Political news: ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದ್ದ ಕಾರಣಕ್ಕೆ, ಮಾಜಿ ಶಾಸಕ ಪ್ರೀತಂ ಗೌಡ, ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಜನತೆ ಕುಡಿಯಲು ಕೂಡ ನೀರನ್ನು ದೂರ ಪ್ರದೇಶಗಳಿಂದ ತರಬೇಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಹಳ್ಳಿಗಳಲ್ಲಿ ಅಂತರ್ಜಲವೇ ಬತ್ತಿದೆ. ಜನತೆಯ ದಿನಬಳಕೆಗೂ ನೀರು ಸಿಗುತ್ತಿಲ್ಲ ಎಂದು ಪ್ರೀತಂ ಗೌಡ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆದರೆ ಬೊಗಳೆ ಬಿಡುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆಗೆ ಬೇಕಾದ ನೀರು ಸರಬರಾಜು ಮಾಡಲು ಮಾತ್ರ ಯೋಗ್ಯತೆಯಿಲ್ಲ. ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದ್ದೇವೆ ಎನ್ನುವ ಕಾಂಗ್ರೆಸ್ ಒಳಗೊಳಗೇ ಟ್ಯಾಂಕರ್ ಮಾಫಿಯಾಗಳಿಗೆ ಬೆಂಬಲ ನೀಡಿ ದುಡ್ಡು ಹೊಡೆಯುತ್ತಿದೆ. ಈಗ ದೇವಾಲಯಗಳಲ್ಲಿ ಪೂಜೆಗೆ ನೀರಿಲ್ಲ, ಓಕುಳಿಯಾಟಕ್ಕೆ ನೀರು ಬಳಸಬೇಡಿ ಎಂದೆಲ್ಲ ಹೇಳುವ ಮಟ್ಟಕ್ಕೆ ರಾಜ್ಯವನ್ನು ತಂದಿಟ್ಟಿದೆ ಎಂದು ಪ್ರೀತಂಗೌಡ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಅಣೆಕಟ್ಟೆಗಳಲ್ಲಿ ನೀರಿದ್ದಾಗ ಗ್ರಾಮೀಣ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಲಿಲ್ಲ. ರಾಜಕೀಯದ ದುರಾಸೆಗೆ ತಮಿಳುನಾಡಿಗೆ ನೀರು ಹರಿಸಿತು. ರಾಜ್ಯದ ಜನತೆ ರೈತಾಪಿ ವರ್ಗ ನೀರಿಲ್ಲದೆ ಕಣ್ಣೀರಿಡುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಜನರನ್ನು ಗುಳೇ ಹೋಗುವ ಪರಿಸ್ಥಿತಿಗೆ ತಂದಿಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ಈಶ್ವರಪ್ಪ ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಳಗಾವಿಯಲ್ಲಿ ವಿರೋಧದ ಅಲೆಯಿಲ್ಲ. ಕೋರೆಯವರು ನಮ್ಮ ಪರವಾಗಿದ್ದಾರೆ: ಮಾಜಿ ಸಿಎಂ ಶೆಟ್ಟರ್..!
ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿಎಂ