Saturday, July 27, 2024

Latest Posts

ಧಾರವಾಡದಲ್ಲಿ ಫುಲ್ ಆ್ಯಕ್ಟೀವ್‌ ಆಗಿದೆ ಚಾಕ್ಲೇಟ್ ಗ್ಯಾಂಗ್: ಇವರ ಕೆಲಸ ಏನಂತಾ ಗೊತ್ತಾದ್ರೆ ಶಾಕ್ ಆಗ್ತೀರಾ

- Advertisement -

Dharwad News: ಧಾರವಾಡ ಜಿಲ್ಲೆಯಲ್ಲಿ ಚಾಕಲೇಟ್ ಗ್ಯಾಂಗ್‌ವೊಂದು ಪುಲ್ ಆ್ಯಕ್ಟೀವ್ ಆಗಿದೆ..ಬಿಹಾರ ಮೂಲದ ಮಹ್ಮದ ಶಮಶದ್ ಎಂಬುವನು ಧಾರವಾಡದಲ್ಲಿ ಮಲ್ಲಿಕಾರ್ಜುನ್ ಎಂಬುವರಿಗೆ ಚಾಕ್ ಲೇಟ್ ತನ್ನಿಸಿ ಪ್ರಜ್ಞೆ ತಪ್ಪಿಸಿ ಆತನ ಬಳಿ ಬಿದ್ದ ಒಂದುವರೆ ತೊಲೆಯ ಬಂಗಾರದ ಚೈನ್ ಮತ್ತು 25,000 ಮೌಲ್ಯದ ವಿವೋ ಪೋನ್ ಕದ್ದು ಪರಾರಿಯಾಗಿದ್ದ..

ಈ ಘಟನೆ ನಡೆದದ್ದು ನವೆಂಬರ್ 9 ರಂದು ನಗರದ ಶ್ರಿನಿವಾಸ ಚಿತ್ರಮಂದಿರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಎನ್ ಜಿ ಓ ದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಎಂಬುವರು ಫಿಲ್ಮ್ ನೋಡಲಿಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಮಲ್ಲಿಕಾರ್ಜುನ್‌ಗೆ ಮಹ್ಮದ ಶಮಶದ್ ಪರಿಚಯವಾಗುತ್ತೆ. ಪರಿಚಯದಿಂದ ಇಬ್ಬರು ಸೇರಿ ಚಲನಚಿತ್ರ ವೀಕ್ಷಣೆಗೆ ಹೋದಾಗ ಮಹ್ಮದ ಶಮಶದ್ ಕೊಟ್ಟ ಚಾಕಲೇಟ್ ಕೊಟ್ಟಿದ್ದಾನೆ.

ಆ ಚಾಕಲೇಡ್ ನ ಮಲ್ಲಿಕಾರ್ಜುನ್ ತಿಂದು 10 ನಿಮಿಷದಲ್ಲಿ ಮೂರ್ಛೆ ಹೋಗುತ್ತಾನೆ. ಬಳಿಕ ಮಹ್ಮದ ಶಮಿ ಮಲ್ಲಿಕಾರ್ಜುನ್ ಬಳಿ ಇದ್ದ ಗೋಲ್ಡ್ ಚೈನ್ ಮತ್ತು ಮೋಬೈಲ್ ಕಳ್ಳತನ ಮಾಡಿ, ಪರಾರಿಯಾಗಿದ್ದ ಪ್ರಕರಣವನ್ನು ದಾಖಲಿಸಿಕೊಂಡ ಶಹರ ಪೋಲಿಸರು, ಸದ್ಯ ಮಹ್ಮದ್ ಶಮಶದ್ ನನ್ನ ಬಂಧಿಸಿದ್ದಾರೆ.. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ, ಎಲ್ಲ ಫೊಲಿಸ್ ಠಾಣೆಗೆ ಈ ಪ್ರಕರಣದ ಮಾಹಿತಿ ನೀಡಿ ಇಂತಹ ಪ್ರಕರಣಗಳ ಬಗ್ಗೆ‌ ನಿಗಾ ಇಡಲು ಸೂಚಿಸಿದ್ದಾರೆ.

ಜೊತೆಗೆ ಯಾವುದೇ ಕುರುಹುಗಳಿಲ್ಲದೆ ಒಂದೇ ತಿಂಗಳಲ್ಲಿ ಪ್ರಕರಣವನ್ನ‌ ಬೇಧಿಸಿದ ಶಹರ ಪೋಲಿಸರಿಗೆ ಅಭಿನಂದನೆ ಸಲ್ಲಿಸಿದ್ಧಾರೆ.. ಇನ್ನು ಈ ಬಿಹಾರ ಮೂಲದ ಮಹ್ಮದ್ ಶಮಶದ್ ನ ಜೊತೆ ಯಾರಿದ್ದಾರೆ ಎನ್ನುವುದರ ಬಗ್ಗೆ ಪೋಲಿಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ‌‌‌.

ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಧಾರವಾಡ

ಪ್ರಧಾನಿ ಮೋದಿಯವರನ್ನು ಭೇಟಿಯಾಗ ಹೊರಟ ಸಿಎಂಗೆ ಆರ್.ಅಶೋಕ್ ಕಿವಿಮಾತು

ಕುಮಾರಸ್ವಾಮಿನೇ ಇರ್ತಾರೋ ಇಲ್ವೋ ಗೊತ್ತಿಲ್ಲಾ: ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವರು

2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ

- Advertisement -

Latest Posts

Don't Miss