Thursday, June 19, 2025

Latest Posts

ಕರ್ನಾಟಕಕ್ಕೆ ಕಾಂಗ್ರೆಸ್ ಕೂಡ ಶತ್ರೂ, ಬಿಜೆಪಿ ಕೂಡ ಶತ್ರು: ಚೇತನ್ ಅಹಿಂಸಾ ವಿಶೇಷ ಸಂದರ್ಶನ

- Advertisement -

Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿ ಜೊತೆ ಮಾತತನಾಡಿದ್ದು, ದೇಶದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕರ್ನಾಟಕಕ್ಕೆ ಕಾಂಗ್ರೆಸ್ ಕೂಡ ಶತ್ರೂ, ಬಿಜೆಪಿ ಕೂಡ ಶತ್ರು. ನಮ್ಮ ದೇಶದ ಪ್ರಜಾಪ್ರಭುತ್ವದ ವಿಶೇಷತೆ ಅಂದ್ರೆ, ನಮಗೆ ನೂರಾರು ಪಕ್ಷಗಳು, ನೂರಾರು ಸಿದ್ಧಾಂತಗಳು ಬೆಳೆಯಲು ಅವಕಾಶವಿದೆ. ಕಮ್ಯುನಿಸ್ಟ್ ನಾಯಕರು ಆರ್ಥಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಹೊರತು, ಭಾರತದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿಲ್ಲ.

ಕಾಂಗ್ರೆಸ್ ಇದ್ದಷ್ಟು ದಿನ ಬಿಜೆಪಿ ಬೆಳೆಯುತ್ತಾ ಬರುತ್ತದೆ. ಕಾಂಗ್ರೆಸ್ ಇದ್ದಷ್ಟು ದಿನ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಆದರೆ ಬಿಜೆಪಿ ಇದ್ದರೂನು ಕಾಂಗ್ರೆಸ್‌ನ್ನು ಅಟ್ಯಾಕ್ ಮಾಡಬಹುದು. ಆದರೆ ನಮ್ಮ ಗುರಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸಬೇಕು.

ಈ ಕಮ್ಯುನಿಷ್ಟರು ಮತ್ತು ಪ್ರಗತಿಪರರು ಮಾತನಾಡುವುದೇನೆಂದರೆ, ಕೆರೆಹಾವು ಮತ್ತು ನಾಗರಹಾವು ಎರಡರಲ್ಲಿ ಯಾವುದನ್ನು ಮೊದಲು ಸಾಯಿಸಬೇಕು. ಹಿಂದುತ್ವದಲ್ಲಿ ನಾಗರಹಾವು ಬಿಜೆಪಿ ಕೆರೆ ಹಾವು ಕಾಂಗ್ರೆಸ್. ಆದರೆ ಎಲ್ಲ ರೀತಿಯಿಂದ ಹೀಗೆ ಹೇಳಲಾಗುವುದಿಲ್ಲ. ಜಾಾತಿ ವ್ಯವಸ್ಥೆ, ಕುಟುಂಬ ರಾಾಜಕಾರಣ, ಭ್ರಷ್ಟಾಚಾರದಲ್ಲಿ ಯಾರು ನಾಗರಹಾವು..? ಯಾರು ಕೆರೆ ಹಾವು..? ಒಂದೊಂದು ಸಾರಿ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.

- Advertisement -

Latest Posts

Don't Miss