Sunday, June 1, 2025

Latest Posts

ಎಚ್ಚೆತ್ತ ಮಂಡ್ಯ ಕಾಂಗ್ರೆಸ್ ನಾಯಕರಿಂದ ಅಸಮಾಧಾನಿತರ ಜೊತೆ ಸಭೆ..

- Advertisement -

ಮಂಡ್ಯ: ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ ಹಿನ್ನೆಲೆ, ಎಚ್ಚೆತ್ತ ಕಾಂಗ್ರೆಸ್ ನಾಯಕರು ಅಸಮಾಧಾನಿತರ ಜೊತೆ ಸಭೆ ನಡೆಸಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮುಖಂಡರು ಬಿಗಿ ಪಟ್ಟು ಹಿಡಿದಿದ್ದು, ಟಿಕೆಟ್ ಆಕಾಂಕ್ಷಿತರ ಶಮನಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ನೇತೃತ್ವದಲ್ಲಿ ಟಿಕೇಟ್ ಆಕಾಂಕ್ಷಿತರ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಟಿಕೆಟ್ ಆಕಾಂಕ್ಷಿತರು, ಮುಖಂಡರು ಭಾಗಿಯಾಗಿದ್ದರು.

ಮಂಡ್ಯ ಕ್ಷೇತ್ರದ ಟಿಕೆಟ್ ಬಯಸಿ ಒಟ್ಟು 16 ಮಂದಿ ಅರ್ಜಿ ಸಲ್ಲಿಸಿದ್ದರು. ಆದ್ರೆ 16 ಮಂದಿಯಲ್ಲಿ ಪಿ.ರವಿಕುಮಾರ್‌ಗೆ ಟಿಕೇಟ್ ಘೋಷಣೆಯಾಗಿತ್ತು. ಟಿಕೆಟ್ ಘೋಷಣೆ ಬಳಿಕ ಆಕಾಂಕ್ಷಿತರು ಅಸಮಾಧಾನಗೊಂಡಿದ್ದರು. ಹಾಗಾಗಿ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಾಜಿ ಯೂತ್ ಅಧ್ಯಕ್ಷ ಚಿದಂಬರ್, ಹೊಸಹಳ್ಳಿ ಶಿವಲಿಂಗೇಗೌಡ, ಹಾಲಹಳ್ಳಿ ಅಶೋಕ್ ಜೊತೆ ಚರ್ಚೆ ನಡೆಸಲಾಗಿದೆ.

ಪಕ್ಷದ ತಿರ್ಮಾನದಂತೆ ಭಿನ್ನಮತ ಇಲ್ಲದೆ ಕೆಲಸ ಮಾಡಬೇಕು. ಪಕ್ಷಕ್ಕೆ ನಿಷ್ಠೆಯಿಂದ ದುಡಿಯಬೇಕು ಎಂಬ ಬಗ್ಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ಮಾತನಾಡಿದ ಪರಿಷತ್ತ್ ಸದಸ್ಯ ಮಧು ಜಿ ಮಾದೇಗೌಡ, ಮಂಡ್ಯ ಕ್ಷೇತ್ರಕ್ಕೆ ಗಣಿಗ ರವಿಕುಮಾರ್ ಅಭ್ಯರ್ಥಿ. ಏ.19 ರಂದು ನಾಮಪತ್ರ ಸಲ್ಲಿಸಲಾಗುತ್ತೆ. ಚುನಾವಣೆ ರೂಪುರೇಷೆ ಬಗ್ಗೆ ಚರ್ಚಿಸಲಾಗಿದೆ. ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲಾ ಕಾರ್ಯತಂತ್ರ ಮಾಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ, ಟಿಕೆಟ್ ಬಯಸಿ 16 ಜನ ಅರ್ಜಿ ಹಾಕಿದ್ದರು. ಟಿಕೆಟ್ ಸಿಗದಿದ್ದರೆ ಗೊಂದಲ ಉಂಟಾಗುವುದು ಸಹಜ. ಈಗಾಗಲೇ ಅವರನ್ನ ಭೇಟಿ ಮಾಡಿ ಚರ್ಚಿಸಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುಸುವುದಾಗಿ ಹೇಳಿದ್ದಾರೆ. ಆತ್ಮಾನಂದ ಅವರು ಹಿರಿಯ ಮುಖಂಡರು. ಯಾವುದೇ ರೀತಿಯ ಕಾಂಗ್ರೆಸ್ ಗೆ ತೊಂದರೆ ಮಾಡಲ್ಲ. ಸ್ಪಲ್ಪ ಗೊಂದಲ ಇದೆ ಅದನ್ನ ನಾವು ಸರಿಪಡಿಸುತ್ತೇವೆ. ಟಿಕೆಟ್ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಇದುವರೆಗೆ ದೆಹಲಿಗೆ ಯಾರು ಹೋಗಿಲ್ಲ. ಅದರ ಬಗ್ಗೆ ಗೊತ್ತಿಲ್ಲ ಸಿದ್ದರಾಮಯ್ಯ ಡಿಕೆಶಿ ಅವರನ್ನು ಭೇಟಿ ಮಾಡಿರಬಹುದು ಅಷ್ಟೇ ಎಂದು ಮಧು ಮಾದೇಗೌಡ ಹೇಳಿದ್ದಾರೆ.

‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’

ಬಿಜೆಪಿ ಗೆದ್ದರೆ ಯಾರು ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಗೆ ವಿಜಯೇಂದ್ರ ಹೇಳಿದ್ದು ಹೀಗೆ..

‘ನನಗಷ್ಟೇ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಕಾರಣವೇನಂದ್ರೆ..’

- Advertisement -

Latest Posts

Don't Miss