Political News: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, 39 ಜನರ ಹೆಸರನ್ನು ಘೋಷಿಸಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್, ಲೋಕಸಭೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಕರ್ನಾಟಕದಿಂದ ಮೊದಲ ಪಟ್ಟಿಯಲ್ಲಿ 7 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಮಂಡ್ಯ ಕ್ಷೇತ್ರಕ್ಕೆ – ಸ್ಟಾರ್ ಚಂದ್ರು ಅವರಿಗೆ ಟೀಕೇಟ್ ನೀಡಲಾಗಿದೆ. ಬೆಂಗಳೂರು ಗ್ರಾ – ಡಿ ಕೆ ಸುರೇಶ್, ಹಾಸನ – ಶ್ರೇಯಸ್ ಪಟೇಲ್, ತುಮಕೂರು – ಮುದ್ದಹನುಮೇಗೌಡ, ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್, ಗದಗ-ಹಾವೇರಿ – ಆನಂದ ಸ್ವಾಮಿ ಗಡ್ಡದೇವರ ಮಠ, ವಿಜಯಪುರ – ರಾಜು ಅಲಗೂರ ಅವರ ಹೆಸರನ್ನು ಘೋಷಿಸಲಾಗಿದೆ.
ಇನ್ನು ತೆಲಂಗಾಣದಲ್ಲಿ 4 ಜನ, ಛತ್ತೀಸ್ಘಡ್ದಲ್ಲಿ 6 ಜನ, ಕೇರಳ 15, ಮೇಘಾಲಯ-2, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾನಲ್ಲಿ ಒಂದು ಕ್ಷೇತ್ರದ ಅಬ್ಯರ್ಥಿಯ ಹೆಸರು ಘೋಷಿಸಲಾಗಿದೆ. ರಾಹುಲ್ ಗಾಂಧಿ ಈ ಬಾರಿ ಕೂಡ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ.
ಲೋಕ ಸಮರದಲ್ಲಿ ಹಳಬರ ಕೈ ಬಿಟ್ಟು ಹೊಸಬರಿಗೆ ಟಿಕೆಟ್ ನೀಡುತ್ತಾರೆ ಅನ್ನೊದು ಊಹಾಪೋಹ – ಜೋಶಿ
ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ