- Advertisement -
ಈಗಿನ ಕಾಲದಲ್ಲಿ ಏನೇ ಇದ್ದರು ಜೀವನಾಧಾರಿತ ಸಿನೆಮಾಗಳು, ಈಗಾಗಲೆ ಕ್ರಿಕೆಟಿಗರ ಜೀವನಾಧಾರಿತ ಚಿತ್ರವು ತೆರೆಕಂಡಿದೆ ಹಾಗೆ ಸದ್ಯದಲ್ಲಿ ಗಂಗೂಲಿಯವರ ಚಿತ್ರವು ತೆರೆಗೆ ಬರಲು ಸಿದ್ದವಾಗಿದೆ . ಈ ಚಿತ್ರಕ್ಕೆ ಗಂಗೂಲಿಯವರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನೂ ನಿರ್ದೇಶಕರು ಯಾರು ಎಂದು ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಗಂಗೂಲಿಯವರ ಚಿತ್ರಣವನ್ನು ಬಾಲಿವುಡ್ ನಲ್ಲಿ ರಣಭೀರ್ ಅವರೆ ಚಿತ್ರಿಸಬೇಕು ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ. ಹೀಗಾಗಿ ಸಂಜು ಚಿತ್ರದ ಬಳಿಕ ಮತ್ತೊಮ್ಮೆ ರಣಭೀರ್ ಕಪೂರ್ ಬಯೋಪಿಕ್ನಲ್ಲಿ ಬಣ್ಣ ಹಚ್ಚುವುದು ಬಹುತೇಕ ಖಚಿತ ಎನ್ನಲಾಗಿದೆ. ಒಟ್ಟಿನಲ್ಲಿ ಸೌರವ್ ಗಂಗೂಲಿ ಅವರ ದಾದಾಗಿರಿಯನ್ನು ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗುವುದಂತು ಕನ್ಫರ್ಮ್ ಆಗಿದೆ.
- Advertisement -