Friday, October 18, 2024

Latest Posts

ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದ ಹಂಸಲೇಖ

- Advertisement -
ಮೈಸೂರಿನಲ್ಲಿ ಕೆಲದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ , ಮೇಲ್ಜಾತಿ ,ಕೀಳುಜಾತಿ , ಜಾತಿ ತಾರತಮ್ಯ ವಿಚಾರವಾಗಿ ಮಾತನಾಡುತ್ತದ್ದಾಗ ಅವಹೇಳನಕಾರಿ ಹೇಳಿಕೆ ಬಳಸಿದ್ದು  ಅದೇನೆಂದರೆ ಪೇಜಾವರ ಶ್ರೀಗಳ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ್ದರು . ಈ ವಿಷಯ ಬಾರಿ ವಿವಾದ  ಹುಟ್ಟುಹಾಕಿತ್ತು 

ಹಂಸಲೇಖ ಹೇಳಿಕೆಯನ್ನು ರಾಜ್ಯಾದ್ಯಂತ ಹಲವಾರು ಜನರು ಖಂಡಿಸಿದ್ದರು , ಇನ್ನೂ ಕೆಲವರು ಹಂಸಲೇಖ ರವರಿಗೆ ಕ್ಷಮೆ ಕೇಳಬೇಕೆಂದು ಹೇಳಿದ್ದರು, ಇದಕ್ಕೆ ಹಂಸಲೇಖ ಕ್ಷಮೆಯನ್ನು ಕೇಳಿದ್ದರು , ಇನ್ನೂ ಕೆಲವು ಮಂದಿ ಹಂಸಲೇಕ ರವರ ಮೇಲೆ ದೂರನ್ನ ಸಹ ದಾಖಲಿಸಿದ್ದರು .ಇಂದು ಹಂಸಲೇಖರವರನ್ನು ಬಸವನಗುಡಿ ಠಾಣೆ ಪೋಲಿಸರು ಗುರುವಾರ ವಿಚಾರಣೆಗೆ ಒಳಪಡಿಸಿದರು .ಈ ವೇಳೆ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡು ಬೇಸರ ವ್ಯಕ್ತಪಡಿಸಿದರು . ಜೊತೆಗೆ ತನಿಕಾಧಿಕಾರಿ ಮುಂದೆ ಕಣ್ಣೀರು ಹಾಕಿದರು
ಎಂದು ಮೂಲಗಳು ತಿಳಿಸಿವೆ . ನಾನು ಏಕೆ ಹಾಗೆ ಹೇಳಿದೆನೋ ಗೊತ್ತಿಲ್ಲ ,ನನಗೆ ಅಂತಹ ಯಾವುದೇ ಉದ್ದೇಶವೂ ಇರಲಿಲ್ಲ ,ಮಾತಿನ ಬರದಲ್ಲಿ ಹಾಗೆ ಹೇಳಿದೆ . ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ದಾರೆ .ಯಾವುದೇ ಜಾತಿಯನ್ನು ನಿಂದಿಸುವ ಉದ್ದೇಶ ನನ್ನದಲ್ಲ , ನಾನು ತುಂಬಾ ನೋವು ಅನುಭವಿಸುತ್ತದ್ದೇನೆ ಎಂದು ಅವರು ಹೇಳಿದ್ದಾರೆ .

- Advertisement -

Latest Posts

Don't Miss