Gadag News: ಲೋಕಾಯುಕ್ತ ಬಲೆಗೆ ಬಿದ್ದ ವಕ್ಫ್ ಅಧಿಕಾರಿ

Gadag News: ಗದಗ: ವಕ್ಫ್ ಗದಗ ಜಿಲ್ಲಾ ಅಧಿಕಾರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಲಂಚ ಸ್ವೀಕರಿಸುತ್ತಿದ್ದಾರೆ ಈ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾನೆ.

ಮಸೀದಿಗೆ ಅನುದಾನ ಬಿಡುಗಡೆ ಶಿಫಾರಸ್ಸು ಪತ್ರ ರವಾನಿಸಲು, 1 ಸಾವಿರ ರೂಪಾಯಿ ಲಂಚದ ಬೇಡಿಕೆ ಇttiದ್ದು, ಹಣ ಪಡೆಯುವಾಗಲೇ ಅಧಿಕಾರಿ ರೆಹೆಮತ್‌ಉಲ್ಲಾ ಪೆಂಡಾರಿ ಲೋಕಾ ಬಲೆಗೆ ಬಿದ್ದಿದ್ದಾನೆ.

ಎಸ್.ಎ.ಮಕಾಂದಾರ್ ಎಂಬುವವರು ಮುಳಗುಂದ ಮಸೀದಿ ಅನುದಾನಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿದ್ದರು. ಇದಕ್ಕಾಗಿ ಅಧಿಕಾರಿ 1 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದ. ಹಾಗಾಗಿ ಮಕಾಂದಾರ್ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡಿದ್ದರು.

ದೂರು ನೀಡಿದ ಹಿನ್ನೆಲೆ ಲೋಕಾ ಅಧಿಕಾರಿಗಳು ರೆಡ್‌ ಹ್ಯಾಂಡ್ ಆಗಿಯೇ ಅಧಿಕಾರಿಯನ್ನ ಅರೆಸ್t ಮಾಡಿದ್ದಾರೆ. ಲೋಕಾಯುಕ್ತ ಎಸ್ ಪಿ ಹನಮಂತರಾಯ ಮಾರ್ಗದರ್ಶನದಲ್ಲಿ ರೇಡ್ ನಡೆದಿದ್ದು, ಡಿವೈಎಸ್ ಪಿ ವಿಜಯ್ ಬಿರಾದಾರ್ ತಂಡದಿಂದ ದಾಖಲೆ ಪರಿಶೀಲನೆ ನಡೆದಿದೆ.

About The Author