Sandalwood News: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ತಮ್ಮ 51ನೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಮೃತ ಪಟ್ಟಿದ್ದಾರೆ. 90ರ ದಶಕದಲ್ಲೇ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದ್ದ ಅಪರ್ಣಾ, ಇದುವರೆಗೂ ನಿರೂಪಕಿಯಾಗಿ ಹಲವು ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು.
ಆದರೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ಬಳಿಕ, ಕಾರ್ಯಕ್ರಮ ಕೊಡುವುದು ಅಲ್ಲದೇ, ಹಲವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಮಜಾ ಟಾಕೀಸ್ನಲ್ಲಿ ತಮ್ಮ ಮಾತಿನಿಂದ, ಜನರನ್ನು ನಗಿಸುತ್ತಿದ್ದ ಅಪರ್ಣಾ ಇಂದು ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಇವರು ಹಲವು ತಿಂಗಳಿನಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ, ಅಪರ್ಣಾ ನಿಧನರಾಗಿದ್ದಾರೆ.
ಅಪರ್ಣಾ ಚಿಕ್ಕಮಗಳೂರಿನ ಪಂಚನಹಳ್ಳಿಯವರಾಾಗಿರುವ ಅಪರ್ಣಾ, ಅಪ್ಪಟ ಕನ್ನಡ ಮಾತನಾಡುತ್ತ, ಕನ್ನಡಿಗರ ಮನ ಗೆದ್ದಿದ್ದ ಮೊದಲ ರೇಡಿಯೋ ಜಾಕಿ. ಅಲ್ಲದೇ, ಮೊದಲ ನ್ಯೂಸ್ ಆ್ಯಂಕರ್. ಹಲವು ಆ್ಯಂಕರ್ಗಳಿಗೆ ಮಾದರಿ ಅಂತಾನೇ ಹೇಳುವಂತ ಪ್ರತಿಭಾವಂತೆ.
ಎಷ್ಟೋ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ, ಅವರಿಗೆ ಒಂದು ರೂಪಾಯಿ ತೆಗೆದುಕೊಳ್ಳದೇ, ಮಾನವೀಯತೆ ಮೆರೆದಿದ್ದವರು ಅಪರ್ಣಾ. ಈಕೆ ಬರೀ ನಿರೂಪಣೆ ಮಾಡುವುದಷ್ಟೇ ಅಲ್ಲದೇ, ಮೂಡಲಮನೆ, ಮುಕ್ತ ಧಾರಾವಾಹಿಯಲ್ಲಿಯೂ ನಟಿಸಿ, ಸೈ ಎನ್ನಿಸಿಕೊಂಡಿದ್ದರು. ನಾವು ನೀವು ಪ್ರತಿದಿನ ಪ್ರಯಾಣಿಸುವ ಮೆಟ್ರೋದಲ್ಲಿ, ಎಚ್ಚರಿಕೆಯ ಸಂದೇಶ, ಬಾಗಿಲು ತೆಗೆಯುವ ಸಂದೇಶ ಕೊಡುವ ಈಕೆಯ ಧ್ವನಿ ಇನ್ನು ನೆನಪು ಮಾತ್ರ.