ಹೆಚ್ಚಿಸಲು ಒಣಹಣ್ಣುಗಳು ಸಹಕಾರಿಯಾಗಿದೆ. ಬಾದಾಮ್ ಮತ್ತು ಅಖ್ರೂಟ್ ಅಂದ್ರೆ ವಾಲ್ನಟ್ ಸೇವನೆ ತೂಕ ಇಳಿಸಲು ಸಹಕಾರಿಯಾಗಿದೆ. ಇನ್ನು ತೂಕ ಹೆಚ್ಚಿಸಬೇಕು ಅಂದ್ರೆ ಗೋಡಂಬಿ, ಬಾದಾಮನ್ನ ನೀವೂ ಹಾಲಿನೊಂದಿಗೆ ಸೇವಿಸಿ. ಒಣದ್ರಾಕ್ಷಿ, ಖರ್ಜೂರದ ಸೇವನೆ ಮಾಡಬಹುದು. ನಿಮಗೆ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದಾಗ ಒಂದು ಅಂಜೂರ, ಖರ್ಜೂರ, ಒಣದ್ರಾಕ್ಷಿ ತಿನ್ನಿ. ಇದು ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಲಾಭಕಾರಿಯಾಗಿದೆ.

2.. ಗರ್ಭಿಣಿಯರು ಡ್ರೈಫ್ರೂಟ್ಸ್ ಸೇವನೆ ಮಾಡುವುದು ಒಳ್ಳೆಯದು. ಆದ್ರೆ ಒಣಹಣ್ಣಿನ ಸೇವನೆಗೂ ಮೊದಲು ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ದಿನಕ್ಕೆ ಎಷ್ಟು ಡ್ರೈಫ್ರೂಟ್ಸ್ ಸೇವಿಸಬೇಕೆಂದು ಕೇಳುವುದು ಒಳಿತು.

3.. ವಿಟಾಮಿನ, ಮಿನರಲ್ಸ್, ಕ್ಯಾಲ್ಶಿಯಂ ಗುಣಗಳಿಂದ ಭರಪೂರವಾದ ಒಣಹಣ್ಣನ್ನ ಗರ್ಭಿಣಿಯರು ಸೇವಿಸುವುದು, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೆದುಳಿನ ವಿಕಾಸಕ್ಕೆ ಸಹಕಾರಿಯಾಗಲಿದೆ.

4.. ಡಯಾಬಿಟೀಸ್ ಇದ್ದವರು ಬಾದಾಮ್, ವಾಲ್ನಟ್, ಅಂಜೂರವನ್ನ ಸೇವಿಸಬೇಕು. ಈ ಹಣ್ಣುಗಳನ್ನ ಲಿಮಿಟ್‌ನಲ್ಲಿ ತಿಂದರೆ ಇದು ಔಷಧಿಯ ರೀತಿ ಕಾರ್ಯನಿರ್ವಹಿಸುತ್ತದೆ. ಆದ್ರೆ ಒಂದು ವಿಚಾರ ನೆನಪಿನಲ್ಲಿರಲಿ. ನಿಮಗೆ ಡಯಾಬಿಟೀಸ್ ಜೊತೆ ಹೈ ಬಿಪಿ ಇದ್ದರೆ ಬಾದಾಮ್ ಸೇವಿಸುವಾಗ ಅದರ ಸಿಪ್ಪೆ ತೆಗೆದು ತಿನ್ನಬೇಕು.

5.. 6 ತಿಂಗಳ ಬಳಿಕ ಗಟ್ಟಿ ಆಹಾರ ಸೇವಿಸಲು ಮಗು ಸಿದ್ಧವಾಗಿರುತ್ತದೆ. ಈ ವೇಳೆ ಕೊಂಚ ಡ್ರೈಫ್ರೂಟ್ಸ್‌ನ್ನ ನೀಡಬಹುದು. ಒಣಹಣ್ಣುಗಳನ್ನ ಪುಡಿ ಮಾಡಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳ ಶಾರೀರಿಕ ವಿಕಾಸ ಉತ್ತಮವಾಗಿರುತ್ತದೆ.

6.. ಬಾಡಿಬಿಲ್ಡರ್ಸ್‌ಗಳಿಗೆ ಡ್ರೈಫ್ರೂಟ್ಸ್ ಸೇವನೆ ಹೆಚ್ಚಿನ ಲಾಭ ನೀಡುತ್ತದೆ. ಬಾಡಿ ಬಿಲ್ಡ್ ಮಾಡುವವರು ಪ್ರೋಟಿನ್ ಶೇಕ್ ಕುಡಿಯುತ್ತಾರೆ. ಈ ವೇಳೆ ಮಾರುಕಟ್ಟೆಯಲ್ಲಿ ಸಿಗುವ ಪ್ರೋಟಿನ್ ಪೌಡರ ಬದಲಿಗೆ, ಡ್ರೈಫ್ರೂಟ್ಸ್ ಬಳಸಿ ಹಾಲಿನೊಂದಿಗೆ ಸೇವನೆ ಮಾಡುವುದು ಉತ್ತಮ.

7.. ಕೂದಲಿನ ಸೌಂದರ್ಯ ಅಭಿವೃದ್ಧಿ ಮಾಡಬೇಕೆಂದರೆ ಡ್ರೈಫ್ರೂಟ್ಸ್ ಸೇವಿಸಿ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಆದ್ರೆ ಒಣಹಣ್ಣಿನ ಸೇವನೆ ನಿಮ್ಮ ದೇಹಕ್ಕೆ ಒಗ್ಗುತ್ತದೆಯೇ ಎಂದು ತಿಳಿದು ನಂತರ ಡ್ರೈಫ್ರೂಟ್ಸ್ ಸೇವಿಸುವುದು ಉತ್ತಮ. ಕೆಲವರಿಗೆ ಗೋಡಂಬಿ ಸೇವಿಸಿದರೆ ಬಿಳಿಪದರ ಉಂಟಾಗುವ ಸಮಸ್ಯೆ ಇರುತ್ತದೆ, ಇನ್ನು ಕೆಲವರಿಗೆ ದ್ರಾಕ್ಷಿ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚುತ್ತದೆ.

8.. ಡ್ರೈಫ್ರೂಟ್ಸ್‌ನಲ್ಲಿ ಮರೆವಿನ ಖಾಯಿಲೆ ಗುಣಪಡಿಸುವ ಶಕ್ತಿ ಇದೆ. ಆದ್ದರಿಂದಲೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿಯನ್ನು ಸೇವಿಸಲು ಹೇಳುತ್ತಾರೆ.

9.. ಒಣಹಣ್ಣುಗಳನ್ನ ಕರಿದು, ಹುರಿದು, ಬೇಯಿಸಿ, ಉಪ್ಪು-ಖಾರ ಸೇರಿಸಿ ತಿನ್ನುವ ಬದಲು ಹಾಗೆಯೇ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ ಬದಾಮ್ ಸೇವನೆ ಮಾಡುವಾಗ ಅದನ್ನ ನೆನೆಸಿ, ಸಿಪ್ಪೆ ತೆಗೆದು ಸೇವಿಸಿದರೆ ಹೆಚ್ಚಿನ ಲಾಭ ಸಿಗುತ್ತದೆ.

10.. ಅಗತ್ಯಕ್ಕಿಂತ ಹೆಚ್ಚು ಕುಡಿದರೆ ಅಮೃತವೂ ವಿಷವೇ ಎಂಬಂತೆ, ಅಗತ್ಯಕ್ಕಿಂತ ಹೆಚ್ಚು ಒಣಹಣ್ಣಿನ ಸೇವನೆ ಒಳ್ಳೆಯದಲ್ಲ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss