Friday, October 18, 2024

Latest Posts

ಹರಿಪ್ರಸಾದ್ ಅವರಿಗೆ ಸಿಕ್ಕ ಮಾಹಿತಿ, ಸರ್ಕಾರಕ್ಕಿಲ್ಲವೇ..? : ಮಾಜಿ ಶಾಸಕ ಪ್ರೀತಂ ಗೌಡ

- Advertisement -

Political News: ಅಯೋಧ್ಯೆಗೆ ಹೋಗುವವರಿಗೆ ದೇವರೇ ರಕ್ಷಣೆ ಕೊಡಬೇಕು. ಗೋದ್ರಾ ರೀತಿಯ ದುರಂತ ಮತ್ತೊಮ್ಮೆ ನಡೆಯಬಹುದು. ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ಹಾಗಾಗಿ ನಾನು ಈ ರೀತಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ, ಈಗಾಗಲೇ ಹಲವು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಪ್ರೀತಂಗೌಡ, ಗೋಧ್ರಾದಲ್ಲಿ ರಾಮಭಕ್ತ ಕರಸೇವಕರ ಮಾರಣಹೋಮ ನಡೆದಂತೆ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹರಿಪ್ರಸಾದ್ ಅವರ ಹೇಳಿಕೆ ಆತಂಕಕಾರಿಯಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆಂದು ಹೇಳಿ ದೊಡ್ಡ ದ್ವೇಷದ ಮಾರುಕಟ್ಟೆಯನ್ನೇ ತೆರೆದಿದೆ ಕಾಂಗ್ರೆಸ್.

ರಾಜ್ಯದ ಓಲೈಕೆ ಸರ್ಕಾರ ಗಲಭೆ ಮಾಹಿತಿ ಬೇರೆಡೆ ಸೆಳೆಯಲು 31 ವರ್ಷದ ಹಳೆಯ ರಾಮಜನ್ಮಭೂಮಿ ಹೋರಾಟದ ಪ್ರಕರಣ ಕೆದಕಿ ಕರಸೇವಕನನ್ನು ಬಂಧಿಸಿದೆ. ಮತ್ತೊಂದು ಗೋಧ್ರಾ ರೀತಿ ಘಟನೆ ನಡೆಯಬಹುದೆಂದು ಹರಿಪ್ರಸಾದ್ ಅವರಿಗೆ ಸಿಕ್ಕ ಮಾಹಿತಿ, ಸರ್ಕಾರಕ್ಕಿಲ್ಲವೇ? ಅದನ್ನು ತಡೆಯಲು ಏನೇನು ಮುನ್ನೆಚ್ಚರಿಕೆ ವಹಿಸಿದೆ ಸರ್ಕಾರ? ಪಿಎಫ್ಐ ಗೂಂಡಾಗಳು, ಉಗ್ರರನ್ನು ಅಮಾಯಕರು ಬ್ರದರ್ಸ್ ಎಂಬ ಹಣೆಪಟ್ಟಿ ಕಟ್ಟಿ ಹೊರಬಿಟ್ಟಿರುವ ಸಂಚಿನ ಮೂಲ ಇಲ್ಲಿದೆಯೇ? ಸಿಎಂ ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ಉತ್ತರಿಸಬೇಕಿದೆ ಎಂದಿದ್ದಾರೆ.

ಗುಜರಾತ್‌ನಲ್ಲಿ ಈ ರೀತಿ ರಾಮಭಕ್ತರಾದ ಕರಸೇವಕರ ಹತ್ಯೆ ನಡೆದಿತ್ತು. ಅದೇ ರೀತಿ ಅಯೋಧ್ಯೆ ಕಾರ್ಯಕ್ರಮದಲ್ಲಿ ಘಚನೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಮಾಹಿತಿ ಇದ್ದೇ ನಾನು ಈ ರೀತಿ ಹೇಳುತ್ತಿದ್ದೇನೆ. ಹಾಗಾಗಿ ಕರ್ನಾಟಕದಿಂದ ಯಾರ್ಯಾರು ಅಯೋಧ್ಯೆಗೆ ಹೋಗುತ್ತಾರೋ, ಅವರಿಗೆ ಸರಿಯಾದ ರೀತಿಯ ಬಂದೋಬಸ್ತ್ ಮಾಡಿಕೊಡಬೇಕಾಗುತ್ತದೆ. ಇಲ್ಲದೇ ಹೋದರೆ, ನಾವು ಮತ್ತೊಂದು ಗೋದ್ರಾಾವನ್ನು ಕರ್ನಾಟಕದಲ್ಲಿ ನೋಡಬೇಕಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದರು.

ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..

ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ

“ರಾಮಭಕ್ತರನ್ನು ಕೆಣಕಿದರೆ ಕಾಂಗ್ರೆಸ್ ಸರ್ಕಾರ ಧೂಳಿಪಟವಾದೀತು ಎಚ್ಚರ”

- Advertisement -

Latest Posts

Don't Miss