Political News: ಪ್ರತಿದಿನ ಸ್ವಪಕ್ಷದ ವಿರುದ್ಧ ಒಂದಿಲ್ಲೊಂದು ಹೇಳಿಕೆ ಕೊಡುತ್ತ, ಬಾಂಬ್ ಸಿಡಿಸುತ್ತಿರುವ ಬಿಜೆಪಿ ಹಿರಿಯ ನಾಯಕ, ಬಸನಗೌಡ ಪಾಟೀಲ್ ಯತ್ನಾಳ್, ಇಂದು ಕೂಡ ಬಿಜೆಪಿ ಸರ್ಕಾರದ ವಿರುದ್ಧವೇ ಹೇಳಿಕೆ ಕೊಟ್ಟಿದ್ದಾರೆ. ಕೊರೋನಾ ಸಮಯದಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎಂದಿದ್ದಾರೆ.
ಕೋವಿಡ್ ಇದ್ದ ವೇಳೆ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. 45 ರೂಪಾಯಿ ಇದ್ದ ಮಾಸ್ಕ್ ಬೆಲೆಯನ್ನು 485 ರೂಪಾಯಿ ಮಾಡಲಾಗಿತ್ತು. ನನಗೂ ಕೋವಿಡ್ ಬಂದಿತ್ತು. ಆಗ 5 ಲಕ್ಷಕ್ಕೂ ಮೀರಿ ಬಿಲ್ ಆಗಿತ್ತು. ಶಾಸಕರಿಗೆ ಸರ್ಕಾರವೇ ಬಿಲ್ ಪಾವತಿಸುತ್ತದೆ. ಅಲ್ಲದೇ, ಸಂಬಳವೂ ಸಿಗುತ್ತದೆ. ಆದರೆ ಎಲ್ಲದಕ್ಕೂ ಸರ್ಕಾರದ ದುಡ್ಡು ಬಳಸಿರಲಿಲ್ಲ ನಾನು. ನಾನು ನನ್ನ ಹಣದಿಂದಲೇ ಬಿಲ್ ಕಟ್ಟಿದ್ದೆ ಎಂದು ಯತ್ನಾಳ್ ಹೇಳಿದ್ದಾರೆ.
ಅಲ್ಲದೇ, ಕೊರೋನಾ ವೇಳೆ ಕೋಟಿ ಕೋಟಿ ಲೂಟಿ ಮಾಡಲಾಗಿದೆ. ನನಗೆ ಲೂಟಿ ಮಾಡುವ ಚಟವಿಲ್ಲ. ನಾನು ಹೀಗೆ ಹೇಳಿದ್ದಕ್ಕೆ, ನನ್ನನ್ನು ಪಕ್ಷದಿಂದ ಉಚ್ಛಾಟಿಸಬಹುದು. ಅಥವಾ ನನಗೆ ನೋಟೀಸ್ ಬರಬಹುದು. ಆಗ ನಾನು ಇನ್ನು ಹಲವರ ಬಗ್ಗೆ ಹೇಳಿಕೆ ಕೊಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಹಿಜಬ್ ನಿಷೇಧ ವಾಪಸ್ ಪಡಿಯೋಕ್ಕೆ ಕೇವಲ 30 ನಿಮಿಷ ಸಾಕು: ಸಿದ್ದು ವಿರುದ್ಧ ಓವೈಸಿ ವಾಗ್ದಾಳಿ
‘ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಇವರಿಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು’
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ 100 ಹೊಸ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ