Monday, June 23, 2025

Latest Posts

‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘

- Advertisement -

ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕಾಲ್ ಮಾಡ್ತೀನಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರೆಡಿಯೋ ಸಿಟಿ 91.1 ಎಫ್ ಎಮ್ ನ “ನೋ ಪಾಲಿಟಿಕ್ಸ್ ಪ್ಲಿಸ್” ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಡಿಕೆಶಿ, ರಾಜಕೀಯದ ಬಗ್ಗೆ ಹಲವು ಮಾತುಗಳನ್ನಾಡಿದ್ದಾರೆ.

ಎಫ್‌ಎಂನ ಆರ್‌ಜೆಯಾಗಿದ್ದ ನೇತ್ರಾ ಹೇಗಿದ್ದೀರಿ ಸರ್ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇನ್ನೂ ಬದ್ಕಿದಿನಿ ನೋಡಿ ಎಂದು ಹೇಳಿದರು. ಅದಕ್ಕೆ ನೇತ್ರಾ, ಅಯ್ಯೋ ಯಾಕೆ ಸರ್ ಅಂತಾ ಕೇಳಿದ್ದಕ್ಕೆ, ಈಗ ನಾವು ರಾಜಕೀಯದವರು, ನೀವು ಸಾಮಾನ್ಯ ಜನರು. ನೀವು ನಿಮ್ಮ ಈ ಕಂಪನಿ ಓನರ್ ಹತ್ತಿರ ಬೇಕಾದ್ರೆ ಕೇಳಿ ನೋಡಿ. ಅವರು ಅವರ ಹೆಂಡತಿಯ ಬಳಿ ಅಥವಾ ಅವರ ಆತ್ಮೀಯರ ಬಳಿ ಮಾತನಾಡುವಾಗ, ನಾರ್ಮಲ್ ಕಾಲ್ ಮಾಡ್ತಾರಾ ಅಥವಾ ವಾಟ್ಸಪ್ ಕಾಲ್‌ನಲ್ಲಿ ಮಾತಾಡ್ತಾರಾ ಅಂತಾ. ಯಾಕಂದ್ರೆ ಈಗ ಅಂಥಾ ಭಯದ ವಾತಾವರಣ ಈ ದೇಶದಲ್ಲಿ ಸೃಷ್ಟಿಯಾಗಿದೆ ಎಂದು ಪರೋಕ್ಷವಾಗಿ, ಬಿಜೆಪಿ ಸರ್ಕಾರದ ವಿರುದ್ಧ ಮೋದಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ.

ಉದ್ಯಮ ಮಾಡುವವನಿಗೆ ಭಯ ಯಾಕಿರ್ಬೇಕು. ನಮಗೆ ಭಯೋತ್ಪಾದಕರ ಭಯ ಇಲ್ಲ, ದರೋಡೆಕೋರರ ಭಯವಿಲ್ಲ. ಆದರೂ ನಾವು ಹೆಂಡತಿ ಜೊತೆ ಮಾತನಾಡುವಾಗಲೂ, ಸೇಫ್ಟಿಗಾಗಿ ವಾಟ್ಸ್ ಅಪ್ ಕಾಲ್ ಮಾಡಿ, ಮಾತನಾಡುತ್ತೇನೆ. 12 ಲಕ್ಷ ಜನ, ಉದ್ಯೋಗ ಸೃಷ್ಟಿಸುವವರು, ಈ ದೇಶ ಬಿಟ್ಟು ಹೋಗಿದ್ದಾರೆ. ಯಾಕೆ ಹೋಗಿದ್ದಾರೆ..? ಇದನ್ನೆಲ್ಲ ಜನ ಅರಿತುಕೊಳ್ಳಬೇಕು ಎಂದು ಡಿಕೆಶಿ ಹೇಳಿದ್ದಾರೆ.

ಈಗ ನೀವು ಆರ್‌ಜೆಯಾಗಿದ್ದೀರಿ. ಒಂದು ಉದ್ಯಮಿ ನಿಮಗೆ ಉದ್ಯೋಗ ಕೊಟ್ಟಿದ್ದಕ್ಕೆ ನೀವು ಇಲ್ಲಿದ್ದೀರಿ. ಅದೇ ರೀತಿ ನಾವು ಒಂದು ಸಂಸ್ಥೆ ಕಟ್ಟಿದಾಗ, ಎಲ್ಲ ಸರ್ಕಾರಗಳು ನಮಗೆ ರಕ್ಷಣೆ ಕೊಡಬೇಕು. ಭಯದ ವಾತಾವರಣ ಇರಬಾರದು. ಸರ್ಕಾರ ಎಲ್ಲರಿಗೂ ಉದ್ಯೋಗ ಕೊಡುವುದಕ್ಕೆ ಆಗುವುದಿಲ್ಲ. ಆ ಕೆಲಸವನ್ನ ಉದ್ಯಮಿಗಳು ಮಾಡುತ್ತಾರೆ. ಅಂಥವರನ್ನ ಪ್ರೀತಿಯಿಂದ ಕಾಣುವುದನ್ನ ಬಿಟ್ಟು, ಭಯದ ವಾತಾವರಣ ಯಾಕೆ ನಿರ್ಮಾಣ ಮಾಡುತ್ತಿದ್ದೀರಿ ಎಂದು ಡಿಕೆಶಿ ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಅವರು ಇನ್ನೂ ಏನೇನು ಮಾತನಾಡಿದ್ದಾರೆಂಬುದು ಇಲ್ಲಿದೆ ನೋಡಿ..

‘ಕುಮಾರಸ್ವಾಮಿ ಒಬ್ಬ ದುರಾಹಂಕಾರಿ, ದುರಹಂಕಾರದ ಶಾಸಕ ಅಂದ್ರೆ ರವೀಂದ್ರ ಶ್ರೀಕಂಠಯ್ಯ’

‘ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ’

ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲೇ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ.

- Advertisement -

Latest Posts

Don't Miss