Monday, May 11, 2026

ರಾಜಕೀಯ

ಮಹಾಮೈತ್ರಿಕೂಟಕ್ಕೆ ಶಾಕ್! ಸಮೀಕ್ಷೆ ಹೇಳ್ತಿದೆ – ಮತ್ತೆ NDA ಅಧಿಕಾರಕ್ಕೆ?

ಬಿಹಾರದಲ್ಲಿ ರಾಜಕೀಯ ಕಾದಾಟ ಮತ್ತೊಮ್ಮೆ ಬಿಸಿ ಬಿಸಿ ಹಂತಕ್ಕೆ ತಲುಪಿದೆ. 2025ರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗವು ಘೋಷಿಸಿದೆ. ರಾಜ್ಯದ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ನವೆಂಬರ್ 6ರಂದು ಮತ್ತು ಎರಡನೇ ಹಂತ ನವೆಂಬರ್ 11ರಂದು ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ನವೆಂಬರ್...

ಬಿಹಾರ ಸೀಟು ಹಂಚಿಕೆ ಶೀಘ್ರದಲ್ಲೇ : ಯಾದವ್ ನಿವಾಸದಲ್ಲಿ ರಹಸ್ಯ ಸಭೆ!

ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಸನ್ನಿಹಿತವಾಗುತ್ತಿದ್ದಂತೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಶನಿವಾರ ರಾತ್ರಿ ಸಭೆ ಸೇರಿ, ಸೀಟು ಹಂಚಿಕೆ ಸೂತ್ರವನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವ ನಿರ್ಧಾರ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಈ ಮಹತ್ವದ ಸಭೆ, ಇಂಡಿಯಾ ಬಣದ ಸಹಕಾರ ಸಮಿತಿಯ ಮುಖ್ಯಸ್ಥ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ...

ಬಿಹಾರದಲ್ಲಿ ಮತದಾನ ದಾಖಲೆ! 14 ಸಾವಿರ ಶತಾಯಿಷಿ ಮತದಾರರು

ಮಹತ್ವದ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗವು, ಈ ಬಾರಿ ಮತದಾರರ ಸಂಖ್ಯೆ ಕುರಿತು ಅಚ್ಚರಿಯ ಮಾಹಿತಿ ಬಿಡುಗಡೆ ಮಾಡಿದೆ. ಆಯೋಗದ General Overview of Electors ವರದಿ ಪ್ರಕಾರ, ಬಿಹಾರದಲ್ಲಿ 100 ವರ್ಷ ಮೇಲ್ಪಟ್ಟ ಸುಮಾರು 14 ಸಾವಿರ ಮತದಾರರು ಇದ್ದಾರೆ. ಅಂದರೆ, ಭಾರತದ ಶತಾಯಿಷಿಗಳಲ್ಲಿ ಅರ್ಧಕ್ಕಿಂತ ಹೆಚ್ಚು...

ಮುಡಾ ಕೇಸ್‌ಗೆ ಹೊಸ ಟ್ವಿಸ್ಟ್! 440 ಕೋಟಿ ಆಸ್ತಿ ಮುಟ್ಟುಗೋಲು

ಮುಡಾ ಅಂದ್ರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದ್ದ ಈ ಪ್ರಕರಣದಲ್ಲಿ ಇದೀಗ ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ 440 ಕೋಟಿ ರೂ. ಮೌಲ್ಯದ 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ...

ಎಂ.ಬಿ. ಪಾಟೀಲರಿಗೆ ಈಶ್ವರ್ ಖಂಡ್ರೆ ಸವಾಲು

ಜಾತಿಗಣತಿ ಬೆನ್ನಲ್ಲೇ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಮೊಳಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಮುಖ ಇಬ್ಬರು ಸಚಿವರಲ್ಲೇ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಎಂ.ಬಿ. ಪಾಟೀಲ್‌ ಆಗ್ರಹಿಸಿದ್ರೆ, ವೀರಶೈವ ಲಿಂಗಾಯತ ಎರಡೂ ಒಂದೇ ಅಂತಾ ಈಶ್ವರ್ ಖಂಡ್ರೆ ವಾದಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವೀರಶೈವ-ಲಿಂಗಾಯತ ವಿಭಜನೆಗೆ ಯತ್ನಿಸಿದ್ರು. ಇದೀಗ ಮತ್ತೆ ಲಿಂಗಾಯತ...

ಸ್ವಪಕ್ಷದವರ ವಿರುದ್ಧವೇ ಮಾತು, ಅನ್ಸಾರಿ ಆಡಿಯೋ ವೈರಲ್

ಕೊಪ್ಪಳಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿರುವ ಆಡಿಯೋ ವೈರಲ್ ಆಗಿದೆ.ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ‌ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ನಡೆಯುತ್ತಿರುವ ಸಿಎಂ ಕಾರ್ಯಕ್ರಮಕ್ಕೆ, ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಬಿಡಲಾಗಿದೆ. ನನ್ನ‌ ಗುಂಪಿನ ನಾಯಕರು...

ಶಿವರಾಜ್‌ ತಂಗಡಗಿ ಮೇಲೆ ಸಿದ್ದು ಪ್ರತಾಪ

ಏಯ್‌.. ನನ್ನ ನಿಲುವೇನಿಲ್ಲ. ಜನರ ನಿಲುವೇ ನಮ್ಮ ನಿಲುವು. ಅವರು ಏನ್‌ ಬರೆಸ್ತಾರೋ ಅದನ್ನೇ ಬರೆದುಕೊಳ್ತೀವಿ. ಹೀಗಂತ ಸಿಎಂ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ರು. ಅದು ಕೂಡ ತಮ್ಮ ಸಂಪುಟದ ಸಹೋದ್ಯೋಗಿ ಮೇಲೆ ಅನ್ನೋದು ಆಶ್ಚರ್ಯ. ಇವತ್ತು ಸಿದ್ದು ರೋಷಾಗ್ನಿಯಲ್ಲಿ ಬೆಂದಿದ್ದು ಸಚಿವ ಶಿವರಾಜ ತಂಗಡಗಿ. ಸಿದ್ದು ಸಿಟ್ಟಾಗಿದ್ದನ್ನು ಕಂಡ ತಂಗಡಗಿ, 1 ಕ್ಷಣ ತಬ್ಬಿಬ್ಬಾಗಿದ್ರು. ಶಾಸಕ...

ಡಿಕೆಶಿ ದೆಹಲಿ ದಂಡಯಾತ್ರೆ ರಹಸ್ಯ

ನವೆಂಬರ್‌ ಕ್ರಾಂತಿ ಚರ್ಚೆ ಜೋರಾಗ್ತಿದೆ. ಈ ಬೆನ್ನಲ್ಲೇ ದೆಹಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ದೌಡಾಯಿಸಿದ್ದಾರೆ. ಇದು ದೆಹಲಿಯಲ್ಲಿ ರಹಸ್ಯ ಕಾರ್ಯತಂತ್ರ ನಡೆಯುತ್ತಿದೆಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಕಳೆದ 3 ತಿಂಗಳಲ್ಲಿ 5 ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದು, ಈಗ ಮತ್ತೆ ಖಾಸಗಿ ಕೆಲಸಗಳ ನೆಪದಲ್ಲಿ ದೆಹಲಿಗೆ ಡಿಕೆಶಿ ಹೋಗಿದ್ದಾರೆ. ಇನ್ನು, ಕಳೆದ ಬಾರಿ ವಕೀಲರ ಭೇಟಿ...

RSS ಪಥಸಂಚಲನ ಸಂಭ್ರಮ

RSS ಶತಮಾನೋತ್ಸವ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ನಗರದ ನೆಹರು ಮೈದಾನದಿಂದ, ಸಾವಿರಾರು ಸ್ವಯಂ ಸೇವಕರು ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದ್ರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ರು. ನೆಹರು ಮೈದಾನದಿಂದ ಆರಂಭವಾದ ಪಥಸಂಚಲನ ಡೊಳ್ಳು ಬಾರಿಸುತ್ತ, ಕೈಯಲ್ಲಿ ಲಾಠಿ ಹಿಡಿದು ಸಾವಿರಾರು ಸ್ವಯಂ...

ನಾವು ವೋಟ್‌ ಹಾಕಿದ್ದು 5 ವರ್ಷಕ್ಕೆ

ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು ಶಾಸಕರು ಸದ್ಯಕ್ಕೆ ಯಾರಿಗೆ ಜೈ ಅನ್ನೋದು ಅನ್ನೋ ಗೊಂದಲದಲ್ಲಿ ಇದ್ದಾರೆ. ಈ ಕ್ರಾಂತಿಯ ಸುಳಿವಿನ ಮಧ್ಯೆ ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ ಅವರು ಖಡಕ್ ಪ್ರಶ್ನೆಗಳನ್ನ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img