- Advertisement -
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 5ನೇ ಪಟ್ಟಿ ರಿಲೀಸ್ ಮಾಡಿದ್ದು, ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಅಲ್ಲದೇ ಸಿಎಂ ಕ್ಷೇತ್ರದಲ್ಲಿ ಕ್ಯಾಂಡಿಡೇಟ್ ಬದಲಾವಣೆ ಮಾಡಲಾಗಿದೆ.
ಸಿಎಂ ಬೊಮ್ಮಾಯಿ ಚುನಾವಣೆಗೆ ನಿಲ್ಲಲಿರುವ ಕ್ಷೇತ್ರವಾದ ಶಿಗ್ಗಾವಿಯಲ್ಲಿ ಅಭ್ಯರ್ಥಿಯನ್ನ ಬದಲಾಯಿಸಲಾಗಿದೆ. ಮೊದಲು ಮೊಹಮ್ಮದ್ ಯುಸೂಫ್ ಸವಣೂರು ಅವರನ್ನ ನಿಲ್ಲಿಸಲಾಗಿತ್ತು. ಆದ್ರೆ ಈಗ ಅವರನ್ನ ಬದಲಾಯಿಸಿ, ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೇಟ್ ನೀಡಲಾಗಿದೆ.
ಪುಲಕೇಶಿ ನಗರದಲ್ಲಿ ಎ.ಸಿ.ಶ್ರೀನಿವಾಸ್, ಕೆ.ಆರ್.ಪುರಕ್ಕೆ ಡಿ.ಕೆ.ಮೋಹನ್, ಮುಳಬಾಗಿಲಿಗೆ ಮುದ್ದುಗಂಗಾಧರ್ ಅವರನ್ನ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ಕಾಂಗ್ರೆಸ್ ಇನ್ನೂ 5 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸದೇ ಬಾಕಿ ಉಳಿಸಿದೆ.
‘ಭವಿಷ್ಯದ ದೊಡ್ಡ ರಾಜಕೀಯ ಬದಲಾವಣೆಗೆ ವರುಣಾದಲ್ಲಿ ಮುನ್ನುಡಿ ಬರೆದಿದ್ದೇನೆ.’
- Advertisement -