Sunday, September 8, 2024

Latest Posts

ರಾಗಿಯಿಂದಾಗುವ ಲಾಭಗಳೇನು ಅಂತಾ ಕೇಳಿದ್ರೆ ಇನ್ಮೇಲೆ ಪ್ರತಿದಿನ ರಾಗಿ ತಿಂತೀರಾ..!

- Advertisement -

ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ.

ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ.

ಹಾಗಾದ್ರೆ ರಾಗಿ ತಿನ್ನೋಂದ್ರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..

1.. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ, ಅದರಲ್ಲೂ ಓಟದಲ್ಲಿ ಮುಂದಿದ್ದವರು ನಿಯಮಿತವಾಗಿ ರಾಗಿ ಸೇವನೆ ಮಾಡ್ತಾರೆ. ಇದರಿಂದ ದೇಹದಲ್ಲಿನ ಶಕ್ತಿ ಹೆಚ್ಚುತ್ತದೆ.

2.. ಕೆಲ ಮಕ್ಕಳು ಎಷ್ಟು ತಿಂದರೂ ಅಶಕ್ತಿಯುತರಾಗೇ ಇರ್ತಾರೆ. ಅಂಥವರಿಗೆ ರಾಗಿ ತಿನ್ನಲು ಕೊಡಿ. ರಾಗಿ ಮಾಲ್ಟ್, ರಾಗಿ ಲಡ್ಡು, ಟೇಸ್ಟಿ ರಾಗಿ ದೋಸೆ ಮಾಡಿಕೊಡಿ.

3.. ದೇಹದ ತೂಕ ಇಳಿಸುವುದರಲ್ಲಿ ರಾಗಿ ಸಹಕಾರಿಯಾಗಿದೆ. ಫೈಬರ್ ಕಂಟೆಂಟ್ ಇರುವುದರಿಂದ ರಾಗಿ ದೇಹದ ತೂಕ ಇಳಿಸುವುದರಲ್ಲಿ ಉಪಯುಕ್ತವಾಗಿದೆ.

4.. ಮೂಳೆಯ ಆರೋಗ್ಯ ಕಾಪಾಡುವುದರಲ್ಲಿ ರಾಗಿ ಬಳಕೆ ಸಹಕಾರಿಯಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಾಗಿದ್ದು, ಇದು ಮೂಳೆ ಗಟ್ಟಿ ಮಾಡುವುದರಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಮಕ್ಕಳಿಗೆ ರಾಗಿ ತಿನ್ನಲು ನೀಡಬೇಕು.

5.. ಜೀರ್ಣಕ್ರಿಯೆ ಉತ್ತಮಗೊಳ್ಳಬೇಕೆಂದರೆ, ಹೃದಯ ಸಮಸ್ಯೆ ದೂರವಾಗಬೇಕೆಂದರೆ ರಾಗಿ ಸೇವಿಸಬೇಕು.

6.. ರಾಗಿ ಸೇವಿಸಿದರೆ ನಿಮಗೆ ಅಲರ್ಜಿ ಉಂಟಾಗುವುದೋ ಅಥವಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದಾದಲ್ಲಿ ವೈದ್ಯರ ಬಳಿ ತೋರಿಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss