Wednesday, June 18, 2025

Latest Posts

Congress : ಕಾಂಗ್ರೆಸ್​ನಲ್ಲಿ ಜಾತಿ ಜನಗಣತಿ ಗದ್ದಲ..!

- Advertisement -

State News : ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ ಕಾಂಗ್ರೆಸ್‌ ಪಕ್ಷದೊಳಗೇ ಒಡಕು ಮೂಡಿದೆ. ಇದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿರುವ ಡಿ.ಕೆ. ಶಿವಕುಮಾರ್‌, ವರದಿ ಸ್ವೀಕಾರಕ್ಕೂ ಮುನ್ನ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ವರದಿಯನ್ನು ಹಾಗೇ ಸ್ವೀಕಾರ ಮಾಡಿದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಾತಿ ಜನಗಣತಿ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮಿತಿ ರಚಿಸಿ ವರದಿಗೆ ಸೂಚಿಸಿದ್ದರು. ಆದರೆ, ಆ ವರದಿ ಮಾತ್ರ ಬಿಡುಗಡೆಯಾಗಲೇ ಇಲ್ಲ. ಮುಂದೆ ಬಂದ ಯಾವ ಸರ್ಕಾರಗಳೂ ಸಹ ಬಿಡುಗಡೆಯ ಗೋಜಿಗೆ ಹೋಗಿರಲಿಲ್ಲ. ಆದರೆ, ಈಚೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತ ಅವಧಿ ಮುಗಿಯುವುದರೊಳಗೆ ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿಯೇ ಸಿದ್ಧ ಎಂದು ಹೇಳಿದ್ದರು. ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಿದ್ದಂತೆ ಕೆಲವೊಂದು ಸಮುದಾಯಗಳಿಂದ ಅಪಸ್ವರಗಳು ಕೇಳಿ ಬಂದಿದ್ದವು. ಈ ವರದಿಯನ್ನು ಯಥಾವತ್‌ ಸ್ವೀಕಾರ ಮಾಡಿದರೆ ತಮ್ಮ ತಮ್ಮ ಸುಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಅಸಮಾಧಾನಗೊಂಡಿದ್ದವು. ಈಗ ಆ ಅಸಮಾಧಾನವು ಡಿ.ಕೆ. ಶಿವಕುಮಾರ್‌ ಮೂಲಕ ವ್ಯಕ್ತವಾಗಿದೆ.

ಸಿಎಂಗೆ ಪತ್ರ ಬರೆದಿದ್ದೇಕೆ?
ಕಾಂತರಾಜ್ ನೇತೃತ್ವದ ಸಮಿತಿಯ ವರದಿ ತಿರಸ್ಕರಿಸುವಂತೆ, ಒಕ್ಕಲಿಗರಿಗೆ 3A ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಡಿ.ಕೆ. ಶಿವಕುಮಾರ್​ಗೆ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಮಾಡಿತ್ತು. ಹೋರಾಟ ಸಮಿತಿಯ ಮನವಿಯಂತೆ ಸಿಎಂಗೆ ಡಿ.ಕೆ. ಶಿವಕುಮಾರ್‌ ಈ ಪತ್ರವನ್ನು ಬರೆದಿದ್ದಾರೆ.

KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!

Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!

Cauvery Protest: ಕಾವೇರಿ ಹೋರಾಟಕ್ಕೆ ದನಿಗೂಡಿಸಿದ ಸ್ಯಾಂಡಲ್​ವುಡ್

- Advertisement -

Latest Posts

Don't Miss