Monday, June 2, 2025

Latest Posts

ಕಾಂಗ್ರೆಸ್ ಪಕ್ಷಕ್ಕೆ ಪ್ರೀತಂ ಗೌಡ ಬಂದ್ರೆ ನಾವು ವಿರೋಧ ಮಾಡುತ್ತೇವೆ..

- Advertisement -

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲಘುವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಬ್ಬ ಉಗ್ರಗಾಮಿ ಎಂದು ಕರೆದರು. ನಮ್ಮ ಪಕ್ಷಕ್ಕೆ ಶಾಸಕ ಪ್ರೀತಂ ಗೌಡ ಏನಾದರೂ ಬಂದ್ರೇ ಕಾಂಗ್ರೆಸ್ ಪಕ್ಷದಿಂದ ನಾವು ವಿರೋಧ ಮಾಡುವುದಾಗಿ ಹೆಚ್.ಕೆ. ಮಹೇಶ್ ಎಚ್ಚರಿಸಿದರು.

​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಿದ್ರೇ ಹಿಂದುಗಳ ಕೊಲೆ ಆಗುತ್ತದೆ. ಕಾಂಗ್ರೆಸ್ ಪಕ್ಷದ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಸಿದ್ದರಾಮಯ್ಯ ಉಲ್ಲಖಾನ್ ಎಂದು ಕರೆದಿದ್ದಾರೆ. ನಮ್ಮ ಕೆಪಿಸಿಸಿ ಅಧ್ಯಕ್ಷರನ್ನು ಕೂಡ ಸಿ.ಟಿ. ರವಿ ಅವರು ಟೀಕಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಎಎಪಿ ಪಕ್ಷದಲ್ಲಿರುವವರು ಹಿಂದುಗಳಲ್ಲ ಬಿಜೆಪಿಯಲ್ಲಿರುವವರು ಮಾತ್ರ ಹಿಂದುಗಳೂ ಎನ್ನುವ ದೃಷ್ಠಿಯಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುತ್ತಿದ್ದೀರಾ..? ಅದ್ಭುತ ಫಲಿತಾಂಶ ಈ ರೋಗಗಳು ಮಾಯ..!

ಸಿ.ಟಿ. ರವಿ, ಸಿದ್ದರಾಮಯ್ಯ ಮತ್ತು ನಾನು ರವರು ಹುಟ್ಟುವ ಮೊದಲು ಹಿಂದುಗಳು ಇರಲಿಲ್ಲವೇ? ಸಿ.ಟಿ. ರವಿ ಮತ್ತು ಬಿಜೆಪಿ ಹುಟ್ಟಿದ ಮೇಲೆ ಹಿಂದುಗಳು ಶುರುವಾಗಿದಿಯಾ! ಶಿವಮೊಗ್ಗದಲ್ಲಿ ಕೊಲೆ ಆದಾಗ ಯಾವ ಸರಕಾರವಿತ್ತು. ಮಂಗಳೂರಲ್ಲಿ ನೆಟ್ಟಾರ್ ಕೊಲೆಯಾದಗ ನಿಮ್ಮನ್ನ, ಪಕ್ಷದ ಅಧ್ಯಕ್ಷರನ್ನ ದಿಕ್ಕಾರ ಕೂಗಿದಾಗ ಯಾವ ಸರಕಾರವಿತ್ತು. ಸಿಬಿಐ ವರದಿ ಏನು ಕೊಟ್ಟಿದೆ.? ಸಿ.ಟಿ. ರವಿಗೆ ಭಾಷಣ ಮಾಡುವಾಗ ಪ್ರಜ್ಞಾ ಹೀನತೆ ಕಾಡುತ್ತಿದೆ . ಭಾಷಣಕ್ಕೆ ಎಲ್ಲಿ ಹೋದರೂ ಹಿಂದುಗಳೂ, ಯುಕವರು ಒಂದಾಗಿ ಓಟನ್ನು ಹಾಕಬೇಕು ಎನ್ನುವ ಮಾತನಾಡುವ ನಿಮಗೆ ನಾಚಿಕೆ ಮಾನ ಮರ್ಯಾದೆ ಒಂದು ಚೂರು ಇಲ್ಲದಂತಹ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಂದು ಟೀಕಿಸಿದರು.

ಈ ದೇಶದಲ್ಲಿ ಏನಾದರೂ ಜಾತಿ ಜಾತಿಗಳ ನಡುವೆ, ಯುವಕರ ನಡುವೆ ಎತ್ತಿಗಟ್ಟಿ ಹೊಡೆದಾಟ ಮಾಡಿಸುವವರು. ರಬ್ಬರ್ ಗುಂಡು ಕೊಟ್ಟು ಯುವಕರನ್ನು ಏಕೆ ತಯಾರು ಮಾಡಬೇಕು? ಈ ದೇಶದಲ್ಲಿ ಮಿಲ್ಟ್ರಿ, ಪೊಲೀಸ್ ಇಲ್ಲವೇ? ಇಷ್ಟು ವರ್ಷ ಸುರಕ್ಷಿತವಾಗಿರಲಿಲ್ಲವೇ? ನೀವು ತಯಾರು ಮಾಡುವ ಯುವಕರಿಂದ ಈ ದೇಶ ಉಳಿಯಬೇಕಾ? ಹಿಂದುತ್ವ ಎಂಬುದು ಇನ್ನು ಸಾವಿರ ವರ್ಷಗಳ ಕಾಲ ಇದ್ದೆ ಇರುತ್ತದೆ ಎಂದು ಕುಟುಕಿದ ಅವರು, ಈ ರೀತಿ ಹೇಳಿಕೆ ಕೊಡುವವರು ಮತ್ತು ಇಂತಹ ಕೆಲಸ ಮಾಡಿಸುವ ಸಿ.ಟಿ. ರವಿ ಒಬ್ಬ ಉಗ್ರಗಾಮಿ. ಪಾಕಿಸ್ತಾನದಿಂದ ಉಗ್ರರು ಬರಬೇಕಾಗಿಲ್ಲ. ಸಿ.ಟಿ. ರವಿ ಒಬ್ಬ ಉಗ್ರ ಸಂಘಟನೆಯ ಮುಖ್ಯಸ್ಥ ಎಂದು ಹೇಳಿದರೂ ತಪ್ಪಾಗಲಾರದು ಎಂದು ಕರೆದರು.

ಗರ್ಭಾವಸ್ಥೆಯಲ್ಲಿ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..!

ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವವಿದ್ದು ಎಲ್ಲಾರೂ ಒಟ್ಟಿಗೆ ಹೋಗಿ ಒಟ್ಟಿಗೆ ಬಾಳಬೇಕು. ಚುನಾವಣೆ ಹತ್ತಿರ ಬಂದಿದೆ ಎಂದು ಏನು ಬೇಕು ಆಗೆ ಹೇಳಿಕೆ ಕೊಡುತ್ತಿದ್ದಾರೆ. ನಿಮ್ಮ ಬಾಯಿಯನ್ನು ಯಾವ ಪ್ರಾಣಿ ಬಾಯಿಗೆ ಹೋಲಿಸಿದರೂ ಸಾಲದು. ಇನ್ನು ಮುಂದೆ ಎಚ್ಚೆತ್ತುಕೊಂಡು ಮಾತನಾಡಬೇಕು. ಈ ದೇಶದ ಮತ್ತು ರಾಜ್ಯದ ರಾಜಕಾರಣಿ ಆಗುವುದಕ್ಕೆ ಅನ್ಲಾಯಕ್ ಎಂದು ಸಿ.ಟಿ. ರವಿ ಹೇಳಿಕೆಯನ್ನು ಖಂಡಿಸಿದರು.

​ ​ ​ ​ ​ ​ ​ ಕಾಂಗ್ರೆಸ್ ನೂತನ ಅಧ್ಯಕ್ಷರನ್ನು ಸ್ವಾಗತ ಮಾಡುತ್ತೇವೆ. ಆದರೇ ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಪಕ್ಷದ ಮುಖಂಡರ ಭೇಟಿ ಮಾಡಲಾಗಿತ್ತು. ಆದರೇ ಅವರು ಯಾವುದೋ ಕಾರಣದಿಂದ ಉದ್ದೇಶವನ್ನಿಟ್ಟುಕೊಂಡು ಹಿಂದುಳಿದ ವರ್ಗದವರಿಗೆ ಒಂದು ಅವಕಾಶ ಕೊಡುವ ಉದ್ದೇಶದಲ್ಲಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ನಮ್ಮದೇನು ತಕರಾರಿಲ್ಲ. ಹೈಕಾಮಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ತಲೆ ಬಾಗಬೇಕು ಎಂದರು. ಕಾಂಗ್ರೆಸ್ ನೂತನ ಅಧ್ಯಕ್ಷ ಲಕ್ಷ್ಮಣ್ ಅವರನು ಬಿ. ಶಿವರಾಮ್ ಏನು ಆಯ್ಕೆ ಮಾಡಲು ಸಹಕರಿಸುವುದಕ್ಕೆ ಅವರೇನು ಜಿಲ್ಲೆಯಲ್ಲಿ ೭ಕ್ಕೆ ಏಳು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಲ್ಲ. ನಾನು ಗೆಲ್ಲಿಸಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಮ್ಮ ಮುಖದ ಮೇಲೆ ರಂಧ್ರಗಳಿದೆಯೇ..ಹಾಗಾದರೆ ಈ ಫೇಸ್ ಪ್ಯಾಕ್ ಟ್ರೈ ಮಾಡಿ..!

​ ​ ​ ​ ​ ​ ಹಾಸನ ಕ್ಷೇತ್ರದ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ ಎನ್ನುವ ಹೇಳಿಕೆ ನೀಡಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್.ಕೆ. ಮಹೇಶ್ ಅವರು, ಈ ಬಗ್ಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಕೂಡ ಮರುಕಳಿಸಿದ್ದರು. ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆ ಒಳಗೆ ನಮ್ಮ ಪಾರ್ಟಿಗೆ ಇತರೆ ಪಕ್ಷದಿಂದ ಅನೇಕರು ಬರಲಿದ್ದಾರೆ ಎನ್ನುವ ಮಾಹಿತಿ ಇದ್ದು, ಅದರಲ್ಲಿ ಶಾಸಕರಾಗಿರುವ ಪ್ರೀತಂ ಗೌಡರು ಬರುವುದಿಲ್ಲ ಎಂದು ಹೇಳುವುದಿಲ್ಲ . ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದ ಅವರು, ಏಮಾದರೂ ನಮ್ಮ ಪಕ್ಷಕ್ಕೆ ಪ್ರೀತಂ ಗೌಡ್ರು ಬಂದರೇ ಸಂಪೂರ್ಣ ವಿರೋಧ ಮಾಡುತ್ತೇವೆ ಎಂದು ಹೇಳುವ ಮೂಲಕ ಗೊಂದಲದ ಹೇಳಿಕೆ ನೀಡಿದರು.

ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆ ಮಾಡಿದ್ರೆ ಅರಕಲಗೂಡಿನಲ್ಲೂ ಕಾರ್ಯಕರ್ತರು ವಿರೋಧ ಮಾಡಿದರೂ ಮಾಡಬಹುದು, ಈಗಾಗಲೇ ವಿರೋಧವ್ಯಕ್ತವಾಗಿದೆ. ಅವರವರ ಅಭಿಪ್ರಾಯವ್ಯಕ್ತಡಿಸುವುದಕ್ಕೆ ಸ್ವಾತಂತ್ರ ಇದೆ ಎಂದು ಹೇಳಿದರು. ಈಗಾಗಲೇ ಮುಂದಿನ ಚುನಾವಣೆಗೆ ೭ ಅರ್ಜಿಗಳು ಸಲ್ಲಿಸಲಾಗಿದೆ. ನಾನು ಚುನಾವಣೆಗೆ ಸ್ಪರ್ದೆ ಮಾಡಲು ಹಿಂದೆ ಸರಿದಿರುವುದಕ್ಕೆ ಕಾರಣ ಇದೆ. ಮುಖ್ಯವಾಗಿ ನಾನು ಆರ್ಥಿಕವಾಗಿ ಬಲವಾಗಿಲ್ಲ. ಈಗ ಕೇಳುವುದು ಹಣ ಬಲದಲ್ಲಿ ಹೇಗಿದ್ದೀಯಾ ಅಂತ? ಶಾಸಕ ಪ್ರೀತಂ ಗೌಡ ಅವರು ೫೦ ಕೋಟಿ ಆಗಲಿ ನಾನು ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ. ನಾನು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದೇನೆ. ನನಗೂ ವಯಕ್ತಿಕವಾಗಿ ಅಷ್ಟೊಂದು ಹಣ ಇದ್ದಿದ್ದರೇ ಸ್ಪರ್ದೆ ಮಾಡುತ್ತಿದ್ದೇನು ಎಂದರು.

ಬೇಸಿಗೆಯಲ್ಲಿ ನಿಮ್ಮ ಮುಖವು ತನ್ನ ಹೊಳಪನ್ನು ಕಳೆದುಕೊಂಡಿದೆಯೇ..? ಆದರೆ ಈ ಆರೆಂಜ್ ಫೇಶಿಯಲ್ ನಿಮಗಾಗಿ..!

ಈಗಲು ಕೂಡ ಬಹಳಷ್ಟು ಜನರು ಸ್ಪರ್ದೆಗೆ ನಿಲ್ಲಲು ಸಲಹೆ ನೀಡುತ್ತಿದ್ದಾರೆ. ಶಾಸಕ ಪ್ರೀತಂ ಗೌಡರಾಗೆ ೪೦ ಪರ್ಸೇಂಟ್ ಕಮಿಷೆನ್ ತೆಗೆದುಕೊಂಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೇ ಅದು ನಿಜವೇ ಆಗಿದೆ. ಜೊತೆಗೆ ಎರಡು ವರ್ಷಗಳ ಕಾಲ ಅಧಿಕಾರಿಗಳ ವರ್ಗಾವಣೆ ದಂಧೆ ಮಾಡಿರುವುದು ಕೂಡ ನೂರಕ್ಕೆ ನೂರು ಸತ್ಯ. ಜೊತೆಗೆ ಹಾಸನ ತಾಲೂಕಿನಲ್ಲಿ ಒಂದೆ ಒಂದು ಗುಂಟೆ ದುರಸ್ತಿ ಆಗದ ೮೦೦ ಎಕರೆ ಭೂಮಿಯನ್ನು ಪ್ರೀತಂ ಗೌಡರು ಅವರ ಸಂಬಂಧಿಕರು ಇತರರ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ನಾನೋಬ್ಬ ದಾಸಗೌಡ ಎಂದು ಹೇಳುವ ಶಾಸಕ ಪ್ರೀಂ ಗೌಡ ಅವರು ಅಷ್ಟು ಜನರಿಗೂ ಧಮ್ಕಿ ಹಾಕಿರುವುದಾಗಿ ದೂರಿದರು.

​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಖಡಾಕಡಿ ಫೀರ್ ಸಾಹೇಬ್, ವಿನೋದ್, ರಾಮಚಂದ್ರ, ರಾಮಚಂದ್ರ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss