ಮಂಡ್ಯ: ಮಂಡ್ಯದಲ್ಲಿಂದು ಮಾತನಾಡಿದ ಮಾಜಿ ಸಚಿವ ಚೆಲುವರಾಯ ಸ್ವಾಮಿ, ಬಿಜೆಪಿ ಸರ್ಕಾರ ಇನ್ನೂ ವೆಂಟಿಲೆಟರ್ ನಲ್ಲೇ ಇದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಬ್ಬಿಗೆ ವೈಜ್ಞಾನಿಕ ಬೆಲೆಗೆ ರೈತರು ಹೋರಾಟ ಮಾಡ್ತಿದ್ದಾರೆ. ರೈತರನ್ನ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರೈತರು ಮಂಡ್ಯದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಚಿವರು ಸಿಎಂ ಜೊತೆ ಚರ್ಚಿಸಿ ರೈತರ ಬೇಡಿಕೆ ಈಡೇರಿಸುವ ಕೆಲಸ ಮಾಡಬೇಕಿತ್ತು. ರೈತರನ್ನ ಸಚಿವರು ಹಾಗೂ ಸರ್ಕಾರ ಕಡೆಗಣಿಸಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ತುಳಸಿಯನ್ನ ಹೇಗೆ ಸೇವಿಸಿದರೆ ಆರೋಗ್ಯ ಲಾಭ ಪಡೆಯಬಹುದು..?
ಅಲ್ಲದೇ, ಕಾರ್ಖಾನೆಗಳಿಗೆ ನಿಗದಿತ ಬೆಲೆ ನಿಗದಿ ಮಾಡಬೇಕು. ಸರ್ಕಾರದ ವೈಪಲ್ಯ ಎದ್ದು ಕಾಣ್ತಿದೆ. ಜನ ಪ್ರತಿನಿಧಿಗಳು ಉದಾಸೀನ ಮಾಡದೆ ಜವಾಬ್ದಾರಿಯುತ ಕೆಲಸ ಮಾಡಲಿ. ತಕ್ಷಣವೇ ರೈತರನ್ನ ಭೇಟಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ. ಮೂರು ವರ್ಷದಿಂದ ಸೈಕಲ್ ಕೊಟ್ಟಿಲ್ಲ, ಸ್ಕಾಲರ್ ಶಿಪ್ ಕೊಟ್ಟಿಲ್ಲ. ಬಿಸಿಯೂಟದ ವೇತನ 500 ಕೋಟಿ ಬಾಕಿ ಇದೆ. ಕಮಿಷನ್ ತೆಗೆದುಕೊಳ್ಳವ ಯೋಜನೆಗೆ ಮಾತ್ರ ಹಣ ಬಿಡುಗಡೆ ಮಾಡಿದೆ. ವೇತನವನ್ನ ಮಾತ್ರ ಇನ್ನೂ ಕೊಟ್ಟಿಲ್ಲ ಎಂದು ಚೆಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಸರ್ಕಾರದ ಅರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ. 1993 ರಿಂದ ಸಕ್ರಿಯ ರಾಜಕೀಯದಲ್ಲಿ ಇದ್ದೇನೆ. ಇಷ್ಟು ಕೆಟ್ಟ ಪರಿಸ್ಥಿತಿ ನೋಡಿಲ್ಲ. ರಾಜ್ಯದ ರಸ್ತೆಗಳು ಹದಗೆಟ್ಟಿವೆ, ಸರಿಪಡಿಸಿಲ್ಲ. ಅವರಿಗೆ ಬರುವ ಕಮಿಷನ್ ಮಾತ್ರ ಬರ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಲಂಚದ ಮಯವಾಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
‘ಬಿಜೆಪಿ ಹಿಂದೂತ್ವವನ್ನ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ’
ಅಲ್ಲದೇ, ಸರ್ಕಾರಿ ಕಚೇರಿಗಳಲ್ಲಿ ಲಂಚದ ತಾಂಡವವಾಡ್ತಿದೆ. ರೆವಿನ್ಯೂ ಇಲಾಖೆಯಲ್ಲಿ ಕೆಲಸಕ್ಕೆ ಲಂಚ ಕೊಡಬೇಕು. ಡಿಸಿಯವರು ಕಿವಿಗೆ ಅತ್ತಿ, ಕಣ್ಣಿಗೆ ಕನ್ನಡಕ ಹಾಕಿಕೊಂಡಿದ್ದಾರೆ. ರೆವಿನ್ಯೂ ಇಲಾಖೆಯಲ್ಲಿ 100ಕ್ಕೆ 100 ಭ್ರಷ್ಟಾಚಾರ. ಮಂಡ್ಯ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದಿದ್ದಾರೆ.
ಅಲ್ಲದೇ ಸರ್ಕಾರ ಇದ್ಯಾ ಇಲ್ವಾ? ಎಂದು ಪ್ರಶ್ನಿಸಿದ ಚೆಲುವರಾಯಸ್ವಾಮಿ, ವೆಂಟಿಲೆಟರ್ ನಲ್ಲಿದೆ ಸರ್ಕಾರ. ಕೊವಿಡ್ ನಿಂದ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ಕಬ್ಬಿನ ಬೆಲೆ, ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯ ಮಾಡಿ ಸಮಸ್ಯೆ ಬಗೆಹರಿಸಿ. 5೦ ಕೋಟಿ ಮೈಶುಗರ್ ಕಾರ್ಖಾನೆ ಜಾರಿ ಮಾಡಿದ್ದಾರೆ. ಇನ್ನೂ 20 ಕೋಟಿ ಬಾಕಿ ಇದೆ. ಸರಿಯಾದ ರೀತಿಯಲ್ಲಿ ಚಾಲನೆ ಮಾಡ್ತಿಲ್ಲ. ಮಂತ್ರಿಗಳು ಇಬ್ಬರೂ ಇದ್ದಾರೆ, ಆದ್ರೆ ಸಮಸ್ಯೆಗಳು ಅವರಿಗೆ ಕಾಣ್ತಿಲ್ಲ. ನಮ್ಮ ಪಕ್ಷದ ವತಿಯಿಂದ ನಿರಂತರವಾಗಿ ಸಮಸ್ಯೆಗಳ ವಿರುದ್ಧ ಹೋರಾಟ ಮಾಡ್ತಿದ್ದೇವೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.