Monday, May 4, 2026

ರಾಜ್ಯ

ಗರ್ಭಿಣಿಯಾಗಿದ್ದರೂ ಗುರಿ ತಪ್ಪಲಿಲ್ಲ; ಭರ್ಜರಿ ಚಿನ್ನದ ಬೇಟೆ

ಬೆಂಗಳೂರು ನಿವಾಸಿ, 32 ವರ್ಷದ ಮೇಘನಾ ಸಜ್ಜನರ್‌ ಅವರು, ನವದೆಹಲಿಯಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದಲ್ಲದೇ, ತಂಡ ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದ ಮೇಘನಾ ಸಾಧನೆ...

ಕೇಂದ್ರ ಕೃಷಿ ಯೋಜನೆಗಳ ಜಾರಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಎನ್.ಚಲುವರಾಯಸ್ವಾಮಿ

ಕೇಂದ್ರ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊರಹೊಮ್ಮಿದ್ದು, ಕೃಷಿ ಕ್ಷೇತ್ರದಲ್ಲಿ ರಫ್ತು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಹೆಚ್ಚಿನ ಬೆಂಬಲ ಅಗತ್ಯವಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಹೇಳಿದ್ದಾರೆ. ರೈತರನ್ನು ಕೃಷಿ ಉದ್ಯಮಿಗಳಾಗಿ ರೂಪಿಸುವುದಕ್ಕೂ ಹಾಗೂ ದೇಶದ ಕೃಷಿ ಆರ್ಥಿಕತೆಯನ್ನು ಬಲಪಡಿಸುವುದಕ್ಕೂ ಕೇಂದ್ರ–ರಾಜ್ಯಗಳ ಸಮನ್ವಯ ಅತ್ಯಂತ...

ಕರ್ನಾಟಕ ಜೊತೆ ಕೇಂದ್ರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು: ರೈತರು ರಾಜಕೀಯವನ್ನು ಮೀರಿ ಮೇಲಿನ ಸ್ಥಾನದಲ್ಲಿರುವವರು ಎಂದು ಹೇಳಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದಲ್ಲಿ ಕೃಷಿಯನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಸಲು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಯಾವುದೇ ಭೇದಭಾವವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಸೇರಿಸಿ...

ರೀಲ್ಸ್ ರಾಜಕೀಯಕ್ಕೆ ಬ್ರೇಕ್; ಹೈಕೋರ್ಟ್ ವಾರ್ನಿಂಗ್!

ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ವೇಳೆ, ರೀಲ್ಸ್ ಹಾಗೂ ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದು ಒಪ್ಪಲಾಗದು ಎಂದು ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಚನ್ನಮ್ಮನ...

ನಿಮ್ಮ ಪ್ರತಿ ಮೆಸೇಜ್‌ಗೂ ಸರ್ಕಾರದ ಹದ್ದಿನ ಕಣ್ಣು!

ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಿಷಯಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಹೊಸ ಕ್ರಮ ತೆಗೆದುಕೊಂಡಿದೆ. 67.26 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿ, ದ್ವೇಷ ಪ್ರಚಾರ, ಕಾನೂನು...

ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ ಐತಿಹಾಸಿಕ ದಾಖಲೆ

ಬೆಳ್ಳಿ–ಬಂಗಾರದ ಸಾಲಿಗೆ ಈಗ ತೆಂಗಿನವೂ ಸೇರ್ಪಡೆಯಾಗಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಗಳಲ್ಲಿ ಒಂದಾದ ಅರಸೀಕೆರೆ ಹಾಗೂ ತಿಪಟೂರಿನಲ್ಲಿ ಉಂಡೆ ಕೊಬ್ಬರಿ ದರ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ಒಂದು ವರ್ಷದಿಂದ ಕೊಬ್ಬರಿ ಬೆಲೆ ನಿರಂತರ ಏರಿಕೆ ಕಾಣುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಫೆಬ್ರವರಿ 2ರಂದು ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ರೂ.30,400ಕ್ಕೆ ಟೆಂಡರ್ ಆಗಿದ್ದರೆ,...

ಶೀಘ್ರ ಸಿಎಂ–ಡಿಸಿಎಂಗೆ ಹೈಕಮಾಂಡ್ ಬುಲಾವ್?

ಜನವರಿ 22ರಿಂದ ಆರಂಭವಾಗಿದ್ದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬುಧವಾರ ತೆರೆ ಬಿದ್ದಿದ್ದು, ಇದರೊಂದಿಗೆ ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕದನ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಕರೆಸಿಕೊಳ್ಳಬಹುದೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದೆ. ಸಂಕ್ರಾಂತಿ ಬಳಿಕ ರಾಜ್ಯ ನಾಯಕತ್ವ...

ಬೆಂಗಳೂರು ಕರಗ ಆಚರಿಸಲು ಕಮಿಷನ್ ನೀಡಬೇಕೆಂಬ ಆರೋಪ: ಸರ್ಕಾರದ ವಿರುದ್ಧ ಯತ್ನಾಳ್ ವಾಗ್ದಾಳಿ

Political News: ಪ್ರತೀ ವರ್ಷ ವಿಜೃಭಣೆಯಿಂದ ನಡೆಯುವ ಬೆಂಗಳೂರು ಕರಗ ಆಚರಣೆಗೂ ಕಮಿಷನ್ ದಂಧೆ ಅಡ್ಡ ಬಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆದಿಶಕ್ತಿ ದ್ರೌಪದಮ್ಮನ ಆರಾಧನೆಯಾಗಿರುವ ವಿಶ್ವವಿಖ್ಯಾತ ಬೆಂಗಳೂರು ಕರಗ ಆಚರಣೆಗೆ ಸರ್ಕಾರ ಕೊಡುವ ಅನುದಾನದಲ್ಲೂ ಕೆಲ...

Uttara Kannada: ಅಕ್ರಮ ಸಂಬಂಧ ಆರೋಪ: ಜ್ಯೋತಿಷಿ ಕಮಲಾಕರ ಭಟ್ ಅರೆಸ್ಟ್

Uttara Kannada: ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೋಲೀಸರು ಬಂಧಿಸಿದ್ದು, ಇವರ ಅಕ್ರಮ ಸಂಬಂಧಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆಂದು ಆರೋಪಿಸಲಾಗಿದೆ. ಸುಚಿತ್ರಾ ಎಂಬ ವಿವಾಹಿತೆಯ ಜತೆ ಕಮಲಾಕರ್ ಅನೈತಿಕ ಸಂಬಂಧವಿರಿಸಿದ್ದು, ಇದನ್ನು ಪ್ರಶ್ನಿಸಿದ್ದ ಆಕೆಯ ಪತಿ, ಪತಿಯ ಸಹೋದರ ಮತ್ತೋರ್ವ ಸಂಬಂಧಿಯ ಮೇಲೆ ಸುಚಿತ್ರಾ ಕಡೆಯವರು ಹಲ್ಲೆ ಮಾಡಿದ್ದು, ಈ...

SIT ವಶಕ್ಕೆ ಬಂದ ಸಿಜೆ ರಾಯ್ ಕೈ ಬರಹದ ದಾಖಲೆಗಳು!

ಕಾನ್ಫಿಡೆಂಟ್‌ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ಯಾವುದೇ ವ್ಯವಹಾರ ಮಾಡಿದರೂ ಅದನ್ನು ಹೆಚ್ಚಿನ ವಿವರಗಳೊಂದಿಗೆ ಕೈಯಲ್ಲಿ ಬರೆದುಕೊಳ್ಳುತ್ತಿದ್ದರು ಎಂಬುದು ಹೊಸ ಬೆಳವಣಿಗೆಯಾಗಿರುವುದು ಗಮನ ಸೆಳೆದಿದೆ. ಸಾಂದರ್ಭಿಕ ತನಿಖೆ (SIT) ತಂಡವು ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಅಪಾರ ಪ್ರಮಾಣದ ದಾಖಲೆಯನ್ನು ವಶಕ್ಕೆ ಪಡೆದಿದ್ದು, ವಿವರವಾದ ಪರಿಶೀಲನೆ ನಡೆಸುತ್ತಿದೆ. ತಂದಿರುವ ಮಾಹಿತಿಯಂತೆ, ಸಿಜೆ ರಾಯ್...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img