Sunday, September 8, 2024

Latest Posts

ರಾಜಕೀಯ ಗಣ್ಯರನ್ನು ಭೇಟಿಯಾದ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್

- Advertisement -

Movie News: ಬಿಗ್‌ಬಾಸ್ ಕನ್ನಡ ಸೀಸನ್ 10ನೇ ವಿನ್ನರ್ ಕಾರ್ತಿಕ್ ಮಹೇಶ್, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಇದೇ ವೇಳೆ ಬಿಗ್‌ಬಾಸ್ ಟ್ರೋಫಿ ಹಿಡಿದು ರಾಜಕಾರಣಿಗಳ ಜೊತೆ ಕಾರ್ತಿಕ್‌ ಮಹೇಶ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಕಾರ್ತಿಕ್‌ಗೆ ಅಭಿನಂದಿಸಿದ್ದು, ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಕಾರ್ತಿಕ್ ಮಹೇಶ್ ಈ ಮೊದಲು ಸಿನಿಮಾಗಳಲ್ಲಿ. ಸಿರಿಯಲ್‌ಗಳಲ್ಲಿ ನಟಿಸಿದ್ದರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಆದರೆ ಅವರು ಬಿಗ್‌ಬಾಸ್‌ಗೆ ಬಂದ ಬಳಿಕ ಹಲವರ ಮೆಚ್ಚಿನ ಸ್ಪರ್ಧಿಯಾಗಿದ್ದರು. ಮೊದಲು ಸಂಗೀತಾ ಜೊತೆ ಸೇರಿ ಕಾರ್ತಿಕ್ ಸರಿಯಾಗಿ ಟಾಸ್ಕ್ ಆಡುತ್ತಿಲ್ಲವೆಂದು ದೂರುತ್ತಿದ್ದ ಫ್ಯಾನ್ಸ್, ಸಂಗೀತಾ ಸಂಗ ಬಿಟ್ಟು, ಟಾಸ್ಕ್ ಆಡಲು ಶುರು ಮಾಡಿದ ಬಳಿಕ, ಕಾರ್ತಿಕ್‌ಗೆ ಫುಲ್ ಸಪೋರ್ಟ್ ಮಾಡೋಕ್ಕೆ ನಿಂತರು. ಇದೀಗ ಕಾರ್ತಿಕ್ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಬಿಗ್‌ಬಾಸ್ ಮುಗಿದ ಬಳಿಕ ಕಾರ್ತಿಕ್ ಫುಲ್ ಬ್ಯುಸಿಯಾಗಿದ್ದಾರೆ. ಹಲವು ಸಿನಿಮಾ ಸ್ಟಾರ್‌ಗಳನ್ನ ಭೇಟಿಯಾಗಿದ್ದಾರೆ. ಸಂದರ್ಶನಗಳನ್ನು ಕೊಟ್ಟಿದ್ದಾರೆ. ಸಿನಿಮಾ ಪ್ರಮೋಷನ್‌ಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ನಿನ್ನೆಯಷ್ಟೇ ಚಾಮರಾಜನಗರಕ್ಕೆ ಹೋಗಿ, ಅಲ್ಲಿ ಮುದ್ದಿನ ಅಳಿಯನ್ನು ಭೇಟಿ ಮಾಡಿ, ಸಮಯ ಕಳೆದಿದ್ದಾರೆ.

ಇನ್ನು ಕಾರ್ತಿಕ್ ಬ್ಯುಸಿಯಾಗಿರುತ್ತಿದ್ದು, ಅವರ ಅಭಿಮಾನಿಗಳು ಅವರನ್ನು ಭೇಟಿಯಾಗಲು ಅವರ ಮನೆಯ ಬಳಿ ಬಂದು, ನಿರಾಸೆಯಾಗಿ ವಾಪಸ್ ಹೋಗುತ್ತಿದ್ದಾರಂತೆ. ಹಾಗಾಗಿ ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿರುವ ಕಾರ್ತಿಕ್, ನಾನು ಇಲ್ಲದ ಸಮಯದಲ್ಲಿ ನನ್ನನ್ನು ನೋಡಲು ಬಂದು ನಿರಾಶರಾಗಿ ಹೋಗುತ್ತಿದ್ದೀರಿ. ನಿಮ್ಮ ಪ್ರೀತಿಯೇ ನನ್ನನ್ನು ಬ್ಯುಸಿ ಆಗಿರಿಸಿದೆ. ನಿಮಗಾಗಿ ಒಂದು ದಿನ ಮುಡಿಪಾಗಿಸಿರುವೆ. ಅತೀ ಶೀಘ್ರದಲ್ಲಿ ಅನೌನ್ಸ್ ಮಾಡುತ್ತೇನೆ. ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ ಎಂದು ಬರೆದಿದ್ದಾರೆ.

ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ

ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆ

ಅಯೋಧ್ಯೆ ಶ್ರೀರಾಮನ ದರ್ಶನದ ವೇಳೆ ಭಾವುಕರಾದ ಮಾಜಿ ಸಚಿವ ಸಿ.ಟಿ.ರವಿ

- Advertisement -

Latest Posts

Don't Miss