Sunday, September 8, 2024

Latest Posts

ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ..

- Advertisement -

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ ಎಂದು ಶಪಥ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಧೃಡ ಮಾಡಬೇಕು. ಇಂದು ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆ ಇದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ಅವರಿಗೆಲ್ಲ ನ್ಯಾಯ ಸೀಗಬೇಕು. ಕರೋನಾ ಸಂದರ್ಭದಲ್ಲಿ ಮೋದಿ ಜೀ ತೆಗೆದುಕೊಂಡ ನಿರ್ಧಾರ ವಿಶ್ವದ ನಾಯಕರು ಮೆಚ್ಚಿದ್ದಾರೆ ಎಂದು ಗೋಪಾಲಯ್ಯ ಹೇಳಿದ್ದಾರೆ.

ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ದಾರುಣ ಸಾವು…

ಅಲ್ಲದೇ, ನಮ್ಮ ದೇಶದಲ್ಲಿ ಕೊರೊನಾ ಔಷಧಿ ಕಂಡುಹಿಡಿದ್ರು. ಉಚಿತ ಲಸಿಕೆ ಕೊಟ್ಟರು, ಬೇರೆ ರಾಷ್ಟ್ರಕ್ಕೂ ನಮ್ಮ ಪ್ರಧಾನಿ ಲಸಿಕೆ ಕೊಟ್ಟರು. ಬಡವರಿಗೆ ರಾಜ್ಯ 5 ಕೆ.ಜಿ, ಹಾಗೂ ಕೇಂದ್ರ 10 ಕೆ.ಜಿ.ಅಕ್ಕಿ ಕೊಡ್ತಿದ್ದಾರೆ. ಏಳು ತಿಂಗಳು ಕಡಲೆ ಕಾಳು ಕೊಟ್ಟಿದ್ದ ಬಿಜೆಪಿ ಸರ್ಕಾರ. ವಿರೋಧ ಪಕ್ಷದ ನಾಯಕರು 7 kg ಕೊಡ್ತಿದ್ವು ಅಂತಾರೆ,.. ನಾವು 10 ಕೆ.ಜಿ.ಅಕ್ಕಿ ಕೊಡ್ತಿದ್ದೇವೆ. ಕಾಂಗ್ರೆಸ್ ಪಕ್ಷ ರೈತರ ಹತ್ತಿರ ಯಾವತ್ತು ಬಂದಿಲ್ಲ. ರೈತರ ಹತ್ತಿರ ಬಂದು ಸಮಸ್ಯೆಗಳ ಕೇಳಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದು ಗೋಪಾಲಯ್ಯ ಹೇಳಿದ್ದಾರೆ.

ರೈತರ ಕುಟುಂಬಕ್ಕೆ 10 ಸಾವಿರ ಕೊಟ್ಟಿದ್ದೇವೆ. ಆಯುಷ್ಮಾನ್ ಕಾರ್ಡ್  ಜನರಿಗೆ ಕೊಟ್ಟಿದ್ದು ನರೇಂದ್ರ ಮೋದಿ. 30 ಲಕ್ಷ ಕುಟುಂಬಕ್ಕೆ ಉಜ್ವಲ ಯೋಜನೆಯಲ್ಲಿ ಸಿಲಿಂಡರ್ ಕೊಟ್ಟಿದ್ದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಯೋಜನೆಗಳನ್ನ ತಲುಪಿಸಿದೆ‌. ಪ್ರತಿ ಕುಟುಂಬಕ್ಕೆ ಯೋಜನೆ ತಲುಪಿದೆ. ಉಕ್ರೆನ್ ಯುದ್ದದಲ್ಲಿ ಮಂಡ್ಯದ ವಿದ್ಯಾರ್ಥಿಗಳು ಸಹ ಸಿಲುಕಿದ್ರು. ಉಕ್ರೇನ್ ನಲ್ಲಿ ವಿದ್ಯಾಬ್ಯಾಸ ಮಾಡ್ತಿದ್ದ  ಮಕ್ಕಳನ್ನ ವಾಪಸ್ಸು ಕರೆಸಿದ್ದು ಮೋದಿ ಎಂದು ಗೋಪಾಲಯ್ಯ ಹೇಳಿದ್ದಾರೆ..

ನದಿಯ ಮೇಲೆ ಆಣೆ ಮಾಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರ ದುರ್ಮರಣ..

ವಿಶ್ವದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ,ಗೌರವ ಇದೆ. ಅತೀಯಾದ ಮಳೆಯಿಂದ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿತ್ತು. ರಾಜ್ಯದ ಅಭಿವೃದ್ಧಿ ಪತಕ್ಕೆ ತಲುಪುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತೆ. ಕೆ.ಆರ್.ಪೇಟೆಯಲ್ಲಿ ಖಾತೆ ತೆರೆದಿದ್ದೇವೆ, ಮುಂದೆಯು ಸಹ 4 ರಿಂದ 5 ಖಾತೆ ತೆರೆಯುತ್ತೇವೆ. ಯಾವುದೇ ಕ್ಷೇತ್ರ ಬಿಡದೆ, ರಾಜ್ಯಾದ್ಯಂತ ಪ್ರವಾಸ ಮಾಡ್ತೇವೆ ಎಂದು ಗೋಪಾಲಯ್ಯ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss