Wednesday, June 18, 2025

Latest Posts

ಸರ್ಕಾರದ ರೂಲ್ಸ್ ನಿಂದ ಎಲ್ಲಾ ರಾಜಕೀಯ ರ‍್ಯಾಲಿಗಳಿಗೂ ಬ್ರೇಕ್

- Advertisement -

ಸಿ ಎಂ ನೇತೃತ್ವದ ಸಭೆಯಲ್ಲಿ ನೆನ್ನೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮತ್ತು 50 -50 ರೂಲ್ಸ್, ಎಲ್ಲಾ ಸಭೆ ಸಮಾರಂಭ, ರ‍್ಯಾಲಿ ಎಲ್ಲದಕ್ಕೂ ಸಹ ಸರ್ಕಾರ ಬ್ರೇಕ್ ಆಕಿದೆ, ಈಗಾಗಿಸರ್ಕಾರದ ಟಫ್ ರೂಲ್ಸ್ ನಿಂದ ಈಗಾಗಿ ಮತ್ತೊಂದು ರಾಜಕೀಯ ಕಿತ್ತಾಟಕ್ಕೆ ವೇದಿಕೆ ಸೃಷ್ಟಿ ಮಾಡಿಕೊಡುತ್ತಾ, ಅನ್ನುನ ಅನುಮಾನ ಕೂಡ ಹುಟ್ಟಿಸಿದೆ.
ನೆನ್ನೆ ಸಭೆಯ ಬಳಿಕ ಮಾತನಾಡಿದ ಸುಧಾಕರ್, ಎರಡು ವಾರಗಳ ಕಾಲ ಮುಂದಿನ ಯಾವುದೇ ಸಮಾರಂಭಗಳಿಗೂ ಸಹ ಪಾಲ್ಗೊಳ್ಳಬಾರದು ಎಂದು ಸಚಿವ ಸುಧಾಕರ್ ಹೇಳಿದ್ರು, ಇದಕ್ಕೆ ಪ್ರತಿಯಾಗಿ ಡಿ ಕೆ ಶಿವಕುಮಾರ್ ಯಾರೇ ಎನೇ ಅಡಚಣೆ ಮಾಡಿದ್ರು ಮೇಕೆದಾಟು ಪಾದಯಾತ್ರೆಯನ್ನು ಮಾಡೇ ಮಾಡ್ತೀವಿ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ,
ಈಗಾಗಿ ಈ ಎಲ್ಲಾ ಜಂಜಾಟದ ನಡುವೆ ಎಲ್ಲಾ ರ‍್ಯಾಲಿಗಳಿಗೂ ಹೊಡೆತ ಬೀಳಲಿದೆ, ಇದನ್ನು ಮೀರಿ ಕೈ ನಾಯಕರು ರ‍್ಯಾಲಿಯನ್ನು ಮಾಡ್ತಾರಾ ಎನ್ನುವಂತದನ್ನು ನೋಡಬೇಕಾಗಿದೆ . ಈಗಾಗಿ ರಾಜಕೀಯ ವಲಯದಲ್ಲಿ ಪ್ರಶ್ನೆ ಮೂಡುವಂತಾಗಿದೆ .
ಮೇಕೆದಾಟು ಯೋಜನೆಯಡಿ ಕಾಂಗ್ರೆಸ್ ನಾಯಕರು ಇದೇ ತಿಂಗಳು 9 ರಂದು ಪಾದಯಾತ್ರೆ ಮಾಡುವ ಪ್ಲಾನ್ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಕಾರಣದಿಂದ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ , ಈಗಾಗಿ ಕಾಂಗ್ರೇಸ್ ನಾಯಕರ ಮುಂದಿನ ನಡೆ ಏನು ಎನ್ನುವಂತದ್ದು ಗೊಂದಲಮಯವಾಗಿದೆ.

ಡಿಕೆಶಿ ಇವತ್ತು ಹೇಳಿರುವ ಪ್ರಕಾರ ಬಿಜೆಪಿ ಯವರು ತಮ್ಮಿಷ್ಟದಂತೆ ಮಾಡಿರುವ ಕರ್ಫ್ಯೂ ಇದು, ಅವರ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕೋಸ್ಕರ, ನಾವು ಪಾದಯಾತ್ರೆ ಮಾಡುವುದಿಲ್ಲ ಬದಲಿಗೆ ನೀರಿಗಾಗಿ ನಡೆಯುತ್ತೇವೆ ಎಂದ್ದಿದ್ದಾರೆ, 

ಈಗಾಗಿ ಒಟ್ಟಿನಲ್ಲಿ ಸರ್ಕಾರ ಹೇಳಿರುವ ಪ್ರಕಾರ ವೀಕೆಂಡ್ ಕರ್ಫ್ಯೂ ಮೀರಿದ್ರೆ ಕಾನೂನು ಕ್ರಮ, ಜೊತೆಗೆ ವಿಪತ್ತು ನಿರ್ವಹಣ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವಂತೆ ಎಚ್ಚರಿಕೆ.ಈಗಾಗಿ ಕೊರೋನಾ ಮಧ್ಯೆ ರಾಜಕೀಯ ಕಿತ್ತಾಟ ನಡೆಯುತ್ತಿದದ್ದು,

ರಾಜಕೀಯ ರಣರಂಗ ಏನಾಗುತ್ತದೆ,ಸರ್ಕಾರದ ರೂಲ್ಸ್ಗಳೀಗೆ ಕೈ ನಾಯಕರು ಬ್ರೇಕ್ ಹಾಕ್ತಾರಾ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

- Advertisement -

Latest Posts

Don't Miss