ಮೃತ ರೈತನ ಕುಟುಂಬಕ್ಕೆ ಸಿಎಂ ಸಾಂತ್ವನ- 5 ಲಕ್ಷ ರೂಪಾಯಿ ಪರಿಹಾರ

ಮಂಡ್ಯ: ಜಿಲ್ಲೆಯ ಸಂತೇಬಾಚಳ್ಳಿಯ ಅಘಲಯ ಗ್ರಾಮದಲ್ಲಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ರೈತ ಸುರೇಶ್ ಕುಟುಂಬಸ್ಥರನ್ನು ಸಿಎಂ ಭೇಟಿ ಮಾಡಿ ಸಾಂತ್ವನ ಹೇಳಿದ್ರು.

ಮೃತ ಸುರೇಶ್ ಕುಟುಂಬದವರಿಗೆ ಸಿಎಂ ಕುಮಾರಸ್ವಾಮಿ  5 ಲಕ್ಷ ಪರಿಹಾರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾಭ್ಯಾಸ ಮುಗಿದ ಬಳಿಕ ಸುರೇಶ್ ಪುತ್ರಿ ಸುವರ್ಣ ಹಾಗೂ ಪುತ್ರ ಚಂದ್ರಶೇಖರ್ ಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನ  ನೀಡಿದ್ದಾರೆ.ಅಲ್ಲದೆ ರೈತ ಸುರೇಶ್ ಸಿಎಂಗೆ ಸಂತೇಬಾಚಳ್ಳಿ ಕೆರೆಗಳ ಪುನಶ್ಚೇತನಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಿಎಂ ಕೆರೆಯನ್ನೂ ಕೂಡ ವೀಕ್ಷಣೆ ಮಾಡಿದ್ರು.

ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ವಿತರಿಸುತ್ತಿರುವ ಸಿಎಂ ಕುಮಾರಸ್ವಾಮಿ

ಅವತ್ತು ಹಂಗೆ, ಇವತ್ತು ಹಿಂಗೆ..! ಎಲ್ಲರ ಕಾಲೆಳೆಯುತ್ತೆ ಕಾಲ..! ಮಿಸ್ ಮಾಡದೇ ಈ ವಿಡಿಯೋ ನೋಡಿ

About The Author