Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು ತಿಳಿದುಕ“ಂಡಿದ್ದ ಪರಿಚಯಸ್ಥರೇ, ಮನೆಗೆ ಬಂದು, ಗೃಹಿಣಿಯನ್ನು ಹತ್ಯೆ ಮಾಡಿ, ಚಿನ್ನ ದೋಚಿ ಪರಾರಿಯಾಗಿದ್ದ ಸುದ್ದಿ ನಾವು ಕೇಳಿದ್ದೆವು. ಇದೀಗ ಇಂಥದ್ದೇ ಇನ್ನ“ಂದು ಘಟನೆ ಹಾಾಸನದಲ್ಲಿ ನಡೆದಿದ್ದು, ಹಣ, ಚಿನ್ನಾಭರಣಕ್ಕಾಗಿ ಕೆಲಸ ನೀಡಿದ ಮಾಲೀಕನನ್ನೇ ಯುವಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ನಗರದ ಸುಬ್ರಹ್ಮಣ್ಯನಗರ ಬಡಾವಣೆ ನಿವಾಸಿ ವಿಜಯ್ ಕುಮಾರ್(46) ಎನ್ನುವವರನ್ನು ಕಾರ್ಮಿಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಹತ್ಯೆಯ ಆರೋಪಿಗಳಾಗಿದ್ದಾರೆ.
ವಿಕ್ರಂಗೆ ವಿಜಯ್ ಕುಮಾರ್ ಧರಿಸುತ್ತಿದ್ದ ಚಿನ್ನ, ಹಣದ ಮೇಲೆ ಕಣ್ಣಿತ್ತು. ಅದನ್ನು ಕದಿಯಬೇಕೆಂದು ಪ್ಲಾನ್ ಮಾಡಿದ್ದ ವಿಕ್ರಂ ತನ್ನ ಪತ್ನಿ ಮಕ್ಕಳನ್ನು ತವರಿಗೆ ಬಿಟ್ಟು, ಸಚಿನ್ ಎಂಬಾಾತನ ಜತೆ ಸೇರಿ, ಈ ಕೃತ್ಯವೆಸಗಲು ಪ್ಲಾನ್ ಮಾಡಿದ್ದಾನೆ.
ಅರಸೀಕೆರೆ ಪಟ್ಟಣದ ಕೆಎಸ್ಆರ್ಟಿಸಿ ಡಿಪೋ ಮುಂಭಾಗದಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ನನ್ನು ಕರೆಯಿಸಿ, ಪ್ಲಾನ್ ಮಾಡಿ ಹತ್ಯೆ ಮಾಡಲಾಗಿದೆ. ವಿಕ್ರಂ ವಿಜಯ್ ಕುಮಾರ್ಗೆ ಕಾಲ್ ಮಾಡಿ, ಸಚಿನ್ ನನ್ನ ಮೇಲೆ ಹಲ್ಲೆಮಾಡುತ್ತಿದ್ದಾನೆ ಎಂದು ಕರೆ ಮಾಡಿದ್ದಾನೆ.
ಏಕಾಏಕಿ ಏನಾಯ್ತು ಅನ್ನೋ ಟೆನ್ಶನ್ನಲ್ಲಿ ವಿಜಯ್ ಕುಮಾರ್ ಶಿವಮೊಗ್ಗ- ಬೆಂಗಳೂರು ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿದ್ದ ಶ್ರೀನಿವಾಸ್ ಎಂಬುವವರ ಮನೆಕೆಲಸವನ್ನು ಬಿಟ್ಟು ಅರಸೀಕೆರೆಗೆ ಬಂದಿದ್ದಾರೆ. ಆದರೆ ಮರಳಿ ವಿಜಯ್ ಕುಮಾರ್ ಕಾಲ್ ಬಾರದೇ ಇದ್ದಾಗ, ಕಾಲ್ ಮಾಡಿದರೂ ರಿಸೀವ್ ಮಾಡದ ಕಾರಣ, ಶ್ರೀನಿವಾಸ್ ಅವರ ಮನೆ ಬಳಿಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿಸಿದ್ದಾರೆ. ಆಗ ಆ ಇಬ್ಬರು ಕಾರ್ಮಿಕರು ಬೈಕ್ ಹತ್ತಿ ಎಸ್ಕೇಪ್ ಆಗುತ್ತಿರುವ ದೃಶ್ಯ ಕಂಡುಬಂದಿದೆ.
ಇದರಿಂದ ಆತಂಕಗ“ಂಡ ಶ್ರೀನಿವಾಸ್ ವಿಜಯ್ ಕುಮಾರ್ ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಕುಮಾರ್ ಹತ್ಯೆ ಮಾಡಲಾಗಿದೆ. ಕೂಡಲೇ ಶ್ರೀನಿವಾಸ್ ಸ್ಥಳೀಯ ಪೋಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳು ವಿಜಯ್ ಕುಮಾರ್ ಮೇಲಿನ ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಅಲ್ಲದೇ, ವಿಜಯ್ ಕುಮಾರ್ ಬೆರಳಲ್ಲಿದ್ದ ಉಂಗುರ ತೆಗೆಯಲು ಬಾರದೇ, ಬೆರಳನ್ನೇ ಕತ್ತರಿಸಿದ್ದಾರೆ. ಸದ್ಯ ದೂರು ದಾಖಲಿಸಿರುವ ಪೋಲೀಸರು, ಈ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.