ಚಿಕ್ಕಬಳ್ಳಾಪುರ: ಟಿಕೇಟ್ ಸಿಗಲಿಲ್ಲವೆಂದು ಈ ಪಕ್ಷದಿಂದ ಆ ಪಕ್ಷಕ್ಕೆ ಹಾರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೇ ಸಂದರ್ಭದಲ್ಲಿ ಜನ ಸಚಿವ ಸುಧಾಕರ್ ಮಾಡಿರುವ ಅಭಿವೃದ್ಧಿ ಕೆಲಸವನ್ನು ಮೆಚ್ಚಿ, ಬಿಜೆಪಿ ಸೇರಲು ಮುಂದಾಗಿದ್ದಾರೆ. ಅಲ್ಲದೇ ಈ ಬಾರಿ ಆರೋಗ್ಯ ಸಚಿವರನ್ನು ಗೆಲ್ಲಿಸುವ ಶಪಥ ಮಾಡಿದ್ದಾರೆ.
ಮಂಡಿಕಲ್ ಜಿಲ್ಲಾಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು, ಬಿಜೆಪಿಗೆ ಸೇರುವ ಮೂಲಕ ಸಚಿವ ಸುಧಾಕರ್ಗೆ ಸಪೋರ್ಟ್ ಮಾಡುತ್ತಿದ್ದಾರೆ. ಅಲ್ಲದೇ ಡಬಲ್ ಇಂಜಿನ್ ಸರ್ಕಾರ ಮಾಡುತ್ತಿರುವ ಜನಪರ ಕಾಳಜಿ ಕೆಲಸವನ್ನು ಮೆಚ್ಚಿದ್ದಾರೆಂದು ಹೇಳಿದ್ದಾರೆ.
*ಪಕ್ಷ ಸೇರ್ಪಡೆಯಾದವರು*
ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡಿನ ಮುಖಂಡರಾದ ರಾಜು, ಸಂತೋಷ್, ಬಂಗಾರಪ್ಪ, ಮುರಳಿ, ಅಜಯ್, ಗಂಗರಾಜು, ರಮೇಶ್, ಮುನಿರಾಜು, ರಾಕೇಶ್, ನಿತಿನ್, ಶಿವಕುಮಾರ್, ಪ್ರಶಾಂತ್, ಪ್ರವೀಣ್, ಹರೀಶ್, ಎನ್. ನಿತಿನ್, ಮಹೇಶ್, ನವೀನ್, ನಾರಾಯಣಸ್ವಾಮಿ, ಸಂತೋಷ್, ತಿರುಮಲಪ್ಪ, ಸುರೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲೂ ತಕ್ಕ ಪಾಠ: ರಾಜೀವ್ ಚಂದ್ರಶೇಖರ್ ವಿಶ್ವಾಸ..
‘ಕಾಂಗ್ರೆಸ್ನವರು ಹತಾಶರಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕುಂಡದಲ್ಲಿರುವ ಹೂ ತೆಗೆದುಕೊಂಡು ಹೋಗಿದ್ದಾರೆ’