Tuesday, May 20, 2025

Latest Posts

ಹುಟ್ಟಿದ್ರು, ಸತ್ತರೂ ಟ್ಯಾಕ್ಸ್ ಹೆಚ್ಚಿಗೆ ಮಾಡಿದೆ: ರಾಜ್ಯ ಸರ್ಕಾರದ ವಿರುದ್ಧ ಎನ್.ರವಿಕುಮಾರ್ ಆಕ್ರೋಶ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದ್ದು, ಇದೇ 11 ರಂದು ಹುಬ್ಬಳ್ಳಿಯಲ್ಲಿ ಜನಾಕ್ರೋಶ ಯಾತ್ರೆ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ. ಧಾರವಾಡ ಜಿಲ್ಲೆಯ ಕಾರ್ಯಕರ್ತರು ಸೇರಿದಂತೆ ರಾಜ್ಯದ ಅನೇಕ ನಾಯಕರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ನಿರೀಕ್ಷೆಗು ಮೀರಿ ಜನರು ಭಾಗಿಯಾಗುತ್ತಾರೆ.

ಜನಾಕ್ರೋಶ ಯಾತ್ರೆ ಇದು ಪ್ರಾರಂಭ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತ್ರ ದಿನೇ ದಿನೇ ಬೆಲೆ ಏರಿಸುತ್ತಿದೆ. ಈ ಸರ್ಕಾರದಲ್ಲಿ ಒಂದು ವಿಂಗ್ ಬೆಲೆ ಏರಿಕೆ ಬಗ್ಗೆ ಕೆಲಸ ಮಾಡುತ್ತಿದೆ. ಈ ಸರ್ಕಾರ ಕಸಕ್ಕೂ ಟ್ಯಾಕ್ಸ್ ಹಾಕುತ್ತಿದೆ. ಸುಮಾರು 50 ವಸ್ತುಗಳ ಮೇಲೆ ಟ್ಯಾಕ್ಸ್ ಹಾಕುವಂತ ಕೆಲಸ ಮಾಡಿದೆ. ಈ ಸರ್ಕಾರ ಬೆಲೆ ಏರಿಕೆ ಅಭಿಯಾನ ನಡೆಸುತ್ತಿದೆ. ಹುಟ್ಟಿದ್ರು, ಸತ್ತರೂ ಟ್ಯಾಕ್ಸ್ ಹೆಚ್ಚಿಗೆ ಮಾಡಿದೆ. ರೈತರ ಬೆನ್ನುಮೂಳೆಯನ್ನ ಈ ಸರ್ಕಾರ ಮುರಿದಿದೆ. ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುತ್ತಿತ್ತು, ಈ ಸರ್ಕಾರ ಬಂದ ಮೇಲೆ ಅದನ್ನ ತಡೆ ಹಿಡಿದಿದೆ. ದಲಿತರ ಪರ ಎನ್ನುವ ಸರ್ಕಾರ ದಲಿತರಿಗೆ ದ್ರೋಹ ಮಾಡಿದೆ. SCP/TSP 38,800 ಹಣವನ್ನ ಬೇರೆದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಸರ್ಕಾರಿ ಪ್ರಾಯೋಜಿತ. ಪಾಜಿಲ್‌ಗೆ ಸರ್ಕಾರ ಪರಿಹಾರ ನೀಡಿದ 25 ಲಕ್ಷ ರೂಪಾಯಿ ಹಣದಲ್ಲಿ 3 ಲಕ್ಷವನ್ನ ಕೊಲೆಗೆ ಸೂಪಾರಿ ನೀಡಲಾಗಿದೆ‌‌. ಈ ಸರ್ಕಾರ ಹಿಂದು ವಿರೋಧಿ ಸರ್ಕಾರ‌. ಅಭಿವೃದ್ಧಿಗ ವಿರೋಧಿ ಸರ್ಕಾರ ಇದು. ನಿಗಮಗಳಿಗೆ ಹಣವನ್ನ ಕೊಡುವುದನ್ನೇ ಈ ಸರ್ಕಾರ ನಿಲ್ಲಿಸಿಬಿಟ್ಟಿದೆ. ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಸಿದ್ದರಾಮಯ್ಯ ಫೇಲ್ಡ್ ಸಿಎಂ ಆಗಿದ್ದಾರೆ. ಭಯೋತ್ಪಾದಕರಿಗೆ ಕರ್ನಾಟಕ ಸ್ಲೀಪರ್ ಶೆಲ್ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ರವಿಕುಮಾರ್ ಸಾಲು ಸಾಾಲು ಆರೋಪ ಮಾಡಿದ್ದಾರೆ.

- Advertisement -

Latest Posts

Don't Miss