Saturday, June 21, 2025

Latest Posts

‘ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಂ ಗೌಡ್ರ ಕೀಳು ಮಟ್ಟದ ರಾಜಕಾರಣ’

- Advertisement -

ಹಾಸನ: ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಮ್ ಜೆ. ಗೌಡ ಅವರು ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದ್ದು, ದೇವಿಯು ಅವರಿಗೆ ಒಳ್ಳೆಯ ಬುದ್ದಿ ಮತ್ತು ಸದ್ಬುದ್ದಿ ಕೊಡಲೆಂದು ಕೇಳುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಆಕ್ರೋಶವ್ಯಕ್ತಪಡಿಸಿದರು.

​ ​ ​ ​ ​ ನಗರದ ರಿಂಗ್ ರಸ್ತೆ ಬಳಿ ಇರುವ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಸ್ಥಾನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಾಗಿದ್ದು, ಆದ್ರೆ ಹಾಸನದ ಶಾಸಕರು ಸಂಪೂರ್ಣ ಅವ್ಯವಸ್ಥೆ ಮಾಡಿದ್ದಾರೆ. ಪ್ರತಿ ವರ್ಷ ಅಮ್ಮನವರ ನೋಡಲು ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಿದ್ದು, ಕಳೆದ ಎರಡು ಮೂರು ದಿನಗಳಿಂದ ಇಲ್ಲಿನ ಸ್ಥಳೀಯ ಶಾಸಕರು ವರ್ತನೆ ಏನಿದೆ ಅದು ಅತೀರೇಕ ಇರುವುದು ಕಾಣುತ್ತಿದೆ. ಹಾಸನಾಂಬೆ ದೇವಸ್ಥಾನದಲ್ಲಿ ಮೂರನೇ ಮೂರ್ತಿ ಉದ್ಭವವಾಗಿದೆ ಎಂದು ನನ್ನ ಸ್ನೇಹಿತರು ತಮಾಷೆಯಲ್ಲಿ ಹೇಳಿದಾಗ ಯಾರೆಂದು ಕೇಳಿದೆ.

ದೇವಿ ದರ್ಶನ ಮಾಡಿದ ಸಚಿವ ಭೈರತಿ ಬಸವರಾಜು..

ಅದು ಸ್ಥಳೀಯ ಶಾಸಕರೆಂದರಲ್ಲದೇ ಗರ್ಭ ಗುಡಿ ಮುಂದೆ ನಿಂತಿದ್ದು, ದೇವರಿಗೆ ಕೈಮುಗಿಯುವುದರ ಜೊತೆಗೆ ಶಾಸಕ ಪ್ರೀತಂ ಗೌಡರಿಗೂ ಕೈಮುಗಿಯಬೇಕಾದ ಪರಿಸ್ಥಿತಿ ಹಾಸನದ ಜನತೆಗೆ ಬಂದಿದೆ. ಶಾಸಕರಿಗೆ ಘನತೆ ಗೌರವ ಏನಿದೆ ಅದನ್ನು ಮರೆತು ಬಹಳ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದರು. ಮುಂದೆ ನಡೆಯುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಶಾಸಕರು ರಾಜಕೀಯ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

​ ​ ​ ​ ನಮ್ಮ ತಂದೆ ದಿವಂಗತ ಹೆಚ್.ಎಸ್. ಪ್ರಕಾಶ್, ಅವರ ಹಿಂದೆ ಹನುಮೇಗೌಡ, ಬಿ.ವಿ. ಕರೀಗೌಡರು ಸೇರಿದಂತೆ ಹಲವಾರು ಶಾಸಕರು ಹಾಸನದಲ್ಲಿ ಸೇವೆ ಸಲ್ಲಿಸಿದ್ದಾರೆ. ಆದ್ರೆ ಪ್ರೀತಂ ಗೌಡರಾಗೆ ಕೀಳು ಮಟ್ಟದ ರಾಜಕಾರಣ ಯಾರು ಮಾಡಿರುವುದಿಲ್ಲ. ನಮ್ಮ ತಂದೆಯವರು ಇದ್ದಾಗ ಹಾಸನಾಂಬ ಜೀಣೋದ್ಧಾರ ಸಮಿತಿ ಇತ್ತು. ದಿವಂಗತ ಪ್ರಕಾಶ್ ಅಧ್ಯಕ್ಷರಾಗಿದ್ದರು. ನಗರಸಭೆ ಉಪಾಧ್ಯಕ್ಷ ಪ್ರಸನ್ನ ಕೃಷ್ಣಮೂರ್ತಿ ಉಪಾಧ್ಯಕ್ಷರಾಗಿದ್ರು. ಹಾಸನಾಂಬೆ ಬಾಗಿಲು ತೆಗೆಯುವ ಮೊದಲು ಹಲವರು ಬಾರಿ ಪೂರ್ವಭಾವಿ ಸಭೆ ಕರೆಯುತ್ತಿದ್ರು. ಈ ದೇವಸ್ಥಾನ ನಿರ್ಮಿಸಲು ಹಲವಾರು ಜನ ದಾನಿಗಳಿದ್ದಾರೆ. ಅವರ ಕುಟುಂಬಕ್ಕೆ ಪಾಸನ್ನು ಕೊಡುವ ಮೂಲಕ ನೆನಪಿಸಿಕೊಳ್ಳಬೇಕು ಎಂದರು.

ಹಾಸನಾಂಬೆಯ ದರ್ಶನದ ವೇಳೆ ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡ ಭಕ್ತರು..

ಹಾಸನದ ಶಾಸಕರು ಮತ್ತು ಉಸ್ತುವಾರಿ ಸಚಿವರು ಕೇವಲ ಬೆಂಗಳೂರು ಕಡೆ ಬೇಕಾದವರಿಗೆ ವಿಐಪಿ ಪಾಸನ್ನು ಕೊಡುತ್ತಿದ್ದಾರೆ ಎಂದು ದೂರಿದರು. ೩೦೦ ರೂ ಟಿಕೆಟ್ ಪಾಸಲ್ಲಿ ಹೋದ್ರೆ ಒಂದುಕಾಲ್ ಗಂಟೆಯಲ್ಲಿ ದೇವರ ದರ್ಶನ ಮಾಡಬಹುದು ಆದ್ರೆ ವಿಐಪಿ ಪಾಸ್ನಲ್ಲಿ ಒಳಗೆ ಹೋಗ ಬೇಕಾದ್ರೆ ಎರಡು ಕಾಲ್ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ದೇವರ ದರ್ಶನದ ಪಾಸನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ. ಜಿಲ್ಲಾಡಳಿತವು ಅಚ್ಚುಕಟ್ಟಾಗಿ ಮಾಡಲಾಗಿದ್ದರೂ ಶಾಸಕ ಪ್ರೀತಮ್ ಜೆ. ಗೌಡ ಮತ್ತು ಅವರ ಹಿಂಬಾಲಕರು ೫೦ ಜನರು ಒಂದೊಂದು ಗೇಟಿನಲ್ಲಿ ಹತ್ತತ್ತು ಜನ ನಿಂತುಕೊಂಡು ಅವರಿಗೆ ಬೇಕಾದವರನ್ನು ಬಿಡುವ ಕೆಲಸ ಮಾಡುತ್ತಿದ್ದಾರೆ.

ಇಂತಹ ಕೀಳು ಮಟ್ಟದ ರಾಜಕಾರಣವನ್ನು ಹಾಸನಾಂಬ ದೇವಾಲಯಕ್ಕೆ ತಂದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಹಾಸನಾಂಬೆ ದೇವಿ ಅವರಿಗೆ ಒಳ್ಳೆಯ ಬುದ್ದಿ ಮತ್ತು ಸದ್ಬುದ್ದಿ ಕೊಡಲಿ ಎಂದು ಕೇಳುತ್ತೇನೆ ಎಂದರು. ಹಾಸನಾಂಬೆ ಬಾಗಿಲು ಮುಚ್ಚಲು ಇನ್ನು ಎರಡು ಮೂರು ದಿನಗಳಿದ್ದು, ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಕೊಡಲಿ. ಈಗಾಗಲೇ ಬಂದ ಭಕ್ತಾಧಿಗಳು ಅಸಮಧಾನದಿಂದ ಬೈದುಕೊಂಡು ಹೋಗುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.​

​ ​ ​ ​ ಬಿಜೆಪಿ ಪಕ್ಷದ ಶಾಸಕರಾಧ ನಾಗೇಂದ್ರ ಅವರು ಹಾಸನಾಂಬೆಗೆ ಬಂದು ದೌಲತ್ತು ಎನ್ನುವ ಪದ ಬಳಕೆ ಮಾಡಿ ಶಾಸಕರ ವಿರುದ್ಧವೇ ಹರಿಹಾಯ್ದು ವಾಪಸ್ ಹೋಗಿದ್ದರು. ಇನ್ನು ದುದ್ದ ಭಾಗದ ವ್ಯಕ್ತಿ ಓರ್ವರು ಹಾಸನಾಂಬೆ ದೇವಾಲಯದಲ್ಲಿಯೇ ಬಿಪಿಯಲ್ಲಿ ಏರು ಪೇರಾಗಿ ಹೃದಯಘಾತವಾಗಿ ತೀರಿಕೊಂಡಿದ್ದು, ಮೂಲ ದೇವರ ಪೂಜೆ ಮಾಡುವ ಪಾಜಾರಿಗಳನ್ನು ಕೂಡ ದೇವಾಲಯಕ್ಕೆ ಹೋಗಲು ಬಿಡದಿರುವ ಪರಿಸ್ಥಿತಿ ಬಂದಿದೆ. ನಗರಸಭಾ ಸದಸ್ಯರಿಗೂ ಪಾಸ್ ಸರಿಯಾಗಿ ನೀಡದೇ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

​ ​ ​ ​ ​ ​ ಕನ್ನಡದ ಭಾಷೆ ಉಳಿಸುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮನೆ ಮನೆಗೆ ಕನ್ನಡ ಬಾವುಟ ನೀಡುವ ಕಾರ್ಯಕ್ರಮವನ್ನು ನವೆಂಬರ್ ೧ ರಂದು ಹಮ್ಮಿಕೊಳ್ಳಲಾಗಿದ್ದು, ೧೦ ಸಾವಿರ ಬಾವುಟವನ್ನು ಸ್ನೇಹಿತರೊಂದಿಗೆ ಸೇರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲಾಗುವುದು ಎಂದರು. ನವೆಂಬರ್ ೨೨ ರಂದು ಪಂಚರತ್ನ ಯಾತ್ರೆ ಜರುಗಲಿದೆ. ಜೊತೆಗೆ ಗ್ರಾಮ ವಾಸ್ತಾವ್ಯ ಮಾಡಲಿದ್ದಾರೆ ಎಂದು ಹೇಳಿದರು.

​ ​ ​ ​ ​ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಗಿಲೆ ಮೋಹನ್, ಶಿವಣ್ಣ, ಮಹೇಶ್, ಗಿರೀಶ್ ಶ್ರೇಯಾಸ್ ಇತರರು ಉಪಸ್ಥಿತರಿದ್ದರು.

 

- Advertisement -

Latest Posts

Don't Miss