Political News:ನವದೆಹಲಿ: ಹೊಸ ಪಾರ್ಲಿಮೆಂಟ್ ಉದ್ಘಾಟನೆಯಾಗಿದ್ದು, ಗಣಪತಿ ಹಬ್ಬದಂದು ಇಲ್ಲಿ ಮೊದಲ ಅಧಿವೇಶನ ನಡೆಸಲಾಯಿತು. ಈ ವೇಳೆ ಸುಮಲತಾ ಅಂಬರೀಷ್ ಮಾತನಾಡಿದ್ದು, ನನೆಗ ಮೊದಲ ಬಾರಿ ಈ ಹೊಸ ಸಂಸತ್ ಭವನದಲ್ಲಿ ಭಾಷಣ ಮಾಡಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ತಾನು ಕರ್ನಾಟಕದಿಂದ (ಮಂಡ್ಯ) ಆರಿಸಿ ಬಂದ ಮೊದಲ ಮಹಿಳಾ ಸ್ವತಂತ್ರ ಅಭ್ಯರ್ಥಿಯಾಗಿ, ಗೆಲುವು ಸಾಧಿಸಿದ್ದೇನೆ. ಒಂದು ಹೆಣ್ಣು ಸಾರ್ವಜನಿಕ ಜೀವನದಲ್ಲಿ ಅನುಭವಿಸಬಹುದಾದ ಎಲ್ಲ ರೀತಿಯ ಅಡೆತಡೆ, ಚಾಲೆಂಜ್ಗಳನ್ನು ನಾವು ಅನುಭವಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ಶ್ರೇಷ್ಠ ಮಹಿಳೆಯರಾದ ಸಾವಿತ್ರಿಬಾಯಿ ಫುಲೆ, ಸರೋಜಿನಿ ನಾಯ್ಡು ಇವರೆಲ್ಲರನ್ನೂ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ ಇವರೆಲ್ಲರೂ ಮಹಿಳೆಯರ ಹಕ್ಕಿಗಾಗಿ ಹೋರಾಡಿದವರು.
ಅಲ್ಲದೇ ನಾನು ಕರ್ನಾಟಕದಿಂದ ಬಂದಿದ್ದೇನೆ. ಅದು ಎಂಥ ರಾಜ್ಯವೆಂದರೆ, ಅಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವನಂಥವರು ಶೌರ್ಯದ ಮತ್ತು ಹೆಮ್ಮೆಯ ಪ್ರತೀಕವಾಗಿದ್ದರು ಅಲ್ಲದೇ, ಭಾರತ ಎಂಥ ದೇಶವೆೆಂದರೆ, ಇಲ್ಲಿ ಸನಾತನ ಧರ್ಮವಿದೆ. ಮತ್ತು ಇಲ್ಲಿ ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸುತ್ತಾರೆ ಎಂದಿದ್ದಾರೆ.
Jagadish Shettar : ಬಿಜೆಪಿಗೆ ಹೋಗುವ ಆ ನಾಲ್ಕು ಜನರ ಹೆಸರು ಹೇಳಲಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸವಾಲು
Cogress: ಗ್ಯಾರಂಟಿ ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ವಜಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ