Friday, September 20, 2024

Latest Posts

‘ಸಿದ್ದುಗೆ ದುರಅಹಂಕಾರ- ಕಾಂಗ್ರೆಸ್ ದುಸ್ಥಿತಿಗೆ ಇವರೇ ಕಾರಣ’- ರೋಷನ್ ಬೇಗ್

- Advertisement -

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಂತೆ ಕಾಂಗ್ರೆಸ್ ಅಲ್ಪ ಸ್ಥಾನ ಗೆದ್ದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇರ ಕಾರಣ ಅಂತ ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್, ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಇಬ್ಬರ ಫ್ಲಾಪ್ ಶೋದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ಗತಿ ಬಂದಿದೆ. ಎಕ್ಸಿಟ್ ಪೋಲ್ ವರದಿ ನೋಡಿದ್ರೆ ನನಗೆ ಬೇಸರವಾಗುತ್ತೆ ಅಂತ ವಿಷಾದ ವ್ಯಕ್ತಪಡಿಸಿದರು.

ಇನ್ನು ಸಿದ್ದರಾಮಯ್ಯ ದುರಹಂಕಾರ, ಅಹಂಕಾರದ ನಡೆ ಸರಿಯಲ್ಲ. ಎಚ್ಡಿಡಿ ಕುಟುಂಬದ ಮನೆ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡು ನಾನೇ ಸಿಎಂ ಆಗ್ತೀನಿ ಅಂತ ಹೇಳಿದ್ದು ಹಲವರಿಗೆ ಇಷ್ಟವಿಲ್ಲ. ಸಿದ್ದರಾಮಯ್ಯ ಈ ನಡೆ ರಾಜ್ಯ ಜನರಿಗೆ ಗೊಂದಲ ಹಾಗೂ ಬೇಸರ ತಂದಿದೆ ಅಂತ ರೋಷನ್ ಬೇಗ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

‘ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಳಿಯುತ್ತಿದೆ’

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ, ಕ್ರೈಸ್ತರಿಗೆ ಈ ಬಾರಿ ಟಿಕೆಟ್ ನೀಡದ್ದಕ್ಕೆ ಬೇರೆ ಕಾರಣ ಇದೆ. ಮುಸ್ಲಿಂಮರಿಗೆ ಕ್ಯಾರೆ ಎನ್ನಲಿಲ್ಲ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ತುಳಿಯುತ್ತಿದೆ. ಮುಸ್ಲಿಂರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಇದೆಲ್ಲಾ ಸಿದ್ದರಾಮಯ್ಯ ಕುತಂತ್ರ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಬೇಸರವಿದೆ.  ಅಂತ ರೋಷನ್ ಬೇಗ್ ಕಿಡಿ ಕಾರಿದ್ರು.

ಒಟ್ಟಾರೆ, ಇಷ್ಟು ದಿನ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಹೊಗಳಿಕೆ ಗಳಿಸಿ ಅಟ್ಟಕ್ಕೇರಿದ್ದ ಸಿದ್ದು ಇದೀಗ ತಮ್ಮ ಪಕ್ಷದ ಹಿರಿಯ ಮುಖಂಡರಿಂದಲೇ ಗಂಭೀರ ಆರೋಪಕ್ಕೆ ಒಳಗಾಗಿದ್ದಾರೆ. ಅಲ್ಲದೆ ಚುನಾವಣಾ ಸಮೀಕ್ಷಾ ವರದಿ ಬಂದ ಮೇಲೆ ತಮ್ಮದೇ ಪಕ್ಷದ ಮುಖಂಡರು ಸಿದ್ದರಾಮಯ್ಯಗೆ ಮಗ್ಗಲಮುಳ್ಳಾಗಿ ಕಾಡುತ್ತಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡ್ತಿದೆ.

ಮಂಡ್ಯದಲ್ಲಿ ಸ್ವಾಭಿಮಾನ ಗೆಲ್ಲುತ್ತೋ ಅಥವಾ ಜೆಡಿಎಸ್ ಭದ್ರಕೋಟೆ ಉಳಿಸಿಕೊಳ್ಳುತ್ತೋ…? ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಗಾಗಿ ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=Xuh0YiNRcsY
- Advertisement -

Latest Posts

Don't Miss