Thursday, June 19, 2025

Latest Posts

ಛತ್ರಪತಿ ಶಿವಾಜಿಯ ಫೋಟೋ ಎಡಿಟ್ ಮಾಡಿ, ಅವಹೇಳನ ಮಾಡಿದ ಪುಂಡರು ಅರೆಸ್ಟ್

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೆಲವು ಕಿಡಿಗೇಡಿಗಳು, ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಾರೆ. ಅವಮಾನ ಮಾಡಿದ ಕಿಡಿಗೇಡಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದ ರುಚಿಕ್‌ಸಾಬ್ ಮತ್ತು ಅಶ್ಪಾಕ್ ಅಲಿ ಬಂಧಿತರಾಗಿದ್ದು, ಇವರು ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜರು ಮತ್ತು ಟಿಪ್ಪು ಸುಲ್ತಾನ್ ಫೋಟೋ ಎಡಿಟ್ ಮಾಡಿ, ಶಿವಾಜಿ ಮಹಾರಾಜರನ್ನು ಕೆಳಮಟ್ಟದಲ್ಲಿ ಇರಿಸಿದ್ದರು. ಟಿಪ್ಪು ಸುಲ್ತಾನ್ ಕಾಲಿನಡಿ ಕುಳಿತು ಶಿವಾಜಿ ಬೇಡಿಕೊಳ್ಳುವ ಹಾಗೆ ಕಿಡಿಗೇಡಿಗಳು ಫೊಟೋ ಎಡಿಟ್ ಮಾಡಿದ್ದಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹರಿಬಿಟ್ಟಿದ್ದರು.

ವಾಟ್ಸಪ್ ಸ್ಟೇಟಸ್‌ಗೂ ಕೂಡ ಈ ಫೋಟೋ ಹಾಕಿದ್ದರು. ಇದನ್ನು ನೋಡಿದ ಹಸರಂಬಿ ಗ್ರಾಮಸ್ಥರು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ಬರೀ ಆಸ್ಪತ್ರೆ ಅಷ್ಟೇ ಅಲ್ಲ, ಗಾಜಾದ ಶಾಲೆಗಳು ಉಗ್ರರ ಅಡ್ಡಾಗಳಾಗಿದೆ..

ಅಲ್-ಶಿಫಾ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ಸ್ಥಗಿತ: ಶಿಶುಗಳು ಸೇರಿ 24 ರೋಗಿಗಳ ಸಾವು

- Advertisement -

Latest Posts

Don't Miss