Friday, April 18, 2025

Latest Posts

Siddaramaiah : ಸಿಸಿಬಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

- Advertisement -

State News : ಬೆಂಗಳೂರಲ್ಲಿ  ಶಂಕಿತ ಐವರು  ಉಗ್ರರನ್ನು  ಕರ್ನಾಟಕ ಸಿಸಿಬಿ   ಪೊಲೀಸರು  ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್  ಜುನೇದ್  ಮುದಾಶಿರ್  ಜಾಹಿದ್ ಬಂಧಿತ ಆರೋಪಿಗಳು. ಇವರು  ಬೆಂಗಳೂರಲ್ಲಿ  ಭಾರೀ  ವಿದ್ವಂಸಕ ಕೃತ್ಯ ಕ್ಕೆ  ಸಂಚು ಹಾಕಿದ್ದು  ಇವರಿಗೆ  ವಿದೇಶದಿಂದ ಫಂಡಿಂಗ್  ಮಾಡಲಾಗುತ್ತಿತ್ತು  ಎಂದು ಹೇಳಲಾಗಿದೆ. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ನಗರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ‌ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ಅಭಿನಂದನೆಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ‌ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು. ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂಬುವುದಾಗಿ ಟ್ವಿಟರ್ ಮೂಲಕ ಸಿಸಿಬಿ ಪೊಲೀಸರನ್ನು ಅಭಿನಂದಿಸಿ ಪೊಲೀಸರಿಗೆ ಮತ್ತಷ್ಟು ಇಂತಹ ಉತ್ತಮ  ಕಾರ್ಯವೆಸಗುವಂತೆ ಮಾಡಲು ಉತ್ತೇಜನ ನೀಡಿದ್ದಾರೆ.

Sudharshan Moodabidire : ಸುದರ್ಶನ್ ಮೂಡುಬಿದಿರೆ ನೇತೃತ್ವದಲ್ಲಿ ಟಿಫಿನ್ ಬೈಠಕ್

Bisiyuta:ಬಿಸಿ ಊಟ ನೀಡದೆ ಬೇಜವಬ್ದಾರಿ ವರ್ತನೆ ತೋರುತ್ತಿರುವ ಶಾಲೆಯ ಮುಖ್ಯಶಿಕ್ಷಕರು

Pramod muthalik: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೆಟ್ಟ ಹುಳುಗಳು ಹೊರ ಬರುತ್ತಿವೆ- ಮುತಾಲಿಕ್

- Advertisement -

Latest Posts

Don't Miss