Saturday, October 19, 2024

Latest Posts

‘ಬಿಜೆಪಿ ಮುಖಂಡರು ಮಾನಾ ಮಾರ್ಯಾದೆ ಇಲ್ಲದೆ ಅಡಿಗಲ್ಲು ಹಾಕೋಕೆ‌ ಹೊರಟಿದ್ದಾರೆ’

- Advertisement -

ಹಾಸನ: ಹಾಸನದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಮಾತನಾಡಿದ್ದು, ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಬಿಜೆಪಿ ಮುಖಂಡರು ಮಾನಾ ಮಾರ್ಯಾದೆ ಇಲ್ಲದೆ ಅಡಿಗಲ್ಲು ಹಾಕೋಕೆ‌ ಹೊರಟಿದ್ದಾರೆ. ಸಿಎಂ ಅವರಿಗೆ ಗೊತ್ತಿದೆಯೊ ಇಲ್ಲವೊ ಗೊತ್ತಿಲ್ಲ. ಮಾಜಿ ಪ್ರಧಾನಿ ಅವರು ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕೋಕ್ಕೆ ಹೊರಟಿದ್ದಾರೆ ಎಂದಿದ್ದಾರೆ.

ಅಲ್ಲದೇ, ಹಾಸನ ಶಾಸಕ ಪ್ರೀತಂಗೌಡ ವಿರುದ್ದ ರೇವಣ್ಣ ಪರೋಕ್ಷ ವಾಗ್ದಾಳಿ ಮಾಡಿದ್ದು, ಅಡಿಗಲ್ಲು ಹಾಕಿ ಐದು ವರ್ಷ ನಿಂತಿದ್ದ ಕೆಲಸ ಮತ್ತೆ ಆರಂಭ ಆಗಿ ವರ್ಷ ಕಳೆದ ಬಳಿಕ ಅಡಿಗಲ್ಲು ಹಾಕೊಕೆ ಹೊರಟಿದ್ದಾರೆ. ಆಸ್ಪತ್ರೆ ಕೂಡ ಕೆಲಸ ಮುಗಿಯದೆ ಉದ್ಘಾಟನೆ ಮಾಡಲು ಹೊರಟಿದ್ದಾರೆ. ಮತ್ತೆ ಅವರೆ 140 ಸೀಟ್ ಗೆಲ್ತಾರಂತಲ್ಲ. ಆಗ ಅವರೇ ಉದ್ಘಾಟನೆ ಮಾಡಿಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ..

ನಾನೇ ಜಾರಿ ಮಾಡಿದ್ದ ಯೋಜನೆಗೆ ಮತ್ತೆ ಅಡಿಗಲ್ಲು ಹಾಕೊಕ್ಕೆ ಹೊರಟಿದ್ದಾರೆ.  ಹೊಸಾದು ಯಾವುದಾದ್ರು ಇದ್ರೆ ಅದಕ್ಕೆ ಅಡಿಗಲ್ಲು ಹಾಕಲಿ. ದೇವೇಗೌಡರು ಅಡಿಗಲ್ಲು ಹಾಕಿದ್ದಕ್ಕೆ ಮತ್ತೆ ಮಾಡೊದು ಏನಿದೆ..? ಹಾಗೇನಾದರೂ ಮಾಡಲು ಮುಂದಾದ್ರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತೆ. ಚುನಾವಣೆ ಇನ್ಮು ಹದಿನೈದು ದಿನ ಇದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಚೆಕ್ ಕೊಡ್ತಾ ಇದಾರೆ. ಹಳೆ ಚೆಕ್ ಅನ್ನು ಆಗ ಕೊಡದೆ ಈಗ ಕೊಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ರೇವಣ್ಣರನ್ನ ಭೇಟಿಯಾದ ಹಾಸನ ಟಿಕೇಟ್ ಆಕಾಂಕ್ಷಿ ಸ್ವರೂಪ್..

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

- Advertisement -

Latest Posts

Don't Miss