Sunday, September 8, 2024

Latest Posts

‘ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ’

- Advertisement -

ಹಾಸನ : ಹಾಸನಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.  ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ರಾಹುಲ್‌ಗಾಂಧಿ ಬಳಿ ಹೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಈಶ್ವರಪ್ಪ, ಅವರೇ ಮೂರು ಜನ ವೆಂಕ, ನಾಣಿ, ಸೀನ. ಇಂತಹ ಎಷ್ಟು ಯಾತ್ರೆಯನ್ನು ನಾವು ಮಾಡಿದ್ದೀವಿ. ಲಾಲ್ ಕೃಷ್ಣ ಅಡ್ವಾನಿಯವರು ಅಯೋಧ್ಯೆ ರಥಯಾತ್ರೆ ಮಾಡಿದ್ರು, ಅದು ಯಶಸ್ವಿಯಾಯಿತು. ಆದಾದ ಮೇಲೆ ನರೇಂದ್ರಮೋದಿ, ಮುರುಳಿ ಮನೋಹರ್ ಜೋಷಿ ಅವರು ತಿರಂಗ ಯಾತ್ರೆ ಮಾಡಿದ್ರು.

ಲಾಲ್ ಚೌಕ್‌ನಲ್ಲಿ ಪಾಕಿಸ್ತಾನ ಧ್ವಜ ಹಾರುತ್ತಿತ್ತು. ಅದನ್ನು ಕಿತ್ತು ಬಿಸಾಕಿ ನಮ್ಮ ತ್ರಿವಣ ಧ್ವಜ ಹಾರಿಸಬೇಕೆಂದು ಎಷ್ಟೇ ಮನವಿ ಮಾಡಿದ್ವಿ. ನಿಮ್ಮ ತಾಯಿ ಮೊಲೆ ಹಾಲು ಕುಡಿದ ಗಂಡಸು ಯಾರಾದ್ರು ಇದ್ರೆ ತ್ರಿವರ್ಣ ಧ್ವಜ ಹಾಕಿದ್ರೆ ಹತ್ತು ಲಕ್ಷ ರೂ ಬಹುಮಾನ ಅಂತ ಅಲ್ಲಿ ಉಗ್ರಗಾಮಿಗಳು ಬೋರ್ಡ್ ಹಾಕಿದ್ರು. ಕಾಂಗ್ರೆಸ್‌ನವರು ಆ ಸವಾಲು ಸ್ವೀಕರಿಸಲಿಲ್ಲ. ಆದರೆ ಭಾರತಮಾತೆ ಬಂಜೆ ಅಲ್ಲ, ಭಾರತಮಾತೆ ಮಕ್ಕಳು ನಾವ್ಯಾರು ಷಂಡರಲ್ಲ. ಮೋದಿಯವರು, ಮುರುಳಿ ಮನೋಹರ ಜೋಷಿಯವರು ತಿರಂಗ ಯಾತ್ರೆ ಮಾಡಿ ಅಲ್ಲಿದ್ದ ಪಾಕಿಸ್ತಾನ ಧ್ವಜ ಕಿತ್ತುಹಾಕಿ, ತ್ರಿವರ್ಷ ಧ್ವಜ ಹಾರ್ಸಿದ್ರು. ನಮ್ಮ ಯಾತ್ರೆಗಳು ಒಂದು ಗುರಿ ಇಟ್ಕಂಡು ಮಾಡ್ತಿದ್ರು. ಯಡಿಯೂರಪ್ಪ ಅವರು ಎಷ್ಟು ಯಾತ್ರೆ ಮಾಡಿಲ್ಲ, ಬಡವರಿಗೆ ಸಹಾಯ ಆಗಲಿ ಅಂತ ಎಂದು ಬಿಜೆಪಿ ನಾಯಕರ ಪರ ಈಶ್ವರಪ್ಪ ಬ್ಯಾಟ್ ಬೀಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದೇನು..?

ಇನ್ನು ಕಾಂಗ್ರೆಸ್‌ ಬಗ್ಗೆ ವ್ಯಂಗ್ಯವಾಡಿದ ಈಶ್ವರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಇವರ ಗುರಿ. ತುಂಬಾ ನೊಂದು ಹೇಳುತ್ತೇನೆ ಭಾರತ ತುಂಡು ಮಾಡಿದ್ದು ಯಾರು..? ಹಿಂದೂಸ್ತಾನ, ಪಾಕಿಸ್ತಾನ ಅಂತ ಎರಡು ಭಾಗ ಮಾಡಿದ್ರು. ತುಂಡು ಮಾಡಿ ಅಧಿಕಾರವನ್ನು ನಡೆಸಿದ್ರು. ಇವತ್ತು ದೇಶದಲ್ಲಿ ಎಲ್ಲಿದೆ ಕಾಂಗ್ರೆಸ್..?

ಅಧಿಕಾರದ ಆಸೆಯಿಂದ ಕಾಂಗ್ರೆಸ್ ಹಾಳು ಮಾಡುತ್ತೀರಿ ವಿಸರ್ಜನೆ ಮಾಡಿ ಅಂತ ಅವತ್ತು ಮಹಾತ್ಮಗಾಂಧಿಜಿ ಹೇಳಿದ್ರು ಹಾಗೇ ಆಯ್ತು. ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ, ಆ ಸ್ಥಿತಿ ಬಂದಿದೆ. ಇಡೀ ದೇಶದಲ್ಲಿ ಬಿಜೆಪಿ ರಾಷ್ಟ್ರೀಯ ವಿಚಾರಗಳು, ಧರ್ಮ ರಕ್ಷಣೆ ಮಾಡುವ ವಿಚಾರ ಹೇಳಿ ಕೊಡುತ್ತಿದೆ. ಇದರಿಂದ ಬಿಜೆಪಿ ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತಿದೆ, ಕೇಂದ್ರ ರಾಜ್ಯ ನಮ್ಮ ಕೈಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

- Advertisement -

Latest Posts

Don't Miss