Friday, June 20, 2025

Latest Posts

‘ಉಗ್ರಗಾಮಿ-ನಾಲಾಯಕ್ ಪದ ಬಳಕೆ ವಾಪಸ್ ಪಡೆಯಲಿ..’

- Advertisement -

ಹಾಸನ : ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧವಾಗಿ ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಅವರು ಉಗ್ರಗಾಮಿ-ನಾಲಾಯಕ್ ಪದ ಬಳಕೆ ಮಾಡಿರುವುದು ಖಂಡನೀಯವಾಗಿದ್ದು, ಕೂಡಲೇ ವಾಪಸ್ ಪಡೆಯುವಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಆಗ್ರಹಿಸಿದರು.

​ ​ ​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಸಿ.ಟಿ. ರವಿ ಅವರು ಉತ್ತಮವಾಗಿ ರಾಜಕೀಯ ನಾಯಕರಾಗಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತ್ಯತೀತ ವಿರೋಧಿ ನಡವಳಿಕೆ ಮತ್ತು ಧೋರಣೆಯನ್ನ ಖಂಡಿಸಿ ಸಿಟಿ ರವಿ ಅವರು ಅವರನ್ನು ತೆಗಳಿದ್ದಾರೆ. ಆದರೆ ಓರ್ವ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ನಾಲಾಯಕ್ ಮತ್ತು ಉಗ್ರ ಎಂಬ ಪದ ಬಳಿಸಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ..

ಸಿಟಿ ರವಿ ಅವರು ನಾಲ್ಕು ಬಾರಿ ಶಾಸಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಅವರು ಹಿಂದುತ್ವವನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ರಾಜಕಾರಣದಲ್ಲಿ ಇಂದು ವಿರೋಧಿಗಳ ನಡೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಜೊತೆಗೆ ಅವರ ಅಧಿಕಾರದ ಅವಧಿಯಲ್ಲಿ ಸುಮಾರು ೨೦ ಹಿಂದು ಯುವಕರ ಹತ್ಯೆ ಆದಾಗ ಅವರಿಗೆ ಸಾಂತ್ವಾನ ಹೇಳದೆ ಇರುವುದು ಅವರ ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಎಚ್.ಕೆ. ಮಹೇಶ್ ಅವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಇಲ್ಲವಾದರೆ ಅವರ ವಿರುದ್ಧ ತೀವ್ರ ಸ್ವರೂಪದ  ಪ್ರತಿಭಟನೆ ಮಾಡುವುದಾಗಿ ಇದೆ ವೇಳೆ ಎಚ್ಚರಿಕೆ ಕೊಟ್ಟರು.

‘ರೈಲಿಗೆ ಸಿಲುಕಿ ಕಾಡಾನೆಗಳು ಅಪಘಾತವಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’

​ ​ ​ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ್, ೭ನೇ ವಾರ್ಡಿನ ನಗರಸಭೆ ಸದಸ್ಯ ಸಂತೋಷ್, ಮಹಿಳಾ ಮೋರ್ಚಾದ ಮುಖಂಡರಾದ ರತ್ನಪ್ರಕಾಶ್, ಬಿಜೆಪಿ​ ಯುವ ಮುಖಂಡ ರಘು ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss