Tuesday, May 21, 2024

Latest Posts

Celebrate :ಚಂದ್ರಯಾನ ಲ್ಯಾಂಡಿಂಗ್ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು.!!

- Advertisement -

ಧಾರವಾಡ: ಭಾರತದ ಹೆಮ್ಮೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನನ್ನು ಸ್ಪರ್ಶ ಮಾಡಲೆಂದು ಇಡಿ ದೇಶಾದ್ಯಂತ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಸಿದ್ದರು.  ವಿಜ್ಞಾನಿಗಳ ಪರಿಶ್ರಮ, ದೇವರ ಅನುಗ್ರಹದಿಂದ ವಿಕ್ರಮ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಇನ್ನು ಲ್ಯಾಂಡ್ ಆಗುವುದನ್ನು ದೇಶದ ಜನ ಬಹಳ ಕಾತರದಿಂದ ಟಿವಿಯಲ್ಲಿ ವೀಕ್ಷಣೆ ಮಾಡುತ್ತಿದ್ದರು, ಅದರಂತೆ ಸುರಕ್ಷಿತವಾಗಿ ಇಳಿದ ವಿಕ್ರಮನನ್ನು ದೇಶದ ಜನ ಕಣ್ತುಂಬಿಕೊಂಡರು.  ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ‌ ಅರವಿಂದ ಬೆಲ್ಲದ್ ಅವರು ಧಾರವಾಡದಲ್ಲಿ ಕುಟಂಬದೊಂದಿಗೆ ಕುಳಿತು ಚಂದ್ರಯಾನ ಲ್ಯಾಂಡಿಂಗ್ ವೀಕ್ಷಿಸಿದರು.

ಇನ್ನು  ಹುಬ್ಬಳ್ಳಿ ದೇಶಪಾಂಡೆ ನಗರದ ಬಿಜೆಪಿ ಕಛೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಕಾರ್ಯಕರ್ತರು ದೇಶದ ಪರ ಜಯಘೋಷ  ಕೂಗಿದರು.

Safe landing: ಚಂದ್ರಯಾನ ಯಶಸ್ವಿಗಾಗಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ವಿಶೇಷ ಪೂಜೆ..!

ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..

ಈಗ ಭಾರತ ಚಂದ್ರನ ಮೇಲಿದೆ: ಪ್ರಧಾನಿ ನರೇಂದ್ರ ಮೋದಿ..

- Advertisement -

Latest Posts

Don't Miss