Wednesday, February 5, 2025

Latest Posts

ಚಾಮರಾಜಪೇಟೆ ಕೇಸ್ ಮಾಸುವ ಮುನ್ನ ಮೈಸೂರಿನಲ್ಲಿ ಕರುವಿನ ಮೇಲೆ ದಾಳಿ ಮಾಡಿ ಬಾಲ ಕತ್ತರಿಸಿದ ಪಾಪಿಗಳು

- Advertisement -

Mysuru News: ಕೆಲ ದಿನಗಳ ಹಿಂದಷ್ಟೇ ಚಾಾಮರಾಾಜ ಪೇಟೆಯಲ್ಲಿ ಶಫಿ ಎಂಬ ಪಾಪಿ ಕುಡಿದ ನಶೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ. ಈ ಘಟನೆ ಮಾಸುವ ಮುನ್ನವೇ, ಇನ್ನು ಕೆಲವು ಪಾಪಿಗಳು ಮೈಸೂರಿನಲ್ಲಿ ಕರುವೊಂದರ ಮೇಲೆ ದಾಳಿ ಮಾಡಿ, ಅದರ ಬಾಲ ಕತ್ತರಿಸಿ, ಪರಾರಿಯಾಗಿದ್ದಾರೆ.

ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹರಕೆಗಾಗಿ ಬಿಟ್ಟ ಕರುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕತ್ತರಿಸಲಾಗಿದೆ. ಈ ಕರುವನ್ನು ಭಕ್ತರು ನಂಂಜನಗೂಡಿನ ನಂಜುಂಡೇಶ್ವರನಿಗೆ ಹರಕೆಯಾಗಿ ಅರ್ಪಿಸಿದ್ದರು. ಇದೇ ರೀೀತಿ ಹಲವು ಹಸು, ಕರುಗಳನ್ನು ಇಲ್ಲಿ ದೇವರಿಗೆ ಅರ್ಪಿಸುವ ಪದ್ಧತಿ ಇದೆ. ಆದರೆ ಈ ಕರು ಬೆಳಿಗ್ಗೆ ರಸ್ತೆಯಲ್ಲಿ ಓಡಾಡುತ್ತಿದ್ದಾಗ, ಅಪರಿಚಿತರು ದಾಳಿ ಮಾಡಿ, ಪರಾರಿಯಾಗಿದ್ದಾರೆ.

ಬಳಿಕ ಕರುವನ್ನು ನೋಡಿರುವ ಸ್ಥಳೀಯರು , ಕರುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ದೇವಸ್ಥಾನದ ಬಳಿ ತಂದು ಬಿಟ್ಚಿದ್ದಾರೆ. ವಿಷಯ ತಿಳಿದ ದೇವಸ್ಥಾನದ ಆಡಳಿತ ಮಂಡಳಿಯವರು ಸ್ಥಳಕ್ಕೆ ಆಗಮಿಸಿ, ಗೋಶಾಲೆ ನಿರ್ಮಿಸುವುದಾಾಗಿ ಜನರಿಗೆ ಭರವಸೆ ನೀಡಿದೆ. ಈ ಮೊದಲು ಹರಕೆ ಕರುಗಳ ಮೇಲೆ ಶಿವಲಿಂಗದಮುದ್ರೆ ಹಾಕಲಾಗುತ್ತಿತ್ತು. ಆದರೆ ಈಗ ಹಾಗೆ ಮಾಡದ ಕಾರಣ, ದುರುಳರ ದುಷ್ಕ್ರೃತ್ಯ ಜೋರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಇಂಥ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Latest Posts

Don't Miss