Saturday, June 21, 2025

Latest Posts

Cauvery Meeting : ದೆಹಲಿಯಲ್ಲಿ ಕಾವೇರಿ ಸಭೆ : ಸಭೆಯಲ್ಲಿ ಸಿದ್ದರಾಮಯ್ಯ ಏನಂದ್ರು?

- Advertisement -

Dehali News : ಕಾವೇರಿ ನೀರು ಹಂಚಿಕೆ ಬಗ್ಗೆ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ಕೇಂದ್ರದ ಸಚಿವರು, ಸರ್ವಪಕ್ಷ ಸಂಸದರ ಸಭೆ ನಡೀತು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ನಡುವೆ ಜಟಾಪಟಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರೆ ಪ್ರಹ್ಲಾದ್ ಜೋಶಿ ಪ್ರಧಾನಿಯನ್ನು ಎಳೆಯಬೇಡಿ ಎಂದರು.

ಸಭೆಯಲ್ಲಿ ಸಿದ್ದರಾಮಯ್ಯ ಏನಂದ್ರು?
– ರಾಜ್ಯದಲ್ಲಿ 195 ಬರಪೀಡಿತ ತಾಲ್ಲೂಕು ಗುರುತಿಸಿದ್ದೇವೆ
– 123 ವರ್ಷಗಳಲ್ಲೇ ಆಗಸ್ಟ್​ನಲ್ಲಿ ಅತಿ ಕಡಿಮೆ ಮಳೆಯಾಗಿದೆ
– ವಾಡಿಕೆಗಿಂತ ಅತಿ ಕಡಿಮೆ ಮಳೆಯಿಂದ ಸಂಕಷ್ಟ ಹೆಚ್ಚಾಗಿದೆ
– ಮಳೆ ಆಗದಿದ್ರೂ 177.2 TMC ನೀರು ಬಿಡೋಕಾಗಲ್ಲ!
– ಕುಡಿಯುವ ನೀರು, ಬೆಳೆ ರಕ್ಷಣೆ, ಕೈಗಾರಿಕೆಗೂ ನೀರಿಲ್ಲ

ವಿಪಕ್ಷಗಳು ಏನಂದ್ವು..?
ಕುಮಾರಸ್ವಾಮಿ : ಕಾವೇರಿ ನೀರು ಹಂಚಿಕೆ ಕುರಿತ ದೆಹಲಿ ಸಭೆ ಬರೀ ಭಾಷಣಕ್ಕೆ ಸೀಮಿತ
ಪ್ರಲ್ಹಾದ್ ಜೋಶಿ : ನೀರು ಹರಿಸುವಾಗ ನಿಮಗೆ ಸಂಸದರು ನೆನಪಾಗಲಿಲ್ವಾ..? I.N.D.I.A ಮೈತ್ರಿ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತಮಿಳುನಾಡಿಗೆ ನೀರು ಹರಿಸಿದ್ದಾರೆ.

ಕಾವೇರಿ ಹೋರಾಟಕ್ಕೆ ದನಿಗೂಡಿಸಿದ ಸ್ಯಾಂಡಲ್​ವುಡ್
– ಸ್ಯಾಂಡಲ್​​​ವುಡ್​ ಸ್ಟಾರ್​ಗಳೇ ಎಲ್ಲಿದ್ದೀರಾ, ಕಾವೇರಿ ಹೋರಾಟವನ್ನು ಮರೆತುಬಿಟ್ರಾ? ಕಾವೇರಿ ಹೋರಾಟಕ್ಕೆ ಬರದ ನಿಮಗೆ ಧಿಕ್ಕಾರ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ​ ಮುಂದೆ ಕನ್ನಡಪರ ಸಂಘಟನೆ ಸದಸ್ಯರು ಇಂದು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ರು. ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್ ಪೋಟೋ ಹಿಡಿದು ಆಕ್ರೋಶ ಹೊರಹಾಕಿದ್ರು.
ಯಾವಾಗ ಆಕ್ರೋಶ ಹೆಚ್ಚಾಯ್ತೋ ನಟ ದರ್ಶನ್ ಟ್ವೀಟ್ ಮಾಡಿದ್ರು. ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದು ದರ್ಶನ್‌ ಬರೆದುಕೊಂಡಿದ್ದಾರೆ.

– ಮತ್ತೊಂದು ಕಡೆ ಕಿಚ್ಚ ಸುದೀಪ್ ಕೂಡಾ ಕಾವೇರಿ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ. ಸ್ನೇಹಿತರೇ ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ.
ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ ಎಂದು ಎಕ್ಸ್​​ನಲ್ಲಿ ಪೋಸ್ಟ್ ಹಾಕಿದ್ದಾರೆ.

– ನಟ ರಾಘವೇಂದ್ರ ರಾಜಕುಮಾರ್ ಕೂಡಾ, ರೈತರ ಹೋರಾಟಕ್ಕೆ ನಾವು ಸ್ಪಂದಿಸಲೇಬೇಕು.. ಫಿಲಂ ಛೇಂಬರ್​​ ಕರೆಗಾಗಿ ಕಾಯುತ್ತಿದ್ದೇವೆ ಎಂದರೆ, ರಕ್ತ ಕೊಟ್ಟೆವು ನೀರು ಬಿಡೆವು. ನೀರು ಇಲ್ಲದಿದ್ದಾಗ ತಮಿಳುನಾಡಿಗೆ ಹೇಗೆ ನೀರು ಕೊಡಲು ಸಾಧ್ಯ? ಎಂದು ದೊಡ್ಡಣ್ಣ ಹೇಳಿದ್ದಾರೆ.

ಈ ಕುರಿತ ವೀಡಿಯೋ ಕರ್ನಾಟಕ ಟಿವಿ ಪ್ರೈಮ್ ಟೈಮ್ ನಲ್ಲಿ ಇಲ್ಲಿದೆ ನೋಡಿ……..

KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!

Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!

Cauvery Protest: ಕಾವೇರಿ ಹೋರಾಟಕ್ಕೆ ದನಿಗೂಡಿಸಿದ ಸ್ಯಾಂಡಲ್​ವುಡ್

- Advertisement -

Latest Posts

Don't Miss