Saturday, October 19, 2024

Latest Posts

Police: ಅನೈತಿಕ ಸಂಬಂಧದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

- Advertisement -

 ಚಿಕ್ಕಬಳ್ಳಾಪುರ : ಸುಖವಾಗಿದ್ದ ಸಂಸಾರವನ್ನು ಹಾಳು ಮಾಡಲು ಇತ್ತಿಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಪ್ರಬಲ ಕಾರಣಗಳಾಗುತ್ತಿವೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಸಾವಿಗೆ ಪತ್ನಿ ಮತ್ತು ಸ್ನೇಹಿತನ  ಅನೈತಿಕ ಸಂಬಂಧವೇ ಕಾರಣವೆಂದು ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕಿನ ಗುವ್ವಲಕಾನಹಳ್ಳಿಯ ನಿವಾಸಿ ಸುರೇಶ್ ಮತ್ತು ತುಮಕೂರು ಜಿಲ್ಲೆಯ ಬುಕ್ಕಾ ನಗರದ ಹೇಮಾ ಎಂಬುಬವರು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು ಇವರಿಗೆ ಎರಡು ಮಕ್ಕಳಿವೆ . ಆದರೂ ಪತಿಯ ಸ್ನೇಹಿತನಾದ ಗಂಗಾಧರನ ಮೋಹಕ್ಕೆ ಬಲಿಯಾಗಿ ಪ್ರಿಯಕರ ಮತ್ತು ಹೇಮಾ ಸೇರಿಕೊಂಡು ಪತಿ ಸುರೇಶನಿಗೆ ಕಿರುಕಳ ನೀಡಿದ್ದಾರೆ  ಈ ಕಿರುಕುಳವನ್ನು ತಾಳಲಾರದ ಪತಿ  ಮನನೊಂದು ಆತ್ಮಹತ್ಯ ಮಾಡಿಕೊಂಡಿದ್ದಾನೆ.

ಪತಿ ಸುರೆಶನೇ ಹೇಮಾಗೆ ಹುನಗಲ್ ಗ್ರಾಮದಲ್ಲಿ  ಅಂಗನವಾಡಿಯಲ್ಲಿ ಶಿಕ್ಷಕಿ ಕೆಲಸ ಕೊಡಿಸಿದ್ದಾನೆ.ಕೆಲಸ ಮಾಡುವಾಗ  ಪತಿಯ ಸ್ನೇಹಿತ ಹುನಗಲ್ ಗ್ರಾಮದ ಗಂಗಾಧರ ಆಗಾಗ ಸುರೇಶ ಇಲ್ಲದ ಸಮಯದಲ್ಲಿ  ಮನೆಗೆ ಬಂದು ಹೋಗುತ್ತಿದ್ದ ಹೀಗೆ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಅನೈತಿಕ ಸಂಬಂದ ಬೆಳೆದಿದೆ ನಂತರ ಇವರಿಬ್ಬರ ಸಂಬಂಧ ಸರೇಶನಿಗೆ ಗೊತ್ತಾಗಿದೆ ಈಗ ಇಬ್ಬರು ಸೇರಿ ಸುರೇಶನಿಗೆ ಕಿರುಕುಳ ನೀಡದ್ದಾರೆ ಹಾಗೂ ಪದೇ ಪದೇ ಗಂಡನ ವಿರುದ್ದ ಠಾಣೆಗೆ ದೂರನ್ನು ದಾಖಲಿಸುತ್ತಿದ್ದಳು ಇದರಿಂದ ಮನನೊಂದ ಸುರೇಶ ಸಾವಿಗೆ ಆಡಿಯೋ ರೆಕಾರ್ಡ್ ಮೂಲಕ  ಕಾರಣ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೇಮಾ ಮತ್ತು ಗಂಗಾಧರನನ್ನು ಬಂದಿಸಿದ್ದಾರೆ.

Mari Matha Temple : 150 ವರ್ಷ ಇತಿಹಾಸದ ದೇಗುಲ ದ್ವಂಸ…!

Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ

Narendra modi : ಅಬುದಾಬಿಯಲ್ಲಿ ಪ್ರಧಾನಿ ಮೋದಿ…!

- Advertisement -

Latest Posts

Don't Miss