ಬೆಂಗಳೂರು: ಮರು ರಾಜೀನಾಮೆ ನೀಡಿ ಮತ್ತೆ ಮುಂಬೈಗೆ ತೆರಳಿ ದೋಸ್ತಿಗಳಿಗೆ ತಲೆನೋವು ತಂದಿಟ್ಟಿರೋ ಶಾಸಕರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಹೀಗಾಗಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ್ರೆ ಉಳಿದವರೆಲ್ಲರೂ ವಾಪಸ್ ಬರ್ತಾರೆ ಅಂತ ಪಟ್ಟು ಹಿಡಿದಿದೆ.
ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡು ಬಂಡಾಯವೆದ್ದು ಪಟಾಲಂ ಕಟ್ಟಿಕೊಂಡು ಸರ್ಕಾರವನ್ನು ಪತನದಂಚಿಗೆ ದೂಡಲು ಕಾರಣವಾದ ಮಾಸ್ಟರ್ ಮೈಂಡ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ಪರಮಾಪ್ತ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ನಾಯಕು ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮ ಜರುಗಿಸಿ ಅಂತ ಕಾಂಗ್ರೆಸ್ ಪಟ್ಟಹಿಡಿದಿದೆ. ಈ ಇಬ್ಬರನ್ನು ಅನರ್ಹಗೊಳಿಸಿದ್ರೆ ಉಳಿದವರೆಲ್ಲರೂ ವಾಪಸ್ ಬರುತ್ತಾರೆ ಅನ್ನೋ ವಿಶ್ವಾಸವಿದ್ದು ಕ್ರಮ ತೆಗೆದುಕೊಳ್ಳಲೇಬೇಕು ಅಂತ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದು, ಈ ಬಗ್ಗೆ ಚರ್ಚೆ ಮುಂದುವರಿಸಿದ್ದಾರೆ.
ರೆಬೆಲ್ ಶಾಕರಿಗೆ ಬಿಗ್ ಶಾಕ್..!!ಮಿಸ್ ಮಾಡದೇ ಈ ವಿಡಿಯೋ ನೋಡಿ