Sandalwood News: ಕನ್ನಡಿಗರ ಬಗ್ಗೆ ಸೋನು ನಿಗಮ್ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸಂಗೀತ ಕಾರ್ಯಕ್ರಮವೋಂದರಲ್ಲಿ, ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದಾಗ, ಅಲ್ಲಿ ಕೆಲವರು ಕನ್ನಡ ಕನ್ನಡ ಎಂದು ಕೂಗು ಹಾಕಿದ್ದಾರೆ. ಆಗ ಸೋನು ನಿಗಮ್, ನೀವು ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ನಲ್ಲಿ ದಾಳಿ ನಡೆದಿದ್ದು ಎಂದು ಹೇಳಿ, ಕನ್ನಡಿಗರು ಪಹಲ್ಗಾಮ್ ದಾಳಿ ನಡೆಯಲು ಕಾರಣ ಅನ್ನೋ ರೀತಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಕನ್ನಡಿಗರು ಮತ್ತು ಕನ್ನಡಪರ ಸಂಘ’’ನೆ ವಿರೋಧಿಸಿತ್ತು. ಅಲ್ಲದೇ, ಈ ರೀತಿ ಹೇಳಿಕೆ ನೀಡಿದ್ದಕ್ಕೆ, ಸೋನು ವಿರುದ್ಧ ಕ್ರಮ ಕೈಗ“ಳ್ಳಬೇಕು ಎಂದು ಆಗ್ರಹಿಸಿದ್ದರು. ಇನ್ನು ಈ ರೀತಿ ಹೇಳಿಕೆ ನೀಡಿದ ಸಂಜೆಯೇ ಇನ್ಸ್’’ಾಗ್ರಾಮ್ ಅಕೌಂ’’್ ನಲ್ಲಿ ಸಮರ್ಥನೆ ನೀಡಿದ್ದ ಸೋನು, ಕನ್ನಡಿಗರು ತುಂಬ ಉತ್ತಮರು. ಆದರೆ ಅವರಲ್ಲಿ ಕೆಲವರು ಗೂಂಡಾಗಳ ರೀತಿ ವರ್ತಿಸಿದ್ದರು. ಅಂಥವರನ್ನು ಅಲ್ಲೇ ತಡೆಯಬೇಕಿದ್ದ ಕಾರಣಕ್ಕೆ ನಾನು ಆ ರೀತಿ ಹೇಳಿಕೆ ನೀಡಿದೆ ಎಂದು ಸೋನು ತಮ್ಮ ಹೇಳಿಕೆಯನ್ನು ಸಮರ್ಥಿಸಿಕ“ಂಡಿದ್ದರು.
ಆದರೆ ಕನ್ನಡ ಪರ ಸಂಘ’’ನೆಗಳು ಸೋನು ವಿರುದ್ಧ ದೂರು ನೀಡಿದ್ದು, ಸೋನು ನಿಗಮ್ಗೆ Notice ಜಾರಿ ಮಾಡಲಾಗಿದೆ. ಅಲ್ಲದೇ, ಕನ್ನಡ Cenema Industry ಯಿಂದ ಸೋನು ನಿಗಮ್ ಅವರನ್ನು ಬ್ಯಾನ್ ಮಾಡಲಾಗಿದೆ. ಇನ್ನು ಸೋನು ನಿಗಮ್ ತನ್ನ ಹೇಳಿಕೆಯನ್ನು ಸಮರ್ಥಿಸಿಕ“ಂಡಿದ್ದಾರೆ. ಆದರೆ ಅವರು ಇದುವರೆಗೂ ಕ್ಷಮೆ ಕೇಳಲಿಲ್ಲವೆಂದು ಕನ್ನಡಪರ ಸಂಘ’’ನೆ ಹೇಳಿದ್ದು, ಕನ್ನಡ ಸಿನಿಮಾ ಇಂಡಸ್’’ರಿಯ ಈ ನಡೆಯಿಂದ, ಸೋನು ನಿಗಮ್ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಸೋನು ನಿಗಮ್ ಅವರಿಗೆ ಕನ್ನಡಿಗರು ಸಾಕಷ್ಟು ಗೌರವಿಸಿದ್ದಾರೆ, ಪ್ರೀತಿ ನೀಡಿದ್ದಾರೆ. ಅಲ್ಲದೇ ಸೋನು ನಿಗಮ್ ಅವರೇ 1 ಕಾರ್ಯಕ್ರಮದಲ್ಲಿ ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎಂದೆನ್ನಿಸುತ್ತದೆ ಎಂದು ಹೇಳಿದ್ದರು. ಆದರೆ ಕಾರ್ಯಕ್ರಮವ“ಂದರಲ್ಲಿ ಅವರು ಪಹಲ್ಗಾಮ್ ಉಗ್ರ ದಾಳಿಯನ್ನು ಕನ್ನಡಿಗರ ತಪ್ಪೆನ್ನುವ ರೀತಿ ಹೋಲಿಸಿ, ಮಾತನಾಡಿದ್ದಾರೆ.