Friday, May 17, 2024

Latest Posts

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!

- Advertisement -

www.karnatakatv.net: ಡಿ ಬಾಸ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟಾ ಇಲ್ಲ ಹೇಳಿ, ಬಾಸ್ ಸಿನಿಮಾ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಒಂಟಿಕಾಲಿನಲ್ಲಿ ಕಾಯ್ತಾಯಿದ್ದಾರೆ. ಆದ್ರೆ ಎಲ್ಲಾ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ತಂಡ ಗುಡ್ ನ್ಯೂಸ್ ನೀಡಿದೆ.

ಹೌದು.. ಚಾಲೆಂಜಿoಗ್ ಸ್ಟಾರ್ ದರ್ಶನ್ ಅವರು ಅಭಿನಯದ ಚಿತ್ರವು ಬಂದ್ರೆ ಸಾಕು ತಿಯೆಟರ್ ಗಳು ಫುಲ್ ಆಗೋದು ಗ್ಯಾರೆಂಟಿ. ಆದ್ರೆ ಈಗ ಚಿತ್ರ ತಂಡವು ಅಕ್ಟೋಬರ್ 15 ರ ವಿಜಯದಶಮಿಯ ಶುಭ ಸಂದರ್ಭದಲ್ಲಿ ಕ್ರಾಂತಿ ಸಿನಿಮಾ ಮೂಹೂರ್ತ ನಡೆಯಲಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದ್ರು. ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿರುವ ಕ್ರಾಂತಿ ಸಿನಿಮಾ ತಮಿಳು, ತೆಲುಗು ಮತ್ತು ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗಲಿದೆ.

ಆದ್ರೆ ಈ ಹಿಂದೆ ಯಜಮಾನ ಚಿತ್ರವನ್ನ ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರು ಒಂದಾಗಿ ತಯಾರಿಸಿದ್ದರು ಅದು ಹಿಟ್ ಆಗಿತ್ತು. ಈ ತಂಡ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿದೆ. ಇತ್ತೀಚೆಗೆ ಸಿನಿಮಾ ತಂಡ ಬಹುಭಾಷೆಯ ಪೋಸ್ಟರ್ ರಿಲೀಸ್ ಮಾಡಿದ್ದು ಉತ್ತಮ ಪ್ರತಿಕ್ರಿಯೆ ನೀಡಿತ್ತು. ಸಂಗೀತ ನಿರ್ದೇಶಕ ಹರಿಕೃಷ್ಣ ನಿರ್ದೇಶಕರಾಗಿ ಪ್ರಮೋಷನ್ ಪಡೆದಿದ್ದಾರೆ. ದರ್ಶನ್ ಅವರ ಕೊನೆಯ ರಾಬರ್ಟ್ ಚಿತ್ರ ಹಿಟ್ ಆದ ನಂತರ ಕ್ರಾಂತಿ ಸಿನಿಮಾ ಘೋಷಿಸಲಾಗಿತ್ತು ಈಗ ಚಿತ್ರದ ಚಿತ್ರಿಕರಣಕ್ಕೆ ಸಿದ್ಧವಾಗುತ್ತಿದೆ.

- Advertisement -

Latest Posts

Don't Miss